ತುಂತುರು ಮಳೆಗೆ ನೆಲಕ್ಕೊರಗಿದ ಭತ್ತ
3-4 ದಿನದಿಂದ ಮೋಡ ಕವಿದ ವಾತಾವರಣ ಹತ್ತಿ-ಜೋಳ-ಕಡ್ಲಿ ಬೆಳೆಗೆ ಕೀಟ ಬಾಧೆ
Team Udayavani, Dec 4, 2019, 12:46 PM IST
ಚಂದ್ರಶೇಖರ ಯರದಿಹಾಳ
ಸಿಂಧನೂರು: ತಾಲೂಕಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಮುಸುಕಿದ ವಾತಾವರಣ ಮತ್ತು ಆಗಾಗ ತುಂತುರು ಮಳೆ ಸುರಿಯುತ್ತಿದ್ದು ಭತ್ತ, ತೊಗರಿ, ಕಡ್ಲಿ ಸೇರಿ ವಿವಿಧ ಬೆಳೆ ಬೆಳೆದ ರೈತರು ಬೆಳೆ ರಕ್ಷಣೆಗಾಗಿ ಪರದಾಡುವಂತಾಗಿದೆ.
ತಾಲೂಕಿನ ನೀರಾವರಿ ಆಶ್ರಿತ ಪ್ರದೇಶಗಳಾದ ಜವಳಗೇರಾ, ಪಗಡದಿನ್ನಿ, ಹಂಚಿನಾಳ ಕ್ಯಾಂಪ್, ಸಿಂಗಾಪುರ, ಮುಕ್ಕುಂದಾ, ಆಯನೂರು, ಧಡೇಸಗೂರು, ಕೆಂಗಲ್, ಸಾಲಗುಂದಾ, ಹೆಡಗಿನಾಳ, ಹುಡಾ ಸೇರಿದಂತೆ ಇತರೆಡೆಗಳಲ್ಲಿ ಕಟಾವಿಗೆ ಬಂದಂತಹ ಭತ್ತವು ನೆಲಕ್ಕುರುಳುವಂತಾಗಿದ್ದು, ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಒಣ ಬೇಸಾಯದ ಪ್ರದೇಶಗಳಾದ ಕಲ್ಮಂಗಿ, ಹತ್ತಿಗುಡ್ಡ, ಹಿರೇಬೇರ್ಗಿ, ಚಿಕ್ಕಬೇರ್ಗಿ, ಸಂಕನಾಳ, ಬಪ್ಪೂರು, ಗುಡಗಲದಿನ್ನಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಹಿಂಗಾರಿನಲ್ಲಿ ತೊಗರಿ, ಕಡ್ಲಿ, ಹತ್ತಿ, ಜೋಳ ಇತರೆ ಬೆಳೆಯಲಾಗಿದೆ. ಈಗ ಮೋಡ ಮುಸುಕಿದ ವಾತಾವರಣ ಮತ್ತು ಅಕಾಲಿಕ ಮಳೆಯಿಂದಾಗಿ ಈ ಬೆಳೆಗಳಿಗೆ ಕೀಟಬಾಧೆ ತಗಲುವಂತಾಗಿದೆ. ತುಂತುರು ಮಳೆಗೆ ಕಡ್ಲಿ, ತೊಗರಿ, ಹತ್ತಿ ಉದುರುವಂತಾಗಿದೆ.
ಕಡ್ಲಿ ಬೆಳೆ ಹುಳಿ ಕಳೆದುಕೊಳ್ಳುವಂತಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ನಾಲ್ಕೈದು ವರ್ಷಗಳಿಂದ ಮಳೆ ಇಲ್ಲದೇ ಹಾಗೂ ಕಾಲುವೆಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದರು. ಮುಂಗಾರಿನಲ್ಲಿ ತಡವಾಗಿಯಾದರೂ ಉತ್ತಮ ಮಳೆ ಆಗಿದೆ. ಜೊತೆಗೆ ಕಾಲುವೆಗೆ ನೀರು ಹರಿಬಿಡಲಾಗಿದೆ. ಈ ಬಾರಿಯಾದರೂ ಉತ್ತಮ ಬೆಳೆ ಬೆಳೆಯಬೇಕೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ಸುರಿಯುತ್ತಿರುವ ಅಕಾಲಿಕ ಮಳೆ ಸಂಕಷ್ಟ ತಂದೊಡ್ಡಿದೆ.
ಅಕಾಲಿಕ ತುಂತುರು ಮಳೆಯಿಂದಾಗಿ ಕಾಳುಕಟ್ಟಿದ ಭತ್ತದ ಬೆಳೆ ನೆಲಕ್ಕೆ ಉರುಳುತ್ತಿದೆ. ಹಿಂಗಾರು ಕಡಲೆ ಬೆಳೆಗೆ ಹುಳಿ ಕಳೆದುಕೊಳ್ಳುತ್ತಿದೆ. ಹೂವು, ಮಗ್ಗು ಉದುರುತ್ತಿದೆ. ಇದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ರವಿಗೌಡ ಮಲ್ಲದಗುಡ್ಡ,
ರೈತ ಮುಖಂಡ
ಕಳೆದ ಮೂರ್ನಾಲ್ಕು ದಿನಗಳಿಂದ ವಾತಾವರಣದಲ್ಲಿ ಏರುಪೇರಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಚಂಡ ಮಾರುತದ ಬಿಸಿ ತಟ್ಟಿದೆ. ಈಗಾಗಲೇ ಕೆಲವು ಕಡೆ ರೈತರು ಭತ್ತ ಕಟಾವು ಮಾಡಿದ್ದಾರೆ. ಇನ್ನೂ ಕೆಲ ರೈತರು ಈ ವಾತಾವರಣಕ್ಕೆ ಭತ್ತ ಕಟಾವು ಮಾಡದಂತಾಗಿದೆ. ಇಂತಹ ವಾತಾವರಣದಿಂದ ಯಾವುದೇ ತೊಂದರೆ ಆಗದು.
ಜಯಪ್ರಕಾಶ ದೇಸಾಯಿ,
ಕೃಷಿ ಇಲಾಖೆ ಅಧಿಕಾರಿ ಸಿಂಧನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ