ರಂಗಭೂಮಿ ಉಳಿಸಿ ಬೆಳೆಸಿ: ಡಾ| ಎಂ. ಗಣೇಶ್‌

ರಂಗಭೂಮಿಗೆ ನಿರ್ದೇಶಕರ ಕೊಡುಗೆ ಅಪಾರ

Team Udayavani, Jul 15, 2019, 12:27 PM IST

15-July-20

ಶಿವಮೊಗ್ಗ: ರಂಗ ಕಲಾವಿದರಿಗೆ ರಂಗಭೂಮಿ ಏಕೆ? ಹೇಗೆ? ಪುನರ್‌ ಮನನ ಕಾರ್ಯಾಗಾರದಲ್ಲಿ ರಂಗಾಯಣ ನಿರ್ದೇಶಕ ಡಾ| ಎಂ. ಗಣೇಶ್‌ ಮಾತನಾಡಿದರು.

ಶಿವಮೊಗ್ಗ: ರಂಗಭೂಮಿ ಒಂದು ರೀತಿಯಲ್ಲಿ ರೈತ ಇದ್ದ ಹಾಗೆ. ಸೊಸೈಟಿ ಎಂಬ ಮಳೆಯೊಂದಿಗೆ ರಂಗಭೂಮಿಯನ್ನು ಬಿತ್ತುವ ಕೆಲಸವನ್ನು ನಿರ್ದೇಶಕರು ಹಾಗೂ ರಂಗತಂಡಗಳು ಮಾಡುತ್ತಿವೆ ಎಂದು ರಂಗಾಯಣ ನಿರ್ದೇಶಕ ಡಾ| ಎಂ. ಗಣೇಶ್‌ ಹೇಳಿದರು.

ನಗರದ ಡಿವಿಎಸ್‌ ರಂಗ ಮಂದಿರದಲ್ಲಿ ಭಾನುವಾರ ಕಲಾವಿದರು ಸಂಘದಿಂದ ಆಯೋಜಿಸಿದ್ದ ರಂಗ ಕಲಾವಿದರಿಗೆ ರಂಗಭೂಮಿ ಏಕೆ? ಹೇಗೆ? ಪುನರ್‌ಮನನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಲಾವಿದರ ಒಕ್ಕೂಟ ಚಟುವಟಿಕೆಯಿಂದ ಕೆಲಸ ಮಾಡುತ್ತಿದೆ. ಹೊಸ ದಿಕ್ಕನ್ನು ತೋರಿಸುವ ಆಶಾಭಾವನೆಯನ್ನು ಹೊಂದಿದೆ. ರಂಗಭೂಮಿ ಸದಾ ಚಟುವಟಿಕೆಯಿಂದ ಕೂಡಿರುವ ಜಿಲ್ಲೆ ಶಿವಮೊಗ್ಗ ಆಗಿದ್ದು, ಜಿಲ್ಲೆಯು ಎಲ್ಲಾ ಕ್ಷೇತ್ರದಲ್ಲಿಯೂ ತನ್ನನ್ನು ತಾನೂ ಗುರುತಿಸಿಕೊಂಡಿದೆ ಎಂದರು.

ಹಿಂದೆ ಇದ್ದ ರಂಗಭೂಮಿ ಇಂದು ಇಲ್ಲ. ಬೇರೆ ಬೇರೆ ಕವಲನ್ನು ರಂಗಭೂಮಿ ಹಾಗೂ ಜನರು ಆಪೇಕ್ಷಿಸುತ್ತಿದ್ದಾರೆ. ಭೂತಕಾಲ, ವರ್ತಮಾನ, ಭವಿಷ್ಯತ್‌ ಕಾಲದ ಒಟ್ಟೊಟ್ಟಿಗೆ ರಂಭೂಮಿ ಕೆಲಸ ಮಾಡುತ್ತಿದೆ ಎಂದ ಅವರು, ಎಲ್ಲರನ್ನು ಒಳಗೊಂಡು ರಂಗಭೂಮಿಯನ್ನು ಬೆಳೆಸೋಣ. ಈ ರೀತಿಯ ಕೆಲಸಕ್ಕೆ ರಂಗಭೂಮಿ ಸದಾ ನಿಮ್ಮೊಂದಿಗೆ ಇರುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ಶಿರಸಿಯ ರಂಗ ನಿರ್ದೇಶಕ ಡಾ| ಶ್ರೀಪಾದ್‌ ಭಟ್ ಮಾತನಾಡಿ, ಯಾವುದೇ ವಿಶ್ವವಿದ್ಯಾಲಯಗಳು ಕಲಿಸದ ವಿದ್ಯೆಯನ್ನು ರಂಗಭೂಮಿ ಕಲಿಸುತ್ತಿದೆ. ನಾಟಕ ಎಂದರೆ ಆನಂದ ಮತ್ತು ಅರಿವು. ಜ್ಞಾನಕ್ಕೂ ಮತ್ತು ಆನಂದಕ್ಕೂ ಇರುವೇ ಸಂಪರ್ಕ ರಂಗಭೂಮಿಯಾಗಿದೆ ಎಂದರು.

ರಂಗಭೂಮಿ ದೇಹವೇ ದೇಗುಲವಾಗುವ ಬಹುದೊಡ್ಡ ಸಾಧನ. ಆನಂದದ ಮೂಲಕ ಅರಿವನ್ನು ಮೂಡಿಸುವುದೇ ರಂಗಭೂಮಿ. ದೇಹವನ್ನು ಪ್ರೀತಿಸುವುದಕ್ಕೆ ದೇಹವನ್ನು ದೇಗುಲ ಮಾಡಿಕೊಳ್ಳುವುದಕ್ಕೆ ರಂಗಭೂಮಿ ಅತ್ಯಗತ್ಯ ಎಂದು ಹೇಳಿದರು.

ಪ್ರಭುತ್ವಕ್ಕೆ ವಿದ್ರೋಹ ಮಾಡುವುದನ್ನು ಕಲಿಸುವುದೇ ನಾಟಕ. ಹಾಗಾಗಿ ಅನೇಕರು ನಾಟಕಗಾರರನ್ನು ಒಪ್ಪುವುದಿಲ್ಲ. ಪ್ರತಿಭಟಿಸುವ ಗುಣವನ್ನು ರಂಗಭೂಮಿ ಕಲಿಸುತ್ತದೆ. ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಬಾರಿ ನಿಷೇಧಕ್ಕೆ ಒಳಪಟ್ಟಿದ್ದು ರಂಗಭೂಮಿ. ಜಗತ್ತಿನಲ್ಲಿ ಎಷ್ಟು ಜ್ಞಾನಶಾಖೆ ಮಾತುಗಳಿವೆಯೋ ಅವೆಲ್ಲವೂ ರಂಗಭೂಮಿಯಲ್ಲಿ ಅಡಕವಾಗಿದೆ ಎಂದರು.

ರಂಗ ನಿರ್ದೇಶಕ ಕೊಟ್ರಪ್ಪ ಜಿ. ಹಿರೇಮಾಗಡಿ, ಬೆಂಗಳೂರಿನ ರಂಗಕರ್ಮಿ ಚನ್ನಕೇಶವ, ಕಲಾವಿದರು ಸಂಘದ ಜಿ.ಆರ್‌. ಲವ ಮತ್ತಿತರರು ಇದ್ದರು

ಟಾಪ್ ನ್ಯೂಸ್

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16-adu-jeevitham

Movie Review: ಆಡು ಜೀವಿದಂ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.