ತುಂಗಾ ನದಿಗೆ ಕೊಳಚೆ ನೀರು;ಮೀನುಗಳ ಸಾವಿಗೆ ಹೊಣೆ ಯಾರು?


Team Udayavani, Dec 9, 2019, 3:14 PM IST

December-12

ಶರತ್‌ ಭದ್ರಾವತಿ
ಶಿವಮೊಗ್ಗ:
ಸ್ಮಾರ್ಟ್‌ ಸಿಟಿ ಶಿವಮೊಗ್ಗದ ಕೊಳಚೆ ಪವಿತ್ರ ನದಿ ತುಂಗೆಗೆ ಸೇರಿ 20 ತಳಿಯ ಮೀನುಗಳನ್ನು ಆಪೋಷನ ತೆಗೆದುಕೊಂಡಿದ್ದು ಗಂಗಾ ಸ್ನಾನ, ತುಂಗಾ ಪಾನ ಎಂಬ ನಾಣ್ಣುಡಿಯನ್ನು ಬದಲಾಯಿಸುವ ಪರಿಸ್ಥಿತಿ ಬಂದಿದೆ.

ನಗರದ ಕೊಳಚೆಯನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆ. ಇತ್ತ ಎಸ್‌ಟಿಪಿ ಪ್ಲಾಂಟ್‌ ಕಾಮಗಾರಿ ಕುಂಟುತ್ತಾ ಸಾಗಿದ್ದು ನವೆಂಬರ್‌ ತಿಂಗಳಲ್ಲೇ ನದಿಯ ಅಂಚಿನಲ್ಲಿ ಓಡಾಡಲು ಆಗುವುದಿಲ್ಲ. ಕೊಳಚೆ ವಾಸನೆ ಮೂಗಿಗೆ ರಾಚುತ್ತದೆ. ಶಿವಮೊಗ್ಗ ನಗರ ವಿಸ್ತಾರವಾಗಿ ಬೆಳೆದಿದ್ದು ನದಿಗೆ ಸೇರುವ ಕೊಳಚೆ ಪ್ರಮಾಣವು ಹೆಚ್ಚಾಗಿದೆ.

ಅಷ್ಟೇ ಪ್ರಮಾಣದಲ್ಲಿ ಜೀವ ಸಂಕುಲಗಳ ನಾಶ ಆಗುತ್ತಿದೆ. ಹಿಂದೆ ಶಿವಮೊಗ್ಗ ನಗರ ಸ್ಥಳೀಯ ಮೀನುಗಾರರ ಸ್ವರ್ಗವಾಗಿತ್ತು. ಸಾಂಪ್ರದಾಯಿಕವಾಗಿ ಮೀನು ಹಿಡಿದು ಬೀದಿಗಳಲ್ಲಿ ಮಾರುವ ಪರಂಪರೆ ಇತ್ತು. ಮುಂಜಾನೆ ಮೀನು ಹಿಡಿಯುವ ಸ್ಥಳಗಳಿಗೇ ಹೋಗಿ ಖರೀದಿಸುವ ವಾತಾವರಣವಿತ್ತು. ಮೀನುಗಾರರೂ ಕೂಡ ಉಕ್ಕಡ, ಹಾಯಿದೋಣಿಗಳಲ್ಲಿ ಹೋಗಿ ಬಲೆ ಬೀಸಿ, ಎಳೆಬಿಸಿಲು ಜಾರುವ ಮುನ್ನ ಹತ್ತಾರು ಕೆಜಿ ಮೀನು ಹಿಡಿಯುತ್ತಿದ್ದರು.

ತುಂಗಾ ತೀರದಲ್ಲೊಬ್ಬ ಗಾಳ ಹಾಕಿ ಕುಳಿತುಕೊಂಡಿದ್ದಾನೆಂದರೆ ಅವನ ಪಕ್ಕದಲ್ಲಿನ ಚೀಲದಲ್ಲಿ ಮೀನುಗಳು ಪಟಪಟನೇ ಬಡಿದಾಡುತ್ತಿದ್ದವು. ಆದರೆ, ಈಗ ಪರಿಸ್ಥಿತಿ ತುಂಬಾ ಕರಾಳವಾಗಿದೆ. ತುಂಗಾ ತೀರ ಕೊಳಕು ಅರಸಿ ಬರುವ ಹಂದಿಗಳ ಸಾಮ್ರಾಜ್ಯ, ಪ್ಲಾಸ್ಟಿಕ್‌ ಕಾರ್ಖಾನೆಯಾಗಿ ಬದಲಾಗಿದ್ದು, ದುರ್ನಾತ ಬೀರುತ್ತಾ ರೋಗ ಹರಡುವ ಸ್ಥಳವಾಗಿದೆ. ಚಳಿಗಾಲದಲ್ಲಿ ನೀರಿನ ಹರಿವು ಕಡಿಮೆಯಾದರೂ ತಿಳಿನೀರಿನಲ್ಲಿ ವಿರಮಿಸುತ್ತಿದ್ದ ಹತ್ತಾರು ದೇಸಿ ಮೀನಿನ ತಳಿಗಳಿಂದು ಸಿಟಿ ಸರಹದ್ದಿನಲ್ಲಿ ಮಾಯವಾಗಿವೆ. ಬಾಂಬೆ ಕಾಟ್ಲಾ ಎಂದು ಸ್ಥಳೀಯವಾಗಿ ಕರೆಯುವ ಮೀನಿನ ಸಂತತಿ ಮಾತ್ರ ಉಳಿದುಕೊಂಡಿದೆ. ಪ್ರತಿದಿನ ಹತ್ತಾರು ಮೀನುಗಾರರು ಇಲ್ಲಿ ಗಿರಕಿ ಹೊಡೆಯುತ್ತಾರೆ. ಆದರೆ ಎರಡು ಕೆಜಿ ಮೇಲೆ ಮೀನು ಸಿಗುವುದಿಲ್ಲ.

ಗೊಂದಿ ಚಟ್ನಹಳ್ಳಿಯ ಪ್ರಕಾಶ್‌ ಇದೇ ಸ್ಥಳದಲ್ಲಿ ಹನ್ನೆರಡು ವರ್ಷದ ಹಿಂದೆ ಗೌರಿ ಮೀನು, ಔಲು, ಗಿರ್ಲು ಸೇರಿ ದಿನಕ್ಕೆ 20 ಕೆ.ಜಿ ಮೀನು ಹಿಡಿಯುತ್ತಿದ್ದರು. ಆದರೆ ಪ್ರಸ್ತುತ 2 ಕೆಜಿ ಸಿಗುವುದು ಕಷ್ಟವಿದೆ. ಅದು ಕೂಡ ಒಂದೇ ಜಾತಿಯ ಮೀನು. ತುಂಗಾ ತೀರದಲ್ಲಿ ಸೆಪ್ಟೆಂಬರ್‌ನಿಂದಲೇ ಮೀನುಗಾರಿಕೆ ಆರಂಭವಾಗುತ್ತೆ. ಕಾರಣ ತುಂಗಾ ಜಲಾಶಯವಿರುವುದರಿಂದ ನೀರಿನ ಹರಿವು ದಿಢೀರನೇ ಕ್ಷೀಣಿಸುತ್ತದೆ. ಅಲ್ಲಲ್ಲಿ ವಿಸ್ತಾರವಾಗಿ ಚಾಚಿಕೊಂಡು, ಕೆಲವೆಡೆ ಬರಿದಾಗುತ್ತಾ ಬೇಸಿಗೆಯವರೆಗೆ ಮೀನಿನ ಆಶ್ರಯವಾಗಿರುವ ನೀರಿಗೆ ನಗರದ ತ್ಯಾಜ್ಯ ಸೇರಿ ಜೀವ ವೈವಿಧ್ಯಕ್ಕೆ ಮಾರಕವಾಗಿದೆ.

ನಗರ ವ್ಯಾಪ್ತಿಯ ತುಂಗಾ ನದಿಗೆ ಬಿಡುವ ಹೊಲಸು ನೀರನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಈ ಮೀನಿನ ಸಂತತಿ ಉಳಿಯುತ್ತಿತ್ತು, ಕಳೆದ ಹತ್ತು ವರ್ಷದಲ್ಲಿ ಇಪ್ಪತ್ತು ವಿವಿಧ ಬಗೆಯ ಮೀನು ತಳಿಗಳನ್ನು ಶಿವಮೊಗ್ಗದ ಹೊಲಸು ನುಂಗಿ ಹಾಕಿದೆ. ಸ್ಮಾರ್ಟ್‌ ಸಿಟಿಗೆ ಕೋಟಿಗಟ್ಟಲೇ ಹಣ ಹರಿಯುತ್ತಿದ್ದರೂ ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಈ ಕರಾಳ ಸತ್ಯವನ್ನು ಮೀನುಗಾರಿಕೆ ಇಲಾಖೆ ಕೂಡ ಒಪ್ಪಿಕೊಳ್ಳುತ್ತದೆ.

ಟಾಪ್ ನ್ಯೂಸ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.