ಕನ್ನಡ ಶಾಲೆ ಮಕ್ಕಳಿಗೆ ಅನ್ನಪೂರ್ಣ ಟಸ್ಟ್ನಿಂದ ಉಪಹಾರ
ಬಡ ಮಕ್ಕಳ ಏಳ್ಗೆಗೆ ಶ್ರಮಿಸಿ: ಶಾಸಕ ಸಿದ್ಧಾರಾಮ ಮ್ಹೇತ್ರೆ
Team Udayavani, Jul 22, 2019, 12:30 PM IST
ಸೊಲ್ಲಾಪುರ: ಅಕ್ಕಲಕೋಟ ತಾಲೂಕಿನ ನಾಗಣಸೂರ ಗ್ರಾಮದ ಸರಕಾರಿ ಕನ್ನಡ ಶಾಲೆಗಳ ಮಕ್ಕಳಿಗೆ ಸತ್ಯಸಾಯಿ ಅನ್ನಪೂರ್ಣಾ ಟ್ರಸ್ಟ್ ವತಿಯಿಂದ ಉಪಹಾರ ನೀಡಲಾಯಿತು
ಸೊಲ್ಲಾಪುರ: ಯುವಕರ ವಿಕಾಸಕ್ಕೆ ಶಿಕ್ಷಕರೊಂದಿಗೆ ಕೈ ಜೋಡಿಸಿದರೆ ಸಮಾಜದ ಋಣ ತೀರಿಸಲು ಸಹಾಯವಾಗುತ್ತದೆ ಎಂದು ಅಕ್ಕಲಕೋಟ ಶಾಸಕ ಸಿದ್ಧಾರಾಮ ಮ್ಹೇತ್ರೆ ಹೇಳಿದರು.
ಬೆಂಗಳೂರಿನ ಮುದ್ದೇನಹಳ್ಳಿಯ ಸತ್ಯಸಾಯಿ ಅನ್ನಪೂರ್ಣಾ ಟ್ರಸ್ಟ್ ವತಿಯಿಂದ ಅಕ್ಕಲಕೋಟ ತಾಲೂಕಿನ ನಾಗಣಸೂರ ಗ್ರಾಮದ ಸರಕಾರಿ ಕನ್ನಡ ಶಾಲೆಗಳ ಮಕ್ಕಳಿಗೆ ಬೆಳಗಿನ ‘ಉಚಿತ ಉಪಹಾರ’ ಸೇವೆಯ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸತ್ಯಸಾಯಿ ಅನ್ನಪೂರ್ಣಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಬೆಳಗಿನ ಉಚಿತ ಉಪಹಾರ ಸೇವೆ ಕಾರ್ಯ ಶ್ಲಾಘನೀಯವಾಗಿದ್ದು, ಗ್ರಾಮದ ದಾನಶೂರ ವ್ಯಕ್ತಿಗಳು, ಸಂಘ ಸಂಸ್ಥೆಗಳು ಇಂತಹ ಒಳ್ಳೆಯ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಸಿದ್ಧಾರಾಮ-ಶಂಕರ ಪ್ರತಿಷ್ಠಾನ ಅಧ್ಯಕ್ಷ ಸಂಜಯ ನಾವಿಂದಗಿ ಮಾತನಾಡಿ, ಪ್ರತಿ ಯೊಬ್ಬರೂ ತಮ್ಮ ಗ್ರಾಮದ ಶಾಲೆಗಳ ವಿಕಾಸಕ್ಕಾಗಿ ಮತ್ತು ಏಳ್ಗೆಗೆ ಶ್ರಮಿಸಬೇಕು ಎಂದರು.
ವಿಶ್ವನಾಥ ಬಿರಾಜದಾರ ಮಾತನಾಡಿ, ಗ್ರಾಮದ ವಿಧ್ಯಾರ್ಥಿಗಳ ಹೊಟ್ಟೆ ತುಂಬಿಸುವ ಸತ್ಯಸಾಯಿ ಟ್ರಸ್ಟ್ ಸೊಲ್ಲಾಪುರ ವಿಭಾಗದ ಮುಖ್ಯಸ್ಥೆ ಗೀತಾ ನಾವಿಂದಗಿ ಕಾರ್ಯ ಮೆಚ್ಚುವಂತದ್ದು ಎಂದರು.
ಸಿದ್ಧೇಶ್ವರ ಸಕ್ಕರೆ ಕಾರ್ಖಾನೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಬಿರಾಜದಾರ, ಸತ್ಯಸಾಯಿ ಅನ್ನಪೂರ್ಣಾ ಟ್ರಸ್ಟ್ ವಿಭಾಗದ ಮುಖ್ಯಸ್ಥೆ ಗೀತಾ ನಾವಿಂದಗಿ, ಹಿರಿಯ ವಿಜ್ಞಾನಿ ರಾಜು ನಾವಿಂದಗಿ, ನೇಹಾ ನಾವಿಂದಗಿ, ಗ್ರಾಪಂ ಮಾಜಿ ಸದಸ್ಯ ಮಲ್ಲಿನಾಥ ಕಲ್ಯಾಣಿ, ನೇಹಾ ನಾವಿಂದಗಿ, ಲಕ್ಷೀಬಾಯಿ ಭಾಸಗಿ ವೇದಿಕೆಯಲ್ಲಿದ್ದರು.
ಶರಣಪ್ಪ ಫುಲಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಶರಣ ಮೆØೕತ್ರೆ ನಿರೂಪಿಸಿದರು, ಬಸವರಾಜ ಗುರವ ವಂದಿಸಿದರು.
ಧನ ಸಹಾಯ: ಅಕ್ಕಲಕೋಟ ತಾಲೂಕಿನ ಹಿಪ್ಪರಗಿ ವಸತಿ ಶಾಲೆ, ನಾಗಲಗಾಂವ ವಸತಿ ಶಾಲೆ, ಬಂಧು ನಗರ ವಸತಿ ಶಾಲೆ ಮತ್ತು ಇಂದಿರಾ ನಗರ ವಸತಿ ಶಾಲೆ ಹೀಗೆ ನಾಲ್ಕು ವಸತಿ ಶಾಲೆಗಳಿಗೆ ಸತ್ಯಸಾಯಿ ಅನ್ನಪೂರ್ಣಾ ಟ್ರಸ್ಟ್ನ ಶಾಂತಾ ನಾವಿಂದಗಿ, ಪುಷ್ಪಾ ನೂಲಿ, ನೇಹಾ ನಾವಿಂದಗಿ ಹಾಗೂ ರೋಹಿತ ಪಾಟೀಲ ಬೆಳಗಿನ ಉಚಿತ ಉಪಹಾರಕ್ಕಾಗಿ ಒಂದು ವರ್ಷಕ್ಕೆ ಬೇಕಾಗುವಷ್ಟು ಧನಸಹಾಯ ಮಾಡಿದರು.
ಸತ್ಯಸಾಯಿ ಅನ್ನಪೂರ್ಣಾ ಟ್ರಸ್ಟ್ ದೇಶದ ಸುಮಾರು 15 ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಸುಮಾರು 26 ಸಾವಿರ ಶಾಲೆಗಳಲ್ಲಿ ಪ್ರತಿನಿತ್ಯ ಎರಡು ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಉಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಾರಾಷ್ಟ್ರದ ಕನ್ನಡ ಶಾಲೆಗಳ ಅಳಿವು-ಉಳಿವಿಗಾಗಿ ಕನ್ನಡ ಶಾಲೆ ವಿದ್ಯಾರ್ಥಿಗಳಿಗೆ ಬೆಳಗಿನ ಉಚಿತ ಉಪಹಾರ ನೀಡಲಾಗಿದೆ.
•ಗೀತಾ ನಾವಿಂದಗಿ,
ಸತ್ಯಸಾಯಿ ಟ್ರಸ್ಟ್ ಮುಖ್ಯಸ್ಥೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ