ಮತ ಮೊಗ್ಗ
ಬೆಳಗ್ಗೆಯಿಂದಲೇ ಉತ್ಸಾಹದಿಂದ ಪಾಲ್ಗೊಂಡ ಮತದಾರರು •ಬಿಸಿಲಿನ ಝಳಕ್ಕೆ ಸುಸ್ತಾದ ಅಧಿಕಾರಿಗಳು- ಮತದಾರರು
Team Udayavani, Apr 24, 2019, 1:23 PM IST
ಸೊರಬ: ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಕುಬಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಶಿವಮೊಗ್ಗ: ಕಮಲ- ದಳದ ನಡುವೆ ಗೆಲ್ಲಲು ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿದ್ದರೆ ಇತ್ತ ಮತದಾರ ಕೂಡ ಮತೋತ್ಸಾಹ ತೋರಿದ್ದಾನೆ.
ಬೆಳಗ್ಗೆ 7ರಿಂದಲೇ ಉತ್ಸಾಹದಿಂದ ಪಾಲ್ಗೊಂಡಿದ್ದ ಮತದಾರರು ಮಧ್ಯಾಹ್ನದ ವೇಳೆಗೆ ಸುಸ್ತಾದಂತೆ ಕಂಡು ಬಂದರು. ಸಂಜೆ ನಾಲ್ಕರ ನಂತರ ಮತ್ತೆ ಅತ್ಯುತ್ಸಾಹದಿಂದ ಮತ ಚಲಾಯಿಸಿದರು.
ನಗರದ ಸೋಮಿನಕೊಪ್ಪ ಮತಗಟ್ಟೆ 31 ರಲ್ಲಿ ಹಾಗೂ ಹೊಸಮನೆ ವೀಣಾಶಾರದ ಶಾಲೆಯ ಮತಗಟ್ಟೆಯೊಂದರಲ್ಲಿ ಇವಿಎಂನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮತಯಂತ್ರ ಬದಲಿಸಲಾಯಿತು. ವೀಣಾ ಶಾರದಾ ಶಾಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ 7.45 ರವರೆಗೆ ಮತದಾನ ಸ್ಥಗಿತಗೊಂಡಿತ್ತು. ಬೆಂಗಳೂರಿನಿಂದ ಬಂದ ಕೆಲ ಯುವ ಮತದಾರರು ಎಪಿಕ್ ಕಾರ್ಡ್ ಇದ್ದರೂ ಸಹ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೆ ನಿರಾಶರಾಗಿ ಮರಳಿದರು. ಬೆಂಗಳೂರಿನಿಂದ ಬಂದಿ ದೀಪ್ತಿ ಎನ್ನುವ ಯುವತಿ ಕಳೆದ ಚುನಾವಣೆಯಲ್ಲಿ ವಿಜ್ಞಾನ ಕಾಲೇಜಿನಲ್ಲಿ ಮತ ಚಲಾಯಿಸಿದ್ದರು. ಆದರೆ ಈ ಬಾರಿ ಹೆಸರು ಡೀಲಿಟ್ ಆಗಿತ್ತು. ಬಳಿಕ ಪರಿಶೀಲನೆ ನಡೆಸಿದಾಗ ಅವರ ಮತ ಮತ್ತೂರು ಬೂತ್ಗೆ ವರ್ಗಾಯಿಸಲ್ಪಟ್ಟಿತ್ತು. ಊರಗಡೂರಿನ 96 ವರ್ಷದ ಎಚ್. ತುಳಸಿಬಾಯಿ ಉತ್ಸಾಹದಿಂದ ಮತಗಟ್ಟೆ ಸಂಖ್ಯೆ 149ಕ್ಕೆ ತೆರಳಿ ತಮ್ಮ ಮತಹಕ್ಕು ಚಲಾಯಿಸುವ ಮೂಲಕ ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ಯುವ ಜನಾಂಗಕ್ಕೆ ಕರೆ ನೀಡಿದರು. ನಗರದ ವಾರ್ಡ ನಂ 2 ರಲ್ಲಿ 98 ವರ್ಷದ ಜಾನಕಮ್ಮ ವೀಲ್ ಚೇರ್ನಲ್ಲಿ ಬಂದು ಮತಚಲಾಯಿಸಿ ಯುವಕರಿಗೆ ಮಾದರಿಯಾದರು. ವಿನೋಬನಗರದ ಮತಗಟ್ಟೆಯಲ್ಲಿ 95 ವರ್ಷದ ರುದ್ರಮ್ಮ ಮತ ಚಲಾಯಿಸಿದರು. ಮತಗಟ್ಟೆ ಅಧಿಕಾರಿಗಳಿಗೆ ತಿಳಿಸಿದ್ದರೂ ಸಹ ವೀಲ್ಚೇರ್ ವ್ಯವಸ್ಥೆ ಮಾಡಿರಲಿಲ್ಲ ಅವರನ್ನು ಹೊತ್ತುಕೊಂಡೆ ಹೋಗಿ ಮತ ಚಲಾಯಿಸಬೇಕಾಯಿತು. ಸುಡುತ್ತಿರುವ ಬಿಸಿಲಿನಲ್ಲೂ ಈ ಬಾರಿ ಮತದಾರರು ಅತಿ ಉತ್ಸಾಹದಿಂದ ಮತಚಲಾಯಿಸಿದರು.ಆದರೆ ಹಲವು ಮತಗಟ್ಟೆಗಳಲ್ಲಿ ಕುಡಿ0åುುವ ನೀರು ಹಾಗೂ ಬೆಳಕಿನ ಸೌಲಭ್ಯ ಇರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ