ಒಡೆಯರ್‌ರದ್ದು ದೂರದೃಷ್ಟಿಯ ಆಡಳಿತ: ವೈಶಾಲಿ

ಮೀಸಲಾತಿ ಒಡೆಯರು ಬೆಳಗಿದ ಹಣತೆ

Team Udayavani, Aug 25, 2019, 3:37 PM IST

25-Agust-31

ಶಿವಮೊಗ್ಗ: ಒಡೆಯರ್‌ ಬೆಳಗಿಸದ ಹಣತೆ ಕಾರ್ಯಕ್ರಮವನ್ನು ಜಿಪಂ ಸಿಇಒ ಎಂ.ಎಲ್. ವೈಶಾಲಿ ಉದ್ಘಾಟಿಸಿದರು.

ಶಿವಮೊಗ್ಗ: ಅವಕಾಶ ವಂಚಿತರನ್ನು ಕೈಹಿಡಿದು ಮೇಲೆತ್ತುವ ಸಲುವಾಗಿ ಮೀಸಲಾತಿ ಜಾರಿಗೆ ಬಂತು. ಶಿಕ್ಷಣ ಮೀಸಲಾತಿಯಿಲ್ಲದೇ ಉಳಿದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದು ಎನ್ನುವ ದೂರದೃಷ್ಟಿಯಿಂದ ಕೆ. ಎಚ್. ರಾಮಯ್ಯ ಅವರು ಸೇರಿದಂತೆ ಹಲವರು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ ಅವರ ಗಮನಕ್ಕೆ ತಂದು ಮೀಸಲಾತಿಯ ಸೌಲಭ್ಯ ನೀಡುವಲ್ಲಿ ಯಶಸ್ವಿಯಾಗಿದ್ದರಿಂದ ಇವತ್ತು ಅವರನ್ನು ಸ್ಮರಣೆ ಮಾಡಿಕೊಳ್ಳುತ್ತಿದ್ದೇವೆ ಎಂದು ಜಿಪಂ ನೂತನ ಸಿಇಒ ಎಂ.ಎಲ್. ವೈಶಾಲಿ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಹಕಾರದಲ್ಲಿ ಶುಕ್ರವಾರ ನಗರದ ಡಿ. ದೇವರಾಜ ಅರಸು ಸಭಾಂಗಣದಲ್ಲಿ ‘ಮೀಸಲಾತಿ : ಒಡೆಯರು ಬೆಳಗಿದ ಹಣತೆ, ನೂರರ ನೆನಪು-ಸ್ಮರಣೆ’ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಾತು ಮಂಥನದಲ್ಲಿ ಭಾಗವಹಿಸಿದ್ದ ಸಾಹಿತಿ- ಚಿಂತಕ- ಪ್ರಾಧ್ಯಾಪಕ ಡಾ|ಸಿರಾಜ್‌ ಅಹಮದ್‌ ಅವರು ಕರ್ನಾಟಕದ ಶೈಕ್ಷಣಿಕ ಮಟ್ಟದ ಜ್ಞಾನವನ್ನು ಭಾರತದ ಉಳಿದ ಯಾವುದೇ ರಾಜ್ಯದ ಶೈಕ್ಷಣಿಕ ಗುಣಮಟ್ಟಕ್ಕೆ ಹೋಲಿಸಿದರೆ ಕರ್ನಾಟಕದ ಶೈಕ್ಷಣಿಕ ಮಟ್ಟ ಮೇಲಿದೆ. ಅದಕ್ಕೆ ಭದ್ರ್ರವಾದ ಅಡಿಪಾಯ ಹಾಕಿದವರು ಮೈಸೂರು ಅರಸು ಮನೆತನದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ ಎಂಬುದನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕೆಂದು ವಿವರಿಸಿದರು.

ಮೀಸಲಾತಿ ಎಂದಾಕ್ಷಣ ಚರ್ಚೆಗಳು ಕಾವೇರುತ್ತವೆ. ಪರ- ವಿರೋಧದ ಮಾತುಗಳು ಕೇಳಿಬರುತ್ತವೆ. ಆ ಎಲ್ಲಾ ಸಂದರ್ಭಗಳನ್ನು ಪ್ರಜಾಸತಾತ್ಮಕವಾಗಿ ಕಾರ್ಯರೂಪಕ್ಕೆ ತಂದು ಪ್ರಜೆಗಳ ಹಿತಚಿಂತನೆ ಮಾಡಿದ ಕೆಲವೇ ಕಲವರಲ್ಲಿ ಒಡೆಯರ್‌ ಒಬ್ಬರು ಎಂದು ಸ್ಮರಿಸಿದರು. ಅವರು ತಂದ ಸುಧಾರಣೆಯಿಂದ ಎಲ್ಲಾ ಅವಕಾಶಗಳು 3.6 ರಷ್ಟಿದ್ದ ಜನರಿಗೆ ಮೀಸಲಾಗಿದ್ದನ್ನು ಹೊರತುಪಡಿಸಿ ಉಳಿದ ಎಲ್ಲಾ ಜನಸಮೂಹವನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ಯಶಸ್ವಿಯಾಯಿತು ಎಂದರು.

1917 ರ ಫೆಬ್ರವರಿಯಲ್ಲಿ ಮಹಾರಾಜರಿಗೆ ಮನವಿ ಮಾಡಿ, ಹಿಂದುಳಿದ ಎಲ್ಲಾ ಸಮುದಾಯಕ್ಕೂ ಶೈಕ್ಷಣಿಕ, ಉದ್ಯೋಗ ಸೇರಿದಂತೆ ಎಲ್ಲಾ ವಿಚಾರದಲ್ಲೂ ಮೀಸಲು ಬೇಕು ಎನ್ನುವ ಮನವಿಪತ್ರ ನೀಡಲಾಗುತ್ತದೆ. ಅದರ ಹಿಂದೆ ಕೆ. ಎಚ್. ರಾಮಯ್ಯ , ಎಚ್. ಚನ್ನಯ್ಯ ಸೇರಿದಂತೆ ಕೆಲವರ ಪ್ರಯತ್ನವಿತ್ತು. ಮನವಿ ಸ್ವೀಕರಿಸಿದ ಮಾಹಾರಾಜರು ಮಿಲ್ಲರ್‌ ಸಮಿತಿಯನ್ನು ನೇಮಿಸುತ್ತಾರೆ. ಅವರು ಅಧ್ಯಯನ ಮಾಡಿ ವರದಿ ನೀಡುತ್ತಾರೆ. ವರದಿ ಬಗ್ಗೆ ಪರ ವಿರೋಧದ ಚರ್ಚೆ ನಡೆಯುತ್ತದೆ. ಆಗ ಪ್ರಜಾಪ್ರತಿನಿಧಿ ಸಭೆಗೆ ವರದಿಯ ಅಭಿಪ್ರಾಯ ಕೇಳುತ್ತಾರೆ. ನಂತರ 1918ರ ಆ. 23 ರಂದು ಮೀಸಲಾತಿಯ ಹಕ್ಕ‌ನು ಜಾರಿಗೆ ತಂದು ಅನೇಕರಿಗೆ ದಾರಿದೀಪವಾದರು ಎಂದು ಡಾ| ಸಿರಾಜ್‌ ಅಹಮದ್‌ ವಿವರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾಧಿಕಾರಿ ಶಂಕರ್‌ ಗುರು ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಡಿ. ಗಣೇಶ್‌ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಯುವರಾಜ್‌, ಕುಮಾರಿ ಕೆ. ಜಿ. ಅರ್ಪಿತಾ ಅವರು ಹಾಡುಗಳನ್ನು ಹಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಎಂ. ಸ್ವಾಮಿ ವಂದಿಸಿದರು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.