ಏಕತಾರಿಯಲ್ಲಿ ಅಡಗಿದೆ ಗ್ರಾಮೀಣ ಸೊಗಡು

ಸಾಹಿತಿ ಡಾ| ಚನ್ನಪ್ಪ ಕಟ್ಟಿ ಬಹುಮುಖ ಪ್ರತಿಭೆ: ಸಾರಂಗಮಠ ಶ್ರೀ

Team Udayavani, Sep 9, 2019, 5:36 PM IST

9-Sepctember-23

ಸಿಂದಗಿ: ಹಿರಿಯ ಸಾಹಿತಿ ಡಾ| ಚನ್ನಪ್ಪ ಕಟ್ಟಿ ಅವರ ಏಕತಾರಿ ಕಥಾ ಸಂಕಲನವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ| ಬಾಳಾಸಾಹೇಬ ಲೋಕಾಪುರ ಬಿಡುಗಡೆ ಮಾಡಿದರು.

ಸಿಂದಗಿ: ಸಾಹಿತಿ ಕಟ್ಟಿ ಅವರ ಕಥೆಗಳಲ್ಲಿ ಗ್ರಾಮೀಣದ ಸೊಗಡು ಅಡಗಿದ್ದರೂ ಆಧುನಿಕತೆಯಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ| ಬಾಳಾಸಾಹೇಬ ಲೋಕಾಪುರ ಹೇಳಿದರು.

ರವಿವಾರ ಪಟ್ಟಣದ ಮಾಂಗಲ್ಯ ಭವನದಲ್ಲಿ ಚನ್ನಪಟ್ಟಣದ ಪಲ್ಲವ ಪ್ರಕಾಶನ ಹಾಗೂ ಸ್ಥಳೀಯ ನೆಲೆ ಪ್ರಕಾಶನ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಡಾ| ಚನ್ನಪ್ಪ ಕಟ್ಟಿ ಅವರ ಏಕತಾರಿ ಕಥಾ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಡಾ| ಚನ್ನಪ್ಪ ಕಟ್ಟಿ ಅವರು ರಚಿಸಿದ ಕಥೆ-ಕವನಗಳಲ್ಲಿ ಜನ-ಜೀವನದ ಬದುಕು, ಗ್ರಾಮೀಣ-ನಗರದ ಸೊಗಡು, ಜೀವನದ ಮೌಲ್ಯ ಅಡಗಿವೆ. ಅವರ ನಿರಂತರ ಕನ್ನಡದ ಅಧ್ಯಯನದಿಂದ ವಾಸ್ತವದ ಅಂಶಗಳನ್ನು ಹಾಗೂ ಇಂಗ್ಲಿಷ್‌ ಅಧ್ಯಯನದಿಂದ ಜಾಗತಿಕ ಅಂಶಗಳನ್ನು ತಮ್ಮ ಕಥೆಗಳಲ್ಲಿ ಕಟ್ಟಿ ಹಾಕುತ್ತಾರೆ. ಅವರು ಒಬ್ಬ ಕಾದಂಬರಿಕಾರರಾಗಿ ಹೊರ ಹೊಮ್ಮಬೇಕಾಗಿದೆ ಎಂದು ಹೇಳಿದರು.

ಕಟ್ಟಿಯವರ ಆರಂಭಿಕ ಕಥೆಗಳಾದ ಚರಗ, ಪಾಳು, ಕಥೆಗಳಿಗಿಂದ ಏಕತಾರಿಯಲ್ಲಿನ ಕಥೆಗಳು ವೈಚವಾರಿಕ ನೆಲೆಯಲ್ಲಿವೆ. ಲೌಕಿಕ ಬದುಕನ್ನು ಅಲೌಕಿಕದೆಡೆಗೆ ಸಾಗಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಂಶೋಧಕ, ಜಾನಪದ ವಿದ್ವಾಂಸಕ ಡಾ| ಎಂ.ಎಂ. ಪಡಶೆಟ್ಟಿ ಮಾತನಾಡಿ, ಡಾ| ಚನ್ನಪ್ಪ ಕಟ್ಟಿ ಅವರು ಮೌಲ್ಯಾಧಾರಿತ ಬದುಕನ್ನು ಕಟ್ಟಿಕೊಂಡವರು. ಅವರ ಬದುಕಿನಂತೆ ಅವರ ಬರಹವಿದೆ. ಅವರು ಒಬ್ಬ ಸಂಶೋಧಕನಾಗಿ, ಅನುವಾದಕರಾಗಿ, ಕವಿಯಾಗಿ, ಕಥೆಗಾರನಾಗಿ ಹೀಗೆ ಅವರು ಬಹುಮುಖ ಪ್ರಭುತ್ವ ಹೊಂದಿದ್ದಾರೆ. ಅವರ ಒಡನಾಟ ನಮ್ಮೇಲ್ಲರ ಭಾಗ್ಯ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಸಾರಂಗಮಠ-ಗಚ್ಚಿನಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಕಥೆಗಾರ ಡಾ| ಚನ್ನಪ್ಪ ಕಟ್ಟಿ ತಮ್ಮ ಸರಳ ಜೀವನ, ಸಂಯಮ, ಶಿಸ್ತು, ಶ್ರಮ, ಸತತ ಅಧ್ಯಯನದ ಫಲವಾಗಿ ಕನ್ನಡ ಸಾರಸತ್ವ ಲೋಕದ ಶಿಖೀರದವರೆಗೆ ಬೆಳೆದಿದ್ದಾರೆ. ಅವರ ಸಾಹಿತ್ಯ ಸೇವೆ ನಿರಂತರ ನಡೆಯಲಿ. ಕನ್ನಡ ಸಾಹಿತ್ಯ ಶ್ರೀಮಂತಿಕೆಯಲ್ಲಿ ಅವರ ಶ್ರಮ ಅಡಗಲಿ ಎಂದರು.

ಕರ್ನಾಟಕ ಕೇಂದ್ರಿಯ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ವಿಕ್ರಮ ವಿನಾಜಿ ಅವರು ಡಾ| ಚನ್ನಪ್ಪ ಕಟ್ಟಿ ಅವರ ಏಕತಾರಿ ಕಥಾ ಸಂಕಲನ ಪರಿಚಯಿಸುತ್ತ, ಕಟ್ಟಿ ಅವರು ಮಾಸ್ತಿ ಅವರ ನವೋದಯ ಶೈಲಿಯ ಗ್ರಾಮೀಣ ಸೊಗಡು ತುಂಬಿದ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ ಎಂದರು.

ಏಕತಾರಿ ಕಥೆಗಳಲ್ಲಿ ಮಣ್ಣಿನ ವಾಸನೆ ನೆಲದ ಸೆಳೆತವಿದೆ. ಗ್ರಾಮದ ಮತ್ತು ನಗರದ ಬದುಕಿನ ನಡುವೆ ಚಲಿಸುವಿಕೆಯ ಹೋಯ್ದಾಟವಿದೆ. ಮಾಗಿದ ಪಕ್ವತೆಯ ಮನಸ್ಸಿನಿಂದ ಮೂಡಿದ ಕಥೆಗಳಲ್ಲಿ ನಿರಾಡಂಬರವಿದೆ. ಇಲ್ಲಿರುವ 9 ಕಥೆಗಳು ವಿಶೇಷವಾಗಿವೆ ಎಂದು ಹೇಳಿದರು.

ಅಕ್ಕ ಮಹಾದೇವಿ ಮಹಿಳಾ ವಿವಿ ಕಲಾ ನಿಕಾಯದ ಡೀನ್‌ ಡಾ| ನಾಮದೇವ ಗೌಡ ಮಾತನಾಡಿ, ಹಿಂದಿಯಲ್ಲಿ ಪ್ರೇಮಚಂದ್‌ ಹಾಗೂ ಫಣಿಶ್ವರ ರೇಣು ಅವರು ಚಿತ್ರಿಸಿದ ಗ್ರಾಮೀಣ ಬದುಕನ್ನು ಬೇರೆ ಯಾರಿಂದಲೂ ಕಟ್ಟಿಕೊಡಲು ಆಗಿಲ್ಲ. ಆದರೆ ಡಾ| ಚನ್ನಪ್ಪ ಕಟ್ಟಿ ಅವರು ತಮ್ಮ ಏಕತಾರಿ ಕಥಾ ಸಂಕಲನದಿಂದ ಸಾಧಿಸಿ ತೋರಿಸಿದ್ದಾರೆ. ಏಕತಾರಿ ಕಥಾ ಸಂಕಲನದ 9 ಕಥೆಗಳನ್ನು ಹಿಂದಿ ಭಾಷೆಗೆ ಅನುವಾದ ಮಾಡಿ ಪ್ರಕಟಿಸುವುದಾಗಿ ಭರವಸೆ ನೀಡಿದರು.

ಲೇಖಕ ಡಾ| ಚನ್ನಪ್ಪ ಕಟ್ಟಿ, ಚನ್ನಪಟ್ಟಣದ ಪ್ರಕಾಶಕ ಪಲ್ಲವ ವೆಂಕಟೇಶ್‌ ಮಾತನಾಡಿದರು.

ಶಹಾಪುರದ ಚಂದ್ರಕಾಂತ ಕರದಳ್ಳಿ, ಧಾರವಾಡದ ಲಲಿತಾ ಪಾಟೀಲ, ಬಾದಾಮಿಯ ವಿ.ಟಿ. ಪೂಜಾರಿ, ಡಾ| ಜಿ.ಎಂ. ವಾರಿ, ಮಕ್ಕಳ ಸಾಹಿತಿ ಹ.ಮ. ಪೂಜಾರ, ವಿ.ಡಿ. ವಸ್ತ್ರದ, ಎಂ.ಎಸ್‌. ಹಯ್ನಾಳಕರ, ಡಾ| ಎಂ.ಎಸ್‌. ಮಧುಬಾವಿ, ಶರಣಪ್ಪ ವಾರದ, ಅಶೋಕ ವಾರದ, ಮಹಾಂತೇಶ ಪಟ್ಟಣಶೆಟ್ಟಿ, ಶಿವಣ್ಣ ಗೋಸಾನಿ, ಬಸವರಾಜ ಗೋಡಕಿಂಡಿಮಠ, ಡಾ| ರಮೇಶ ಕತ್ತಿ, ಗುರುನಾಥ ಅರಳಗುಂಡಗಿ ಇದ್ದರು.

ದೇವು ಮಾಕೊಂಡ ಸ್ವಾಗತಿಸಿದರು. ಮನು ಪತ್ತಾರ ನಿರೂಪಿಸಿದರು. ಚಂದ್ರಶೇಖರ ಚೌರ ವಂದಿಸಿದರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.