ಪರಿಹಾರಕ್ಕೆ ಕಾಯೋದೇ ಸಂತ್ರಸ್ತರ ಕಾಯಕ

ಭಾರೀ ಮಳೆಯಿಂದಾಗಿ ಮನೆ-ಕೃಷಿ ಜಮೀನು ಕಳೆದುಕೊಂಡವರ ಸ್ಥಿತಿ ದೇವರಿಗೇ ಪ್ರೀತಿ

Team Udayavani, Sep 1, 2019, 11:48 AM IST

1-September-16

ಶೃಂಗೇರಿ: ತಾಳಕೋಡಿನಲ್ಲಿ ಧರೆ ಕುಸಿದಿದೆ.

ರಮೇಶ್‌ ಕುರುವಾನೆ
ಶೃಂಗೇರಿ:
ಹದಿನೈದು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ತಾಲೂಕಿನಾದ್ಯಂತ ಮನೆ, ಕೃಷಿ ಜಮೀನು, ರಸ್ತೆ, ಕಾಲುಸಂಕ, ವಿದ್ಯುತ್‌ ಮಾರ್ಗ ಸಹಿತ ಅಪಾರ ಹಾನಿ ಸಂಭವಿಸಿದ್ದು, ಸಂಕಷ್ಟಕೀಡಾಗಿರುವ ಸಂತ್ರಸ್ತರು ಸರಕಾರದ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ.

ಆಶ್ಲೇಷಾ ಮಳೆಯ ಆರ್ಭಟದ ನಂತರ ಮುಂಗಾರು ಶಾಂತವಾಗಿದ್ದರೂ ಅತಿವೃಷ್ಟಿಯಿಂದ ಉಂಟಾದ ಹಾನಿಯನ್ನು ಸರಿಪಡಿಸಿಕೊಳ್ಳಲಾಗದೇ ರೈತರು, ಸಾರ್ವಜನಿಕರು ಸಂಕಷ್ಟ ಪಡುವಂತಾಗಿದೆ.

ಆಗಸ್ಟ್‌ ತಿಂಗಳು ಆರಂಭವಾದರೂ ಮಲೆನಾಡಿನಲ್ಲೂ ಮಳೆಯ ಕೊರತೆ ಉಂಟಾಗಿದ್ದು, ಮಲೆನಾಡಿಗೂ ಬರ ಬರಬಹುದೇ ಎಂಬ ಪ್ರಶ್ನೆ ಉದ್ಭವಿಸಿತ್ತು. ಆಶ್ಲೇಷಾ ಮಳೆ ಆರಂಭವಾಗುತ್ತಿದ್ದಂತೆ ಆರಂಭವಾದ ಮಳೆ ಒಂದೇ ಸಮನೇ ಸುರಿದು ತಾಲೂಕಿನಾದ್ಯಂತ ಸಾಕಷ್ಟು ಹಾನಿ ಉಂಟು ಮಾಡಿದೆ. ತುಂಗಾ ನದಿಯಲ್ಲಿ ಸತತವಾಗಿ ಪ್ರವಾಹ ಉಂಟು ಮಾಡಿದ್ದಲ್ಲದೇ, ಪ್ರವಾಹದಿಂದ ತಗ್ಗು ಪ್ರದೇಶದಲ್ಲಿ ನೀರು ನಿಲ್ಲುವಂತಾಯಿತು.

ಸತತ ಮಳೆಯಿಂದ ಹಳ್ಳಗಳು ಉಕ್ಕಿ ಹರಿದು ಭತ್ತದ ಗದ್ದೆ, ಅಡಕೆ ತೋಟಕ್ಕೆ ತೀವ್ರ ಹಾನಿ ಸಂಭವಿಸಿದೆ. ಸತತ ಮಳೆಯಿಂದ ಕಾಫಿ, ಅಡಕೆಗೆ ತೀವ್ರ ಕೊಳೆ ರೋಗ ಬಾಧಿಸುತ್ತಿದ್ದು, ಅಡಕೆ, ಕಾಫಿ ಉದುರಿಹೋಗುತ್ತಿದೆ. ಬೇಸಿಗೆಯಲ್ಲಿ ಸಕಾಲಿಕವಾಗಿ ಮಳೆ ಸುರಿಯದೇ ಕಾಫಿ ಫಸಲು ಕುಸಿದಿದ್ದು, ಕಾಳು ಮೆಣಸು ಕಾಯಿ ಕಟ್ಟಲು ವಿಳಂಬವಾಗಿತ್ತು. ಈಗ ಅತಿಯಾದ ಮಳೆಗೆ ಕಾಳು ಮೆಣಸು ಬಳ್ಳಿಗಳು ಸಾಯುತ್ತಿದ್ದು, ಎಲ್ಲಾ ಬೆಳೆಗೂ ಅತಿವೃಷ್ಟಿ ಮಾರಕವಾಗಿದೆ.

ಕಳೆದ ವರ್ಷವೂ ಅತಿವೃಷ್ಟಿ ಪರಿಣಾಮ ತಾಲೂಕಿನಲ್ಲಿ ಅಡಕೆ, ಕಾಫಿಗೆ ವ್ಯಾಪಕ ಕೊಳೆ ರೋಗ ಕಾಣಿಸಿಕೊಂಡಿತ್ತು. ಮತ್ತೆ ಈ ವರ್ಷವೂ ಕೊಳೆ ರೋಗ ಬಾರದಂತೆ ಜೂನ್‌ ಮೊದಲ ವಾರದಲ್ಲಿಯೇ ಬೋರ್ಡೋ ಸಿಂಪಡಿಸಿದ್ದು, ಅನೇಕ ರೈತರು ಎರಡನೇ ಬಾರಿಯೂ ಬೋರ್ಡೋ ಸಿಂಪಡಣೆ ಮಾಡಿದ್ದರು. ಆದರೆ, ಸತತ ಮಳೆಯಿಂದ ಅಡಕೆಗೆ ಮತ್ತೆ ಕೊಳೆ ರೋಗ ಕಾಣಿಸಿಕೊಂಡಿದೆ.

ಬಾರದ ಪರಿಹಾರ-ಕಳೆದ ವರ್ಷ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರು ಪರಿಹಾರಕ್ಕಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರೂ ಯಾರಿಗೂ ಪರಿಹಾರ ಬಂದಿಲ್ಲ. ಇದಲ್ಲದೇ ಬೆಳೆ ವಿಮೆ, ಸಾಲ ಮನ್ನಾದ ಹಣವೂ ರೈತರ ಖಾತೆಗೆ ಜಮಾ ಆಗದಿರುವುದು ರೈತರ ಸಂಕಷ್ಟ ಹೆಚ್ಚಾಗುವಂತೆ ಮಾಡಿದೆ. ಈ ವರ್ಷವೂ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ.

ಹಾನಿ-ಈ ವರ್ಷದ ಅತಿವೃಷ್ಟಿಯಿಂದ ವಿದ್ಯಾರಣ್ಯಪುರ ಗ್ರಾಪಂ ವ್ಯಾಪ್ತಿಯ ತಾಳಕೋಡಿನ ರತ್ನಾಕರ ಎಂಬುವವರ ಮನೆಗೆ ದರೆ ಅಪ್ಪಳಿಸಿ ಹಾನಿಯಾಗಿದೆ. ಕಳೆದ ವರ್ಷವೂ ದರೆ ಕುಸಿದು ಮನೆಗೆ ಹಾನಿಯಾಗಿತ್ತು. ಕೆಸರಕುಡಿಗೆ ಚಂದ್ರಪ್ಪ ಅವರ ಮನೆಗೆ ಕಳೆದ ವರ್ಷದಂತೆ ಈ ವರ್ಷವೂ ಧರೆ ಕುಸಿದು ಹಾನಿಯಾಗಿದೆ. ಬೇಗಾನೆಯ ಇಂದಿರಮ್ಮ ಅವರ ಅಡಕೆ ತೋಟದ ಪಕ್ಕದ ದರೆ ಕುಸಿದು ತೋಟಕ್ಕೆ ವ್ಯಾಪಕ ಹಾನಿ ಸಂಭವಿಸಿದೆ. ಕೆರೆ ಗ್ರಾಪಂ ಯ ಹೊರಣೆ ಕಾಲುಸಂಕ ಪ್ರವಾಹಕ್ಕೆ ಸಿಲುಕಿ ಹಾನಿಯಾಗಿದೆ. ಹಂಚಿನಕೊಡಿಗೆ ಕಿರು ಸೇತುವೆಗೆ ಹಾನಿಯಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ರಾಜಾನಗರ ಸರಕಾರಿ ಶಾಲೆ ಬಾವಿ, ರೇಣುಕಾಂಬಾ ನಗರದ ಬಾವಿ ಕುಸಿದು ಹಾನಿಯಾಗಿದೆ.

ಕೋಗೋಡು ಗ್ರಾಮದ ವಡಗೆರೆೆಮನೆ ವಿಶ್ವನಾಥ್‌ ಅವರ ಗದ್ದೆಗೆ ಪ್ರವಾಹದಿಂದ ಅಪಾರ ಮಣ್ಣು ಸಂಗ್ರಹವಾಗಿದೆ. ನೀಲಂದೂರು ಗ್ರಾಮದ ಆಮ್ಟೆ ಚಂದ್ರಪ್ಪ ಮನೆ ಕುಸಿದಿದೆ. ನೆಮ್ಮಾರ್‌ ಗ್ರಾಮದ ಬೋಬಣ್ಣ,ಸದಾನಂದ, ಸುಮಿತ್ರಾ ಅವರ ಮನೆ ಕುಸಿದು ಹಾನಿಯಾಗಿದೆ. ಪಟ್ಟಣದ ಸಪೂರಾಬಿ ಮನೆಯ ಹಿಂಭಾಗ ಧರೆ ಕುಸಿದು ಮನೆಗೆ ಹಾನಿಯಾಗಿದೆ. ಕಲ್ಕಟ್ಟೆಯ ದುರ್ಗಾರವರ ಮನೆ ಕುಸಿದು ದುರ್ಗಾ ಗಾಯಗೊಂಡಿದ್ದರು. ರಾಜ್ಯ ಹೆದ್ದಾರಿ ರಸ್ತೆ, ಎನ್ನೆಚ್ ಹಾಗೂ ಗ್ರಾಮೀಣ ರಸ್ತೆಗಳು ಮಳೆಗೆ ತೀವ್ರ ಹಾನಿಯಾಗಿದೆ.

ಟಾಪ್ ನ್ಯೂಸ್

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8-muddebihala

Muddebihal: ನೇಹಾ ಕೊಲೆ ಖಂಡಿಸಿ ಪ್ರತಿಭಟನೆ: ಮುಸ್ಲಿಂ ಮುಖಂಡರು ಭಾಗಿ

signature

Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.