ಎಫ್‌ಎಂ ರೈನ್‌ಬೋ ಪ್ರಸಾರ ಸ್ಥಗಿತ !

ಆಕಾಶವಾಣಿ ಕೇಳುಗರಿಗೆ ತೀವ್ರ ನಿರಾಸೆ ಸಂಸದರಿಂದ ಸೂಕ್ತ ಕ್ರಮದ ಭರವಸೆ

Team Udayavani, Sep 28, 2019, 6:11 PM IST

28-Sepctember-32

„ರಮೇಶ್‌ ಕರುವಾನೆ
ಶೃಂಗೇರಿ: ಇತ್ತೀಚಿನ ವರ್ಷದಲ್ಲಿ ಜನಪ್ರಿಯವಾಗಿದ್ದ ಎಫ್‌ಎಂ ರೈನ್‌ಬೋ ಕಾರ್ಯಕ್ರಮ ಸ್ಥಗಿತಗೊಳಿಸಿರುವ ಇಲ್ಲಿನ ಆಕಾಶವಾಣಿ ಮರು ಪ್ರಸಾರ ಕೇಂದ್ರ, ಅರ್ಥವೇ ಆಗದ ರಾಂಚಿ ಕೇಂದ್ರದ ಕಾರ್ಯಕ್ರಮ ಪ್ರಸಾರ ಮಾಡುವ ಮೂಲಕ ಕೇಳುಗರಿಗೆ ತೀವ್ರ ನಿರಾಸೆ ಮೂಡಿಸಿದೆ.

ಮಲೆನಾಡಿನಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಾಗ ಮನೋರಂಜನೆಗಿರುವ ಏಕೈಕ ವಸ್ತು ಆಕಾಶವಾಣಿಯಾಗಿದೆ. ಮೀಡಿಯಂ ವೇವ್‌ ತರಂಗಾಂತರದ ಭದ್ರಾವತಿ, ಮಂಗಳೂರು ಮತ್ತಿತರ ನಿಲಯಗಳು ಈಗ ಸ್ಪಷ್ಟವಾಗಿ ಕೇಳದೇ ಇರುವುದರಿಂದ ಸ್ವಾಭಾವಿಕವಾಗಿ ರೈನ್‌ಬೋ ಕೇಳುಗರ ಸಂಖ್ಯೆ ವೃದ್ಧಿಸಿದೆ. ಪ್ರತಿ ದಿನ ಶೃಂಗೇರಿಯಿಂದ ಕರೆ ಮಾಡುತ್ತಿದ್ದ ಶ್ರೋತೃಗಳು ಇದ್ದರು. ಪ್ರಶ್ನೋತ್ತರ, ಇಷ್ಟವಾದ ಚಲನಚಿತ್ರ ಗೀತೆ ಮತ್ತಿತರ ಕಾರ್ಯಕ್ರಮಕ್ಕೆ ಪ್ರತಿದಿನ ಈ ಭಾಗದ ಒಂದಷ್ಟು ಶ್ರೋತೃಗಳು ಇದ್ದರೆ, ಪ್ರತಿ ದಿನವೂ ಆಲಿಸುತ್ತಿದ್ದ ಶ್ರೋತೃಗಳು ಸಾಕಷ್ಟು ಇದ್ದರು ಎಂಬುದು ಗಮನಾರ್ಹ.

ಇಲ್ಲಿನ ಎಫ್‌ಎಂ ಮರು ಪ್ರಸಾರ ಕೇಂದ್ರದಿಂದ ಇದುವರೆಗೂ ಏಫ್‌ಎಂ ರೈನ್‌ಬೋ 101.3 ಹೆಸರಿನಲ್ಲಿ ಕನ್ನಡ ಸಂಗೀತ, ಮಾಹಿತಿ ಕಾರ್ಯಕ್ರಮಗಳು, ಸ್ಪರ್ಧೆ, ಗಂಟೆಗೊಮ್ಮೆ ವಾರ್ತೆ, ಚಿತ್ರಗೀತೆ ಎಲ್ಲವೂ ಬೆಳಗ್ಗೆ 5 ರಿಂದ ರಾತ್ರಿ 11 ರವರೆಗೂ ಪ್ರಸಾರ ಆಗುತ್ತಿತ್ತು. ಯಾವುದೋ ಕೆಲಸ ಮಾಡುವವರು ಎಫ್‌ಎಂ ಮೂಲಕ ತಮ್ಮ ಕರ್ತವ್ಯಕ್ಕೂ ತೊಂದರೆಯಾಗದಂತೆ ಮನೋರಂಜನೆ, ಸುದ್ದಿಯನ್ನು ಪಡೆಯುತ್ತಿದ್ದರು.

ಬೆಂಗಳೂರಿನ ಆಕಾಶವಾಣಿ ಕೇಂದ್ರದಿಂದ ರಾಜ್ಯದ ಹಲವಾರು ಜಿಲ್ಲೆಯಲ್ಲಿ ಕಾರ್ಯಕ್ರಮಗಳು ಮರು ಪ್ರಸಾರವಾಗುತ್ತಿತ್ತು. ಆದರೆ, ಕಳೆದ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಎಫ್‌ಎಂ ರೈನ್‌ ಬೋ ತೆಗೆದುಹಾಕಿ ಅದರ ಬದಲಿಗೆ ರಾಂಚಿ ಕೇಂದ್ರವನ್ನು ಸೇರಿಸಿದ್ದೇ ಈ ಗೊಂದಲಕ್ಕೆ ಕಾರಣ ಎನ್ನಲಾಗಿದೆ.

ಆದರೆ, ರಾಜ್ಯದ ಜನತೆಗೆ ಆಗಿರುವ ಅನ್ಯಾಯವನ್ನು ದೆಹಲಿಗೆ ಮುಟ್ಟಿಸುವುದೇ ದೊಡ್ಡ ಹೋರಾಟವಾಗಿದೆ. ಸಂಬಂಧಿ ಸಿದ ಅಧಿಕಾರಿಗಳಿಗೆ
ಈ ಬಗ್ಗೆ ಅರಿವು ಸಹ ಇದ್ದಂತಿಲ್ಲ. ಆದರೂ, ರಾಜ್ಯದ ಲಕ್ಷಾಂತರ ಎಫ್‌ಎಂ ಕೇಳುಗರಿಗಂತೂ ಅನ್ಯಾಯವಾಗಿದೆ.

ದೂರದರ್ಶನ ಮರುಪ್ರಸಾರಕ್ಕಾಗಿ ಮಾರುತಿ ಬೆಟ್ಟದಲ್ಲಿ ಸ್ಥಾಪಿತವಾದ ಮರು ಪ್ರಸಾರ ಕೇಂದ್ರಕ್ಕೆ ಆಕಾಶವಾಣಿಯ ಎಫ್‌ಎಂ ರೈನ್‌ಬೋ ಮರು ಪ್ರಸಾರವನ್ನು ಸೇರ್ಪಡೆಗೊಳಿಸಲಾಗಿತ್ತು. ದೂರದರ್ಶನ ಮರುಪ್ರಸಾರ ಸ್ಥಗಿತಗೊಂಡರೂ ಪ್ರಸ್ತುತ ಆಕಾಶವಾಣಿ ಮರುಪ್ರಸಾರ ವ್ಯವಸ್ಥೆಯೂ ಇದೆ. ಕೇಂದ್ರದ ಮೇಲುಸ್ತುವಾರಿ ಕೊರತೆ, ಯುಪಿಎಸ್‌ ಇಲ್ಲದೇ ಕೆಲವೊಮ್ಮೆ ಹಲವು ದಿನಗಳ ಕಾಲ ಮತ್ತು ವಿದ್ಯುತ್‌ ನಿಲುಗಡೆ ಆಗುತ್ತಿದ್ದಂತೆ ಪ್ರಸಾರ ಸ್ಥಗಿತಗೊಳ್ಳುತ್ತಿತ್ತು.

ಈ ಬಗ್ಗೆ ಕೇಳುಗರು ಹಾಕಿದ ತೀವ್ರ ಒತ್ತಾಯ, ಒತ್ತಡದಿಂದಾಗಿ ಇವೆಲ್ಲವೂ ಈಗ ಸುಸ್ಥಿತಿಗೆ ಬಂದಿತು ಎನ್ನುವಾಗ ಹಠಾತ್‌ ಆಗಿ ರೈನ್‌ಬೋ 101.3 ಕನ್ನಡ ಕಾರ್ಯಕ್ರಮಕ್ಕೆ ಎತ್ತಂಗಡಿ ಮಾಡಿ, ಬೇರೆ ಯಾವುದೋ ಪರಭಾಷಾ ನಿಲಯದ ಕಾರ್ಯಕ್ರಮವನ್ನು ಈ ಕೇಂದ್ರಕ್ಕೆ ಜೋಡಿಸಿ, ಮರುಪ್ರಸಾರ ಮಾಡಲಾಗುತ್ತಿದೆ. ಇದರಿಂದ ಕೇಳುಗರು ನಿರಾಸೆಗೊಂಡಿದ್ದಾರೆ. ಈ ಕುರಿತು ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಗೆ ದೂರು ಸಲ್ಲಿಸಲು ಕ್ಷೇತ್ರದ ಸಂಸದರ ನೆರವನ್ನು ಯಾಚಿಸಲಾಗಿತ್ತು.

ಆದರೆ, ಸಂಸದೆ ಶೋಭಾ ಕರಂದ್ಲಾಜೆ ಅವರು ಕ್ಷೇತ್ರಕ್ಕೆ ಬರುತ್ತಿಲ್ಲ. ಬಂದರೂ ಮಾತಿಗೂ ಸಿಗುತ್ತಿಲ್ಲ ಎಂಬುದು ಆಕಾಶವಾಣಿ ಕೇಳುಗರ ದೂರಾಗಿದೆ. ಇನ್ನಾದರೂ ಸಂಸದರು ಈ ಸಮಸ್ಯೆಯನ್ನು ಗಮನಿಸಿ, ಆಕಾಶವಾಣಿಯ ಮುಖ್ಯಸ್ಥರಿಗೆ ಈ ಹಿಂದಿನಂತೆ ಎಫ್‌ಎಂ ರೈನ್‌ಬೋ 101.3 ಕಾರ್ಯಕ್ರಮವನ್ನು ಈ ಮರುಪ್ರಸಾರ ಕೇಂದ್ರಕ್ಕೆ ಜೋಡಿಸುವ ಕೆಲಸ ಮಾಡಬೇಕು ಎಂದು ಈ ಭಾಗದ ಶ್ರೋತೃಗಳು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.