ಖಾಸಗಿ ಶಾಲೆ ಪೈಪೋಟಿ ಮಧ್ಯೆ ಇಂಗ್ಲಿಷ್‌ ಮಾಧ್ಯಮ ಸಕ್ಸಸ್‌?


Team Udayavani, May 29, 2019, 1:21 PM IST

29-May-19

ಶಿವಮೊಗ್ಗ: ಸರಕಾರದ ಮಹತ್ವಕಾಂಕ್ಷಿ ಆಂಗ್ಲಮಾಧ್ಯಮ ಶಿಕ್ಷಣ ಯೋಜನೆಗೆ ಜಿಲ್ಲೆಯಲ್ಲಿ ಪ್ರಚಾರದ ಕೊರತೆ ಕಾಡುತ್ತಿದೆ. 1ನೇ ತರಗತಿಯಿಂದ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರು ಉತ್ಸಾಹ ತೋರುತ್ತಿದ್ದು ಜೂನ್‌ ಅಂತ್ಯದ ವೇಳೆಗೆ ಎಷ್ಟು ಮಕ್ಕಳು ದಾಖಲಾಗುತ್ತಾರೆ ನೋಡಬೇಕಿದೆ.

ಜಿಲ್ಲೆಯ 29 ಸರಕಾರಿ ಶಾಲೆಗಳನ್ನು ಆಂಗ್ಲ ಮಾಧ್ಯಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಸರಕಾರದ ನಿಯಮಾವಳಿ ಕಾರಣ ನಗರ ಹಾಗೂ ಪಟ್ಟಣ ಪ್ರದೇಶಗಳ ಶಾಲೆಗಳಿಗೆ ಅವಕಾಶ ಸಿಕ್ಕಿದೆ. ಈ ಶಾಲೆಗಳು ಖಾಸಗಿ ಶಾಲೆಗಳ ಪೈಪೋಟಿ ಎದುರಿಸುತ್ತಿದ್ದು ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬ ಕುತೂಹಲ ಮೂಡಿಸಿದೆ.

ಖಾಸಗಿ ಶಾಲೆ ಪೈಪೋಟಿ: ಭದ್ರಾವತಿಯ ಹೊಸಸಿದ್ದಾಪುರ ಸರಕಾರಿ ಶಾಲೆಯಲ್ಲಿ ಈ ಬಾರಿ ಪ್ರಥಮ ಬಾರಿಗೆ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲಾಗಿದ್ದು ಈಗಾಗಲೇ 10 ಮಕ್ಕಳು ದಾಖಲಾಗಿದ್ದಾರೆ. ನಗರಕ್ಕೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಬಹುತೇಕ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಾರೆ. ಖಾಸಗಿ ಶಾಲೆ ಬಸ್‌ಗಳು ಮನೆ ಬಾಗಿಲಿಗೆ ಬಂದು ಮಕ್ಕಳನ್ನು ಕರೆದೊಯ್ಯುತ್ತವೆ. ಇಷ್ಟರ ಹೊರತಾಗಿಯೂ ಕೂಲಿ ಕಾರ್ಮಿಕ, ರೈತಾಪಿ ಕುಟುಂಬಗಳು ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇದೇ ಊರಿಗೆ ಹೊಂದಿಕೊಂಡಿರುವ ಸರಕಾರಿ ಹೈಸ್ಕೂಲ್ನಲ್ಲಿ ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿರುವ ಕಾರಣ ಮಕ್ಕಳ ಸಂಖ್ಯೆ ಉತ್ತಮವಾಗಿದೆ. ಖಾಸಗಿ ಶಾಲೆ ಪೈಪೋಟಿಗಳ ನಡುವೆ ಆಂಗ್ಲ ಮಾಧ್ಯಮ ಶಾಲೆ ಯಾವ ರೀತಿ ಸಾಧನೆ ಮಾಡಲಿದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

ಪ್ರತಿ ತಾಲೂಕಿಗೆ ತಲಾ ನಾಲ್ಕು ಶಾಲೆ ಮಂಜೂರಾಗಿದ್ದು, ಈಗಾಗಲೇ ಒಂದೊಂದು ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಆಂಗ್ಲ ಮಾಧ್ಯಮದ ಜತೆ ಕನ್ನಡ ಮಾಧ್ಯಮವೂ ಇರಲಿದ್ದು, ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕೆಂಬ ಆಯ್ಕೆಯನ್ನು ಪೋಷಕರಿಗೆ ಬಿಡಲಾಗಿದೆ. ಜಿಲ್ಲೆಯ 29 ಶಾಲೆಗಳಿಗೆ 29 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಇಂಗ್ಲಿಷ್‌ ಶಿಕ್ಷಕರು ಇರುವ ಶಾಲೆಯನ್ನೇ ಮೊದಲ ಬಾರಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಹೈಸ್ಕೂಲ್ಗೆ ಡಿಮ್ಯಾಂಡ್‌: ಏಳನೇ ತರಗತಿ ನಂತರ ಇಂಗ್ಲಿಷ್‌ ಮಾಧ್ಯಮದಲ್ಲಿ ಅಭ್ಯಾಸ ಮಾಡಿದರೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ ಎಂಬುದು ಪೋಷಕರ ಮನವಿ. 8ನೇ ತರಗತಿಗೆ ನೇರವಾಗಿ ಇಂಗ್ಲಿಷ್‌ ಕಲಿಕೆಗೆ ಮುಂದಾದರೆ ತ್ರಾಸದಾಯಕವಾಗಬಹುದು ಎಂಬುದು ಇನ್ನೂ ಕೆಲ ಪೋಷಕರ ವಾದ. ಒಂದರಿಂದ 10ನೇ ತರಗತಿವರೆಗೆ ಎಲ್ಲ ತರಗತಿಗಳಿಗೂ ಇಂಗ್ಲಿಷ್‌ ಮಾಧ್ಯಮ ಬೇಕೆಂಬುದು ಬಹುತೇಕರ ಒತ್ತಾಯ.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನಾಲ್ಕು ಶಾಲೆಗಳನ್ನು ನೀಡಲಾಗಿದ್ದು ಈ ಸಂಖ್ಯೆಯನ್ನು ಹೆಚ್ಚಿಸಲು ಈಗಾಗಲೇ ಒತ್ತಡ ಬಂದಿದೆ. ಶಿಕ್ಷಕರ ಸಂಖ್ಯೆ, ಮಕ್ಕಳ ದಾಖಲಾತಿ ಆಧಾರದ ಮೇಲೆ ಆಂಗ್ಲ ಮಾಧ್ಯಮ ಶಾಲೆ ವಿಸ್ತರಿಸಲು ಇಲಾಖೆ ನಿರ್ಧರಿಸಿದೆ.

ಮಾನದಂಡ ಏನು? 1 ರಿಂದ 10ತರಗತಿವರೆಗೆ ಒಂದೇ ಕಡೆ ಇರುವ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಒಂದೇ ಕಡೆ ಇರದಿದ್ದರೆ ಕನಿಷ್ಠ 500 ಮೀಟರ್‌ ಹಾಗೂ ಗರಿಷ್ಠ 1500 ಮೀಟರ್‌ ಅಂತರದಲ್ಲಿರುವ ಶಾಲೆಗಳನ್ನು ಗುರುತಿಸಲಾಗಿದೆ. ಜತೆಗೆ ಮಕ್ಕಳ ದಾಖಲಾತಿ ಪ್ರಮಾಣವು ಉತ್ತಮವಾಗಿರಬೇಕು

ಯಾವ್ಯಾವ ಶಾಲೆ: ಭದ್ರಾವತಿ ತಾಲೂಕಿನ ಹೊಸಸಿದ್ದಾಪುರ ಸರಕಾರಿ ಶಾಲೆ, ದೊಣಭಘಟ್ಟದ ಉರ್ದು ಬಾಲಕಿಯರ ಶಾಲೆ, ಅಂತರಗಂಗೆ ಸರಕಾರಿ ಶಾಲೆ, ಅರಳಿಹಳ್ಳಿ ಸರಕಾರಿ ಶಾಲೆ, ಸಾಗರ ತಾಲೂಕಿನ ಹೊಸನಗರ ಸರಕಾರಿ ಶಾಲೆ, ನಿಟ್ಟೂರು ಸರಕಾರಿ ಶಾಲೆ, ಹೊಸನಗರದ ಅಮೃತ ಶಾಲೆ, ಆನಂದಪುರ ಸರಕಾರಿ ಶಾಲೆ, ತೀರ್ಥಹಳ್ಳಿಯ ಕೋಡೂರು ಸರಕಾರಿ ಶಾಲೆ, ಗಾಜನೂರು ಸರಕಾರಿಶಾಲೆ, ಉಂಬ್ಳೆಬೈಲು ಸರಕಾರಿ ಶಾಲೆ, ಮೇಗರವಳ್ಳಿ, ಕೋಣಂದೂರು ಸರಕಾರಿ ಶಾಲೆ, ಶಿಕಾರಿಪುರದ ಕುಸ್ಕೂರು ಸರಕಾರಿ ಶಾಲೆ, ಹಿತ್ತಲ ಗ್ರಾಮದ ಸರಕಾರಿ ಶಾಲೆ, ಶಿರಾಳಕೊಪ್ಪದ ಬಾಲಕಿಯರ ಸರಕಾರಿ ಶಾಲೆ, ಧನರಾಜ್‌ ಹೇಮರಾಜ್‌ ಸರಕಾರಿ ಶಾಲೆ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೊಮ್ಮನಾಳು, ಶೆಟ್ಟಿಹಳ್ಳಿ, ಹಾಯ್‌ಹೊಳೆ ಉನ್ನತೀಕರಿಸಿದ ಸರಕಾರಿ ಶಾಲೆ, ಸೂಳೆಬೈಲಿನ ಸರಕಾರಿ ಶಾಲೆ, ಶಿವಮೊಗ್ಗ ನಗರದ ಎನ್‌.ಟಿ. ರಸ್ತೆ ಸರಕಾರಿ ಶಾಲೆ, ಗಾಡಿಕೊಪ್ಪ ಸರಕಾರಿ ಶಾಲೆ, ಮಿಳಘಟ್ಟ ಸರಕಾರಿ ಶಾಲೆ, ಕೆ.ಆರ್‌. ಪುರಂ ಸರಕಾರಿ ಶಾಲೆ, ಸೊರಬ ತಾಲೂಕಿನ ಕಮರೂರು ಉನ್ನತೀಕರಿಸಿದ ಸರಕಾರಿ ಶಾಲೆ, ಜಡೆ, ಆನವಟ್ಟಿ ಸರಕಾರಿ ಶಾಲೆಗಳು ಆಂಗ್ಲ ಮಾಧ್ಯಮಕ್ಕೆ ಆಯ್ಕೆಯಾಗಿವೆ.

ಈಗಾಗಲೇ 29 ಶಿಕ್ಷಕರಿಗೆ ತರಬೇತಿ ನೀಡಿ ನಿಯೋಜಿಸಲಾಗಿದೆ. ಹೆಚ್ಚುವರಿ ಶಾಲೆಗಳಿಗೆ ಬೇಡಿಕೆ ಇದೆ. ಆದರೆ ಸರಕಾರದ ನಿರ್ದೇಶನದಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನಾಲ್ಕು ಶಾಲೆಗಳನ್ನು ನೀಡಲಾಗಿದೆ. ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶುರುವಾಗಲಿದೆ. ಮುಂದಿನ ವರ್ಷದಿಂದ ಅದು ಮುಂದುವರಿಯಲಿದೆ.
ಸುಮಂಗಳ ಕುಚಿನಾಡ,
ಡಿಡಿಪಿಐ, ಶಿವಮೊಗ್ಗ

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.