ಕೌಶಲ್ಯ ಕ್ರಾಂತಿಯಿಂದ ಸದೃಢ ಸಮಾಜ
ಪ್ರತಿಭಾವಂತ ವಿದ್ಯಾರ್ಥಿಗೂ- ವ್ಯಕ್ತಿಗೂ ಇದೆ ವ್ಯತ್ಯಾಸ: ಡಾ| ಗಿರಿಧರ್
Team Udayavani, Jul 12, 2019, 3:40 PM IST
ಶಿವಮೊಗ್ಗ: ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರದಲ್ಲಿ ರಮೇಶ್ ಮಾತನಾಡಿದರು.
ಶಿವಮೊಗ್ಗ: ಉತ್ತಮವಾದ ಜೀವನ ಕೌಶಲ್ಯಗಳ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಿ ಕೌಶಲ್ಯ ಕ್ರಾಂತಿಯ ಮೂಲಕ ಸದೃಢ ಸಮಾಜ ನಿರ್ಮಿಸಬೇಕಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಹೇಳಿದರು.
ದೇಶೀಯ ವಿದ್ಯಾ ಶಾಲಾ ಸಮಿತಿ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನ ಶಿವಮೊಗ್ಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಕುವೆಂಪು ವಿವಿ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ| ಕೆ.ವಿ. ಗಿರಿಧರ್ ಮಾತನಾಡಿ, ಪ್ರತಿಭಾವಂತ ವ್ಯಕ್ತಿಗೂ ಹಾಗೂ ವಿದ್ಯಾವಂತ ವಿದ್ಯಾರ್ಥಿಗೂ ವ್ಯತ್ಯಾಸವಿದೆ. ನಾವು ಪ್ರತಿಭಾವಂತ ಜೀವನ ಕೌಶಲ್ಯವನ್ನು ಹೊಂದಿದಂತಹ ವಿದ್ಯಾರ್ಥಿಗಳಾಗಬೇಕು ಎಂದರು.
ಪ್ರಾಂಶುಪಾಲ ಪ್ರೊ| ಎಸ್. ಕೆ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಲತಾ ಆರ್., ಲೋಕೇಶ್ ಎಸ್.ವೈ., ಶ್ರೀರಘು ನಾಯಕ್ ಟಿ., ಅವರು ವಿದ್ಯಾರ್ಥಿಗಳಿಗೆ ಕೆಲವು ಚಟುವಟಿಕೆಗಳ ಮೂಲಕ ಜೀವನ ಕೌಶಲ್ಯ ತರಬೇತಿಯನ್ನು ನೀಡಿದರು. ಎನ್ಎಸ್ಎಸ್ ಅಧಿಕಾರಿ ಡಾ| ಎಂ. ವೆಂಕಟೇಶ್, ಸಹಾಯಕ ಅಧಿಕಾರಿ ಮನು ಎಸ್. ಮತ್ತು ಸಚಿನ್ ಕೆ. ಇದ್ದರು.