ಚಂದ್ರಗುತ್ತಿಯ ಜೀವ ವೈವಿಧ್ಯಕ್ಕೆ ಕಾಯಕಲ್ಪ

ಅಪರೂಪದ ಪ್ರಾಣಿಗಳ ಬಗ್ಗೆ ಜಾಗೃತಿ-ಅರಿವು ಕಾರ್ಯಕ್ರಮ

Team Udayavani, Oct 16, 2019, 12:49 PM IST

16-October-10

ಎಚ್‌.ಕೆ.ಬಿ. ಸ್ವಾಮಿ

ಸೊರಬ: ಐತಿಹಾಸಿಕ, ಪುರಾಣ ಪ್ರಸಿದ್ಧ ಹಾಗೂ ಹಲವು ಜೀವ ಸಂಕುಲಗಳನ್ನು ಹೊಂದಿರುವ ತಾಲೂಕಿನ ಚಂದ್ರಗುತ್ತಿಯ ಜೀವ ವೈವಿದ್ಯತೆಯ ಮೇಲೆ ಬೆಳಕು ಚೆಲ್ಲುವ ಯತ್ನ ನಡೆದಿದೆ.

ಅಪರೂಪದ ಪ್ರಾಣಿಗಳ ಬಗ್ಗೆ ಜಾಗೃತಿ ಹಾಗೂ ಪಾರಂಪರಿಕ ಜ್ಞಾನಗಳ ದಾಖಲೀಕರಣ ಮತ್ತು ಸಸ್ಯ ಸಂಪತ್ತಿನ ಕುರಿತು ಅರಿವು ಮೂಡಿಸುವ ಯತ್ನ ನಡೆಸಲಾಗುತ್ತಿದೆ. ಸುಮಾರು 26,667 ಹೆಕ್ಟೇರ್‌ ಅರಣ್ಯ ಪ್ರದೇಶವನ್ನೊಳಗೊಂಡ ಸೊರಬ ತಾಲೂಕಿನ ಭಾಗವನ್ನು ಮಲೆನಾಡು, ಅರೆ ಮಲೆನಾಡೆಂಡು ವಿಭಾಗಿಸಬಹುದಾಗಿದೆ. ಇಲ್ಲಿ ಪ್ರಮುಖವಾಗಿ ನಿತ್ಯ ಹಸಿರು ಮತ್ತು ಅರೆ ನಿತ್ಯ ಹಸಿರು ಅರಣ್ಯ (ಕಾನು), ನಿತ್ಯ ಹಸಿರು ಮತ್ತು ಅರೆ ನಿತ್ಯ ಹಸಿರನ್ನುಳ್ಳ ನಶಿಸಿರುವ ಹಂತ, ಎಲೆ ಉದುರುವ ಕಾಡು, ಗಿಡ ಮತ್ತು ಮರಗುಳುಳ್ಳ ಹುಲ್ಲು ಬನಿ ಜಾಡಿ (ಹುಲ್ಲು ಗಾವಲು) ಎಂದು ಇಬ್ಭಾಗಿಸಬಹುದಾಗಿದೆ.

ಚಂದ್ರಗುತ್ತಿಯ ಸುತ್ತಲಿನ ಪ್ರದೇಶ ಹಾಗೂ ಇಲ್ಲಿನ ಐತಿಹಾಸಿಕ ಕೋಟೆಯ ಪ್ರದೇಶವನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ನೇತೃತ್ವದಲ್ಲಿ ವಕೀಲ ಎಚ್‌.ಎಂ. ಪ್ರಶಾಂತ ಹುನವಳ್ಳಿ, ವಾಜಗಾರ್‌ನ ಪರಿಸರ ತಜ್ಞ, ಲೇಖಕ ಉಮಾಪತಿ ಭಟ್‌, ಕಂಪ್ಯೂಟರ್‌ ಶಿಕ್ಷಕ ವಸಂತ್‌ ಬಾಪಟ್‌ ಪಾಲ್ಗೊಂಡು ವರದಿಯನ್ನು ರಚಿಸಿದ್ದಾರೆ.

ಚಂದ್ರಗುತ್ತಿಯ ವರದಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌, ವೃಕ್ಷಲಕ್ಷ ಆಂದೋಲನ ಸೇರಿ ವಿವಿಧ ಸ್ಥಳೀಯ ಸಂಸ್ಥೆಯವರು ಈ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ ಭೂ ವೈವಿಧ್ಯತೆ, ಜಲ ವೈವಿಧ್ಯತೆ ಅವುಗಳ ಉಪ ವಿಧಗಳು, ಅಧ್ಯಯನ ಪ್ರದೇಶ, ಇತಿಹಾಸದ ವೈವಿಧ್ಯತೆ, ಜನಪದ ಜ್ಞಾನ, ಪ್ರಾಣಿ ವೈವಿಧ್ಯ, ಸಸ್ಯ ವೈವಿಧ್ಯ ಇವು ಪ್ರಮುಖ ಘಟಕಗಳಾಗಿವೆ. ಸುಮಾರು 8-9 ತಿಂಗಳ ಶ್ರಮದ ಫಲವಾಗಿ ವರದಿ ತಯಾರಾಗಿದೆ.

ಊಹೆ, ಕಲ್ಪಿತ ವಿಚಾರಗಳನ್ನು ಗಮನಿಸಿ, ದಾಖಲಾತಿಯಲ್ಲಿ ಕೈ ಬಿಡಲಾಗಿದೆ. ಆದರೆ ಕೆಲವು ಅಗತ್ಯ, ಔಚಿತ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಹೆಚ್ಚು ವಿವರವುಳ್ಳ ಲೇಖನಗಳನ್ನು ಬಳಸಿಕೊಳ್ಳಲಾಗಿದೆ ಎಂಬುದು ಗಮನಾರ್ಹ ಸಂಗತಿ. ಕ್ಷೀಣಿಸುತ್ತಿರುವ ಜೀವ ಸಂಕುಲಗಳು: ತರಿ ಜಮೀನಿನ ಬೆಳೆಗಳಿಗೆ ಹಾಗೂ ಖುಷ್ಕಿ ಬೇಸಾಯಕ್ಕೆ ಹೆಚ್ಚು ರಾಸಾಯನಿಕ ಬಳಸುತ್ತಿರುವುದರಿಂದ ಕಪ್ಪೆಗಳ ಸಂಕುಲ ವಿನಾಶದಂಚಿಗೆ ತಲುಪಿವೆ. ಕಪ್ಪೆ, ಕೇರೆ ಹಾವುಗಳ ಸಂಖ್ಯೆಯೂ ತಗ್ಗಿದೆ. ಹಾಗೆಯೇ ಕಾಗೆ, ಗುಬ್ಬಿಗಳ ಸಂತತಿಯೂ ವಿರಳವಾಗಿದ್ದು, ಹದ್ದುಗಳು ಇಲ್ಲವೇ ಇಲ್ಲ ಎನ್ನುವಂತಾಗಿದೆ. ಹಲವು ಕಾಡು ಪ್ರಾಣಿಗಳು ವಿರಳವಾಗಿವೆ. ಇವುಗಳ ಅಧ್ಯಯನದಲ್ಲಿ ಸುಮಾರು 350ಕ್ಕೂ ಹೆಚ್ಚು ವಿಧದ ಸಸ್ಯ ಸಂಕುಲಗಳು ಕಂಡು ಬಂದಿವೆ.

ಅಪರೂಪದ ಸಸ್ಯರಾಶಿ, ಔಷಧೀಯ ಸಸ್ಯಗಳು, ಬೆಲೆಬಾಳುವ ಮರಮುಟ್ಟುಗಳು ನಾಶವಾಗುತ್ತಿವೆ. ಜೊತೆಯಲ್ಲಿ ಗಣಿಗಾರಿಕೆಯಿಂದ ಸಾಕಷ್ಟು ದುಷ್ಪರಿಣಾಮ ಎದುರಾಗಿದ್ದು, ಭವಿಷ್ಯದಲ್ಲಿ ಜನತೆ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು. ಈ ನಿಟ್ಟಿನಲ್ಲಿ ಹಲವು ಪ್ರಮುಖ ಮಾಹಿತಿಗಳು ಅಧ್ಯಯನದಿಂದ ಬೆಳಕಿಗೆ ಬಂದಿದೆಯಾದರೂ, ಇದು ಆತಂಕಕಾರಿ ವಿಷಯವೇ ಸರಿ. ನಮ್ಮ ಭೂಮಿ, ನಮ್ಮ ನೆಲೆ, ನಮ್ಮ ಜಲ, ನಮ್ಮ ಆವರಣದ ಕುರಿತು ಇರಬೇಕಾದ ಅವಿನಾಭಾವ ಸಂಬಂಧ ಕಳಚಿಕೊಂಡಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಇಂದು ಋಣಾತ್ಮಕ ಚಿಂತನೆ ಬದಿಗಿಟ್ಟು, ಧನಾತ್ಮಕ ಚಿಂತನೆ, ಆಲೋಚನೆ ನಡೆಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕಿದೆ. ಈ ನಿಟ್ಟಿನಲ್ಲಿ ಪರಿಸರ ಜಾಗೃತಿ ಮೂಡಿಸುವ ಜೊತೆಗೆ  ರ್ಕಾರಕ್ಕೆ ಎಚ್ಚರಿಕೆಯ ಗಂಟೆಯನ್ನು ವರದಿಯಲ್ಲಿ ತಿಳಿಸಲಾಗುತ್ತಿದೆ ಎಂದರೆ ತಪ್ಪಾಗಲಾರದು.

ಟಾಪ್ ನ್ಯೂಸ್

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.