ಗುತ್ತಿಗೆದಾರರಿಗೆ ಹಣ ನೀಡದೇ ದುರ್ಬಳಕೆ

ಎರಡು ತಿಂಗಳಿಗೊಮ್ಮೆ ಸಭೆ ಕರೆಯುವಂತೆ ತಾಪಂ ಜೆಡಿಎಸ್‌ ಸದಸ್ಯರ ಆಗ್ರಹ • ಪ್ರಗತಿ ಪರಿಶೀಲನಾ ಸಭೆ ಬಹಿಷ್ಕಾರ

Team Udayavani, Aug 1, 2019, 3:51 PM IST

1-Agust-38

ಶ್ರೀನಿವಾಸಪುರ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜೆಡಿಎಸ್‌ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು

ಶ್ರೀನಿವಾಸಪುರ: ಎರಡು ತಿಂಗಳಿಗೊಮ್ಮೆ ಸಭೆ ನಡೆಸು ವುದಾದರೆ ನಡೆಸಿ, ವರ್ಷಕ್ಕೊಮ್ಮೆ ಮಾಡುವು ದಾದ್ರೆ ನಾವು ಬರಲ್ಲ, ಗುತ್ತಿಗೆದಾರರಿಗೆ ನೀಡದೇ ಅಧಿಕಾರಿ ಗಳು ದುರುಪಯೋಗ ಮಾಡಿರುವ ಹಣ ವಾಪಸ್‌ ಕಟ್ಟಿಸಿ, ಸಭೆ ನಿಗದಿ ಮಾಡಿದರೆ ಮಾತ್ರ ಈಗಿನ 2 ಕೋಟಿ ರೂ. ಕ್ರಿಯಾಯೋಜನೆಗೆ ಸಮ್ಮತಿಸುತ್ತೇವೆ ಎಂದು ಪ್ರತಿಪಕ್ಷ ಸದಸ್ಯರು ತಾಪಂ ಪ್ರಗತಿ ಪರಿಶೀಲನಾ ಸಭೆ ಬಹಿಷ್ಕರಿಸಿದ ಘಟನೆ ನಡೆಯಿತು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧ ವಾರ ಅಧ್ಯಕ್ಷ ಕೆ.ಎಂ.ನರೇಶ್‌ ಅಧ್ಯಕ್ಷತೆಯಲ್ಲಿ 11 ಗಂಟೆಗೆ ಕರೆದಿದ್ದ ಪ್ರಗತಿ ಪರಿಶೀಲನೆ ಮತ್ತು ಸಾಮಾನ್ಯ ಸಭೆಗೆ, 12 ಗಂಟೆಗೆ ಜೆಡಿಎಸ್‌ ಉಪಾಧ್ಯಕ್ಷರು ಮತ್ತು ಸದಸ್ಯರು ಬಂದರು. ಬಂದ ತಕ್ಷಣ ಸದಸ್ಯ ಎಸ್‌.ಎನ್‌.ಮಂಜುನಾಥ್‌ ನಾವು 10 ಸದಸ್ಯರು ಇದ್ದೇವೆ. ಅಧ್ಯಕ್ಷರು ಸಭೆಗೆ ನೀವು ಒಬ್ಬರು ಬನ್ನಿ ಎಂದು ಕರೆದಿ ದ್ದೀರಲ್ಲಾ ನಾವು ಅಗತ್ಯವಿಲ್ಲದಿದ್ದರೆ ನಮಗಾಗಿ ಸಭೆ ಯಲ್ಲಿ ಕಾಯುವುದೇನಿದೆ ಎಂದು ಅಧ್ಯಕ್ಷ ಕೆ.ಎಂ. ನರೇಶ್‌ರನ್ನು ತರಾಟೆಗೆ ತೆಗೆದುಕೊಂಡರು. ಆಗ ನಾನು ಎಲ್ಲರಿಗೂ ಕರೆ ಮಾಡಿದ್ದೇನೆ. ನಾನು ಯಾರನ್ನೂ ಬಿಟ್ಟಿಲ್ಲ ಎಂದು ಅಧ್ಯಕ್ಷರು ಸಮುಜಾಯಿಷಿ ನೀಡಿ ಸಮಾಧಾನ ಮಾಡಿದರು.

ಸುಳ್ಳು ಮಾಹಿತಿ ನೀಡಬೇಡಿ: ತಾಪಂ ಇಒ ಆನಂದ್‌ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಈ ಹಿಂದೆ ನಡೆದಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ 97 ನಡೆದು 85.5 ಲಕ್ಷ ರೂ. ವೆಚ್ಚವಾಗಿ, 12.50 ಲಕ್ಷ ರೂ. ಉಳಿದಿದೆಯೆಂದು ತಿಳಿಸಿದರು. ಇದೇ ವೇಳೆ ಪ್ರತಿಪಕ್ಷ ಸದಸ್ಯ ಮಂಜುನಾಥರೆಡ್ಡಿ, ಜಿಪಂ ಎಇಇ ಅಪ್ಪಿರೆಡ್ಡಿ ಅವರಿಂದ ಮಾಹಿತಿ ಪಡೆದು, ಇನ್ನು 4.50 ಲಕ್ಷ ರೂ. ಮಾತ್ರ ಉಳಿದಿದೆ. ನೀವು ನೋಡಿದರೆ 12.50 ಲಕ್ಷ ರೂ. ಎಂದು ಸುಳ್ಳು ಮಾಹಿತಿ ನೀಡಲಾಗುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಗುಮಾಸ್ತಗೆ ತರಾಟೆ: ಮಧ್ಯೆ ಪ್ರವೇಶಿಸಿದ ಗುಮಾಸ್ತ ಮಂಜುನಾಥ್‌, ಅಷ್ಟೇ ಉಳಿದಿದೆ ಎಂದು ಸಮರ್ಥಿಸಿಕೊಂಡಾಗ ಕಾಮಗಾರಿಗಳು ಮುಗಿಸಿದ್ದರೂ ಗುತ್ತಿಗೆದಾರರಿಗೆ 2 ತಿಂಗಳಿಂದ ಹಣ ಕೊಡದೇ ಸತಾಯಿಸಲಾಗುತ್ತಿದೆ. ಇರುವ ಹಣವೆಲ್ಲ ಖಾಲಿಯಾಗಿದೆ. ಗುತ್ತಿಗೆದಾರರಿಗೆ ಮಾತ್ರ ಹಣ ಸೇರಿಲ್ಲ, ನೀವೇ ಡ್ರಾ ಮಾಡಿ ಮುಗಿಸಿದ್ದೀರೆಂದು ಗುಮಾಸ್ತ ಮಂಜುನಾಥ್‌ರನ್ನು ತರಾಟೆಗೆ ತೆಗೆದುಕೊಂಡಾಗ, ಆಗಿನ ಇಒ 10 ಲಕ್ಷ ರೂ.ಒಂದೇ ಗ್ರಾಮದ ಹೆಸರಲ್ಲಿ ಡ್ರಾ ಮಾಡಿಸಿದ್ದಾರೆಂದು ಸಮಜಾಯಿಷಿ ನೀಡಿದರು.

ಅನುದಾನ ಕೊಟ್ಟಿಲ್ಲ: ಪಶು ಸಂಗೋಪನ ಇಲಾಖೆಯ ಮಾಹಿತಿ ಪ್ರಗತಿ ಪರಿಶೀಲನಾ ಕೈಪಿಡಿಯಲ್ಲಿ ಮೊದಲ ಪೇಜ್‌ನಲ್ಲಿ ಮುದ್ರಣವಾಗಿದ್ದ ಮಾಹಿತಿಯನ್ನು ಪಡೆದ ಆಡಳಿತ ಪಕ್ಷ ಸದಸ್ಯ ಶ್ರೀನಿವಾಸ್‌, ನಿಮ್ಮನ್ನು ಎಷ್ಟು ಸಲ ಕೇಳಿದರೂ ಮೂರ್ನಾಲ್ಕು ಮಂದಿಗೆ ಮಾತ್ರ ಅನುದಾನ ಬಂದಿದೆ ಎಂದು ಹೇಳಿ ವಿವಿದ ಯೋಜನೆಗಳಿಂದ ಕುರಿ, ಹಂದಿ, ಮೇಕೆ, ಜಾನುವಾರುಗಳ ಅಭಿವೃದ್ಧಿಗೆ 6 ಕೋಟಿ ರೂ. ವಿನಿಯೋಗವಾಗಿದೆ. ಅದರಲ್ಲೂ ನಿಮ್ಮ ಸ್ವಂತ ಗ್ರಾಮ ಗೌಡದೇನಹಳ್ಳಿಗೆ ಹೆಚ್ಚು ಫ‌ಲಾನುಭವಿಗಳನ್ನು ಆಯ್ಕೆ ಮಾಡಿ ಅನುದಾನ ನೀಡಲಾಗಿದೆ ಎಂದು ಡಾ.ಸತ್ಯನಾರಾಯಣ ಅವರನ್ನು ತರಾಟೆಗೆ ತೆಗೆದುಕೊಂಡಾಗ, ಶಾಸಕರು ಹೇಳಿದವರಿಗೆ ಕೊಟ್ಟಿದ್ದೇನೆಂದು ಹಾರಿಕೆ ಉತ್ತರ ನೀಡಿದರು. ಇದಕ್ಕೆ ಕುಪಿತಗೊಂಡ ವಿರೋಧ ಪಕ್ಷದ ಸದಸ್ಯ ಕೃಷ್ಣಾರೆಡ್ಡಿ, ನಾವು ಜನಪ್ರತಿನಿಧಿಗಳೇ ಆಗಿದ್ದೇವೆ. ನಮ್ಮ ಮನೆಗಳಿಗೆ ಕೇಳಿಲ್ಲ. ನಾವು ಕೇಳಿದಾಗ ಯಾಕೆ ತಿಳಿಸಿಲ್ಲವೆಂದು ಪ್ರಶ್ನಿಸಿ ಕಿಡಿಕಾರಿದರು. ಇದಕ್ಕೆ ಅಧ್ಯಕ್ಷರು ದನಿಗೂಡಿಸಿ ಸದಸ್ಯರ ಗಮನಕ್ಕೆ ತರಬೇಕೆಂದು ಸಲಹೆ ನೀಡಿದರು.

ಉಳಿಕೆ ಹಣ ವಾಪಸ್‌ ತರಿಸಿ: ಅಧ್ಯಕ್ಷರು ಕ್ರಿಯಾ ಯೋಜನೆಗೆ ಪಟ್ಟು ಹಿಡಿದಾಗ ಹಿಂದಿನ ಬಾಕಿ ಬಿಲ್ಲು ಗಳು ಬಿಡುಗಡೆ ಮಾಡಿ, ಉಳಿಕೆ ಹಣದ ಚೆಕ್‌ಗಳನ್ನು ವಾಪಸ್‌ ತರಿಸಿ ನಂತರ ಸಭೆ ಕರೆಯಿರಿ. ನನಗೆ 3 ವರ್ಷದಿಂದ ಗೌರವಧನ ಕೊಟ್ಟಿಲ್ಲ. ನಾವು ಸುತುರಾಂ ಸಭೆಗೆ ಬರುವುದಿಲ್ಲವೆಂದು ಖಡಕ್ಕಾಗಿ ಹೇಳಿ ಸಭೆ ಯಿಂದ ಹೊರನಡೆದು ವಿರೋಧ ಪಕ್ಷದ ಕಚೇರಿಯಲ್ಲಿ ಕುಳಿತುಕೊಂಡಾಗ ಅಲ್ಲಿಗೂ ಸಭೆಯ ಹಾಜರಾತಿ ಪುಸ್ತಕವನ್ನು ಗುಮಾಸ್ತ ತೆಗೆದುಕೊಂಡು ಹೋದಾಗ ಆಗಿರುವ ಲೋಪ ಸರಿಪಡಿಸಿ ಸಭೆ ಕರೆದರೆ ಮಾತ್ರ ನಾವು ಸಹಿ ಹಾಕುತ್ತೇವೆ. ಇಲ್ಲವಾದರೆ ನಿಮಗೆ ಬಹು ಮತ ಇದ್ದರೆ ಕ್ರಿಯಾಯೋಜನೆ ಅನುಮೋದನೆ ನೀಡಿ ಎಂದು ಹೇಳಿದರು.

ಟಾಪ್ ನ್ಯೂಸ್

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.