ಕುಸಿಯುತ್ತಿದೆ ನೈತಿಕ ಮೌಲ್ಯ: ಬಿ.ಎಲ್‌. ಶಂಕರ್‌


Team Udayavani, Nov 25, 2019, 4:33 PM IST

25-November-21

ಶಿವಮೊಗ್ಗ: “ಪ್ರಸ್ತುತ ಸನ್ನಿವೇಶದಲ್ಲಿ ಯಾವ ಪಕ್ಷಗಳಲ್ಲೂ ಮಾದರಿ ನಾಯಕರು ಕಾಣುತ್ತಿಲ್ಲ. ರಾಜಕಾರಣ, ಮಾಧ್ಯಮ, ಸಮಾಜದಲ್ಲೂ ನೈತಿಕ ಮೌಲ್ಯಗಳು ಕುಸಿದಿವೆ’ ಎಂದು ಹಿರಿಯ ರಾಜಕಾರಣಿ ಬಿ.ಎಲ್‌. ಶಂಕರ್‌ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಸಂಘ ಶನಿವಾರ ಆಯೋಜಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ “ನನ್ನ ಕಲ್ಪನೆಯ ರಾಜಕೀಯ ಪ್ರಾತಿನಿಧ್ಯ’ ವಿಷಯ ಕುರಿತು ಅವರು ಮಾತನಾಡಿದರು. “ರಾಜಕಾರಣದಲ್ಲಿ ಇಂದು ಜಾತಿ ಭೂತ ವಿಜೃಂಭಿಸುತ್ತಿದೆ. ಹಣಕ್ಕೆ ಮಹತ್ವ ನೀಡಲಾಗುತ್ತಿದೆ. ಟಿಕೆಟ್‌, ಕ್ಯಾಬಿನೆಟ್‌ ಪ್ರಾತಿನಿಧ್ಯವೂ ಜಾತಿ ಆಧಾರದಲ್ಲೇ ನಿರ್ಧರಿತವಾಗುತ್ತಿದೆ. ಒಂದು ಜಾತಿಯ ಮುಖಂಡನಿಗೆ ರಾಜಕೀಯ ಪ್ರಾತಿನಿಧ್ಯ ದೊರೆತರೆ ಲಾಭವಾಗುವುದು ಎರಡು ಗುಂಪುಗಳಿಗೆ. ಒಂದು ಆ ವ್ಯಕ್ತಿಯ ಕುಟುಂಬಕ್ಕೆ, ಮೊತ್ತೂಂದು ಅವರ ಜಾತಿಯ ಭ್ರಷ್ಟ ಅಧಿಕಾರಿಗಳಿಗೆ. ಆಯಕಟ್ಟಿನ ಸ್ಥಾನ ಅವರಿಗೆ ಬಳುವಳಿ’ ಎಂದು ವಿಶ್ಲೇಷಿಸಿದರು.

“ಜನಪ್ರತಿನಿಧಿಗಳಲ್ಲೂ ಮೌಲ್ಯಗಳು ಕುಸಿದಿವೆ. ಶಾಸನಸಭೆಯಲ್ಲೇ ಏಕ ವಚನ ಬಳಕೆ, ಬಟ್ಟೆ ಹರಿದುಕೊಳ್ಳುವುದು, ಹೊಡೆದಾಡುವುದು. ಅಸಹ್ಯಕರವಾಗಿ ನಡೆದುಕೊಳ್ಳುವ ಪರಿಪಾಠ ಬೆಳೆದಿದೆ. ಅವರನ್ನು ಎಚ್ಚರಿಸಬೇಕಾದ ಮಾಧ್ಯಮಗಳೂ ಹಾದಿ ತಪ್ಪಿವೆ. ಸಾಮಾಜಿಕ ಮೌಲ್ಯಗಳಿಗಿಂತ ಟಿಆರ್‌ಪಿ ಮಹತ್ವ ಪಡೆದಿದೆ. ಹಿಂಸೆ, ಜಗಳ, ರಾಜಕಾರಣದ ಕೆಸರೆರೆಚಾಟ, ಸೆಲೆಬ್ರಿಟಿಗಳ ಹಿಂದೆ ಬಿದ್ದಿರುವ ಮಾಧ್ಯಮಗಳು ನವಿರು ಕಾರ್ಯಕ್ರಮಗಳಿಗೆ ತಿಲಾಂಜಲಿ ನೀಡಿವೆ. ಸಾವಿನ ಸುದ್ದಿಗಳ ಪ್ರಸಾರದಲ್ಲೂ ತಾರತಮ್ಯ ಮಾಡುತ್ತವೆ’ ಎಂದು ಟೀಕಿಸಿದರು.

“ಸ್ವಾತಂತ್ರ್ಯ ಚಳವಳಿಯ ಜತೆಗೇ ಬೆಳೆದು ಬಂದ ನಮ್ಮ ಸಂಸದೀಯ ಪರಂಪರೆ ಒಂದು ಕಾಲದಲ್ಲಿ ಜಗತ್ತಿಗೇ ಮಾದರಿಯಾಗಿತ್ತು. ಗಾಂಧೀಜಿ ಮಾನವೀಯತೆ ಪ್ರತಿನಿಧಿಸುವ ವಿಶ್ವನಾಯಕರಾಗಿ ಬೆಳೆದರು. ಚೀನಾದಂತಹ ಭಾರತ ವಿರೋಧಿ ದೇಶದಲ್ಲೂ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿಯವರೆಗೆ ಗಾಂಧಿ ಚರಿತ್ರೆಯ ಪಠ್ಯಗಳನ್ನು ಅಳವಡಿಸಲಾಗಿದೆ. ಪ್ರಪಂಚದ 260 ವಿಶ್ವವಿದ್ಯಾಲಯಗಳಲ್ಲಿ ಗಾಂಧಿ ಅಧ್ಯಯನ ಕೇಂದ್ರಗಳಿವೆ. ವಿಶ್ವದ ಎಲ್ಲ ಭಾಷೆಗಳಲ್ಲೂ ಅವರ ಕುರಿತು ಬರಹಗಳು ಪ್ರಕಟಗೊಂಡಿವೆ. ಅಂತಹ ನಾಯಕರ ಪರಂಪರೆ ದೇಶಕ್ಕೆ ಘನತೆ ತಂದುಕೊಟ್ಟಿದೆ’ ಎಂದು ಬಣ್ಣಿಸಿದರು.

ಸ್ವಾತಂತ್ರ್ಯಾ ನಂತರ ನೆಹರು, ರಾಮಮನೋಹರ ಲೋಹಿಯಾ, ಜಯಪ್ರಕಾಶ್‌ ನಾರಾಯಣ್‌ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದರು. ನೆಹರೂ ಅವರಿಗೆ ಸಂಸತ್‌ ನಲ್ಲಿ ಭಾರೀ ಬಹುಮತವಿದ್ದರೂ ವಿರೋಧ ಪಕ್ಷದ ನಾಯಕರ ಮಾತಿಗೆ ಮನ್ನಣೆ ನೀಡುತ್ತಿದ್ದರು. ವಾಜಪೇಯಿ ಅವರನ್ನು ಮುಂದಿನ ಪ್ರಧಾನಿ ಎಂದು ಬಣ್ಣಿಸಿದ್ದರು. ಅಳಿಯ ಫಿರೋಜ್‌ ಗಾಂಧಿ  ಖಾಸಗಿ ವಿಮಾ ಕಂಪನಿಗಳ ಭ್ರಷ್ಟಾಚಾರ ಬಯಲಿಗೆ ಎಳೆದರು. ಅವರು ಮಂಡಿಸಿದ ವಿಮಾ ಕಂಪನಿಗಳ ರಾಷ್ಟ್ರೀಕರಣ ಮಸೂದೆಗೆ ನೆಹರೂ ಅಂಗೀಕಾರ ನೀಡಿದರು ಎಂದು ಇತಿಹಾಸ ಮೆಲುಕು ಹಾಕಿದರು.

ಮುಂದೆ ವಾಯಪೇಯಿ, ಮನಮೋಹನ್‌ ಸಿಂಗ್‌ ಸರಳತೆ, ಪಾರದರ್ಶಕತೆಗೆ ಮಾದರಿಯಾಗಿದ್ದರು. ವಿರೋಧ ಪಕ್ಷಗಳನ್ನು ವಾಜಪೇಯಿ ಎಂದೂ ಕಡೆಗಣಿಸಲಿಲ್ಲ. ಮನಮೋಹನ್‌ ಸಿಂಗ್‌ ರಾಜಕೀಯ ನಿರ್ಧಾರಗಳ ಕುರಿತು ಟೀಕೆಗಳಿದ್ದರೂ, ಆರ್ಥಿಕ ಚಿಂತಕರಾಗಿ ಅವರು ಭಾರತದ ಆರ್ಥಿಕತೆ ತಮ್ಮದೇ ಕೊಡುಗೆ ನೀಡಿದರು.

ಇಂದು ಅಂತಹ ಪರಂಪರೆ ನಾಶವಾಗುತ್ತಿದೆ. ವಿರೋಧ ಪಕ್ಷಗಳ ಅಗತ್ಯವೇ ಇಲ್ಲ ಎಂಬಂತೆ ನಡೆದುಕೊಳ್ಳಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಎಂದು ಎಚ್ಚರಿಸಿದರು. ಸಂಘದ ಅಧ್ಯಕ್ಷ ಕೆ. ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಚ್‌.ಎಸ್‌. ನಾಗಭೂಷಣ, ಡಾ| ವೆಂಕಟೇಶ್‌ ಇದ್ದರು.

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.