ಅರಣ್ಯ ಇಲಾಖೆ ಕಚೇರಿ ಕಟ್ಟಡ ದುಸ್ಥಿತಿ

„ನಿರ್ವಹಣೆಯಿಲ್ಲದೇ ಪಾಳುಬಿದ್ದ ಬಂಗಲೆ „ನೀರು ಸೋರಿ ಕಡತಗಳು ಹಾಳಾಗುವ ಸಾಧ್ಯತೆ

Team Udayavani, Nov 16, 2019, 6:02 PM IST

16-November-32

ರಮೇಶ ಕರುವಾನೆ
ಶೃಂಗೇರಿ:
ಸುತ್ತಲೂ ಬೆಳೆದಿರುವ ಪೊದೆ, ಗಿಡಗಂಟಿಗಳಿಂದ ಕೂಡಿದ ಆಶ್ರಯ ಮನೆಯಂತಿರುವ ಕೊಠಡಿಗಳು ಒಂದು ರೀತಿಯಲ್ಲಿ ಭೂತಬಂಗಲೆಯಂತಿರುವ ಕಟ್ಟಡ. ಇದು ಬೇರೆನಲ್ಲ ಪಟ್ಟಣದ ಹೊರವಲಯದ ಹನುಮಂತನಗರದಲ್ಲಿರುವ ಅರಣ್ಯ ಇಲಾಖಾ ಕಚೇರಿಯ ಕಟ್ಟಡದ ಸ್ಥಿತಿಗತಿ. ತಾಲೂಕಿನಲ್ಲಿ ಪ್ರಮುಖ ಇಲಾಖಾ ಕಚೇರಿಗಳಾದ ಕಂದಾಯ, ಪೊಲೀಸ್‌ ಇಲಾಖಾ ಕಚೇರಿಗಳು ಈಗಾಗಲೇ ಮೇಲ್ದರ್ಜೆಗೇರಿದೆ. ಆದರೆ ಅರಣ್ಯ ಇಲಾಖಾ ಕಚೇರಿ ಮಾತ್ರಾ ಆಶ್ರಯ ಮನೆಯ ಗುಡಿಸಲಿನಂತಿದೆ. ಸರ್ಕಾರ ಇದುವರೆಗೂ ಇಂತಹ ಪ್ರಮುಖ ಕಚೇರಿಯನ್ನು ಮೇಲ್ದರ್ಜೆಗೆ ಏರಿಸದೆ ಹಾಗೆಯೇ ಬಿಟ್ಟಿರುವುದು ಅಚ್ಚರಿ ತಂದಿದೆ.

ಕಳೆದ 2 ದಶಕಗಳ ಹಿಂದೆ ಪಟ್ಟಣದ ಹರಿಹರ ಬೀದಿಯಲ್ಲಿ ಅರಣ್ಯ ಇಲಾಖಾ ಕಚೇರಿ ಇತ್ತು. ಕಿಷ್ಕಿಂದೆಯಾಗಿದ್ದ ಕೊಠಡಿಗಳು ಸಮರ್ಪಕ ಗೋದಾಮು ವ್ಯವಸ್ಥೆ ಇಲ್ಲದೆ ಇರುವುದರಿಂದ ಪಟ್ಟಣದ ಹೊರವಲಯದ ಹನುಮಂತನಗರಕ್ಕೆ ಅರಣ್ಯ ಇಲಾಖಾ ಕಚೇರಿ ಸ್ಥಳಾಂತರಗೊಂಡಿತು. ಆದರೆ ಇದುವರೆಗೂ ಇಲಾಖಾ ಕಚೇರಿ ಮೇಲ್ದರ್ಜೆಗೇರದೆ ಸಮರ್ಪಕ ನಿರ್ವಹಣೆ ಇಲ್ಲದೆ ಕಟ್ಟಡ ಪಾಳುಬಿದ್ದ ಬಂಗಲೆಯಂತಿದೆ. ಸೂಕ್ತ ನಿರ್ವಹಣೆಯಿಲ್ಲದ ಹಳೆಯ ಕಟ್ಟಡ ಭೂತ ಬಂಗಲೆಯಂತಾಗಿದೆ. ಕಟ್ಟಡದ ಮೇಲ್ಚಾವಣಿ ಹೆಂಚುಗಳು ಅಲ್ಲಲ್ಲಿ ಜಖಂಗೊಂಡಿದ್ದು, ವಿದ್ಯುತ್‌ ಸಂಪರ್ಕದ ವೈರುಗಳು ಜೋತು ಬಿದ್ದಿದ್ದು, ಯಾವ ಸಮಯದಲ್ಲಾದರು ಶಾರ್ಟ್‌ ಸರ್ಕ್ನೂಟ್‌ನಿಂದ ಅಪಾಯ ಒದಗುವ ಸಂಭವವೇ ಹೆಚ್ಚಾಗಿದೆ.

ಮಳೆಗಾಲದ ಸಮಯದಲ್ಲಿ ಕೊಠಡಿಯ ಒಳಗೆ ನೀರು ತೊಟ್ಟಿಕ್ಕಿ ಕಡತಗಳು ನಾಶವಾಗುವ ಸಂಭವ. ಒಪ್ಪವಾಗಿ ಜೋಡಿಸಿಡಲು ಸೂಕ್ತ ಪೀಠೊಪಕರಣಗಳಿಲ್ಲ. ಸರ್ಕಾರಕ್ಕೆ ಹೊಸ ಕಟ್ಟಡ ನಿರ್ಮಿಸಿಕೊಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರೂ ಕೂಡ ಹೊಸ ಕಟ್ಟಡದ ಭಾಗ್ಯ ಇನ್ನೂ ದೊರಕಿಲ್ಲ. ಇಲ್ಲಿನ ಕಚೇರಿಗೆ ಬರುವ ಸಾರ್ವಜನಿಕರು ತಮ್ಮ ಕೆಲಸಗಳು ಸುಸೂತ್ರವಾಗದೆ ದಿನವಿಡೀ ಕಚೇರಿಯಲ್ಲಿ ಕಳೆಯುವಂತಾದ ಸಂದರ್ಭದಲ್ಲಿ ಕ್ಯಾಂಟೀನ್‌, ಹೋಟೆಲ್‌ಗ‌ಳಿಲ್ಲದೆ ಪರದಾಡುವ ಸ್ಥಿತಿ ಇದೆ. ಇನ್ನು ಜೆರಾಕ್ಸ್‌, ಡಿ.ಟಿ.ಪಿ ಸೆಂಟರ್‌, ಸ್ಟೇಷನರಿ ಅಂಗಡಿಗಳು ಕಚೇರಿ ಸಮೀಪವಿಲ್ಲದೆ ಸಾರ್ವಜನಿಕರು ಪಟ್ಟಣಕ್ಕೆ ಬರಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.

ಕಳ್ಳ ಕಾಕರಿಂದ ವಶಪಡಿಸಿಕೊಂಡ ಮರದ ದಿಮ್ಮಿ ನಾಟ ಸಂರಕ್ಷಣೆಗೆ ಗೋದಾಮು ವ್ಯವಸ್ಥೆಯಲ್ಲಿ ಜತೆಗೆ ಸೌದೆ ಡಿಪೋಗೆ ಸೂಕ್ತ ಗೋದಾಮು ಇಲ್ಲದೆ ಸೌದೆ, ನಾಟಮರಗಳು ಬೆಲೆಬಾಳುವ ನಂದಿ, ಬೀಟೆ, ಹಲಸು, ಸಾಗುವಾನಿ, ಹೆಬ್ಬಲಸು, ಅಕೇಶಿಯ ಮುಂತಾದ ಮರಗಳ ತುಂಡುಗಳಿವೆ. ಇವುಗಳು ನಾಶವಾಗುವ ಸಂಭವವೇ ಹೆಚ್ಚು. ಇಲಾಖಾ ಕಚೇರಿ ಪಕ್ಕದಲ್ಲಿರುವ ವಾಹನದ ಪಾರ್ಕಿಂಗ್‌ ಶೆಡ್‌ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಶೆಡ್‌ನ‌ ಹೆಂಚುಗಳು ಅಲ್ಲಲ್ಲಿ ಒಡೆದಿದ್ದು, ಸೂಕ್ತ ನಿರ್ವಹಣೆ ಇಲ್ಲದೆ ವಾಹನ ಬಿಸಿಲು ಮಳೆಯಲ್ಲೇ ನಿಲ್ಲುವ ಸ್ಥಿತಿ. ಕಚೇರಿ ಸುತ್ತಮುತ್ತ ಸಿಬ್ಬಂದಿ ವಸತಿಗೃಹಗಳಿದ್ದರು ವಾಸಕ್ಕೆ ಮಾತ್ರ ಯೋಗ್ಯವಾಗಿಲ್ಲ.

ಸರ್ಕಾರ ತಾಲೂಕು ಕಚೇರಿ, ಪೊಲೀಸ್‌ ಠಾಣೆ ಕಚೇರಿಗಳನ್ನು ಮೇಲ್ದರ್ಜೆಗೆ ಏರಿಸಿದಂತೆ ಅರಣ್ಯ ಇಲಾಖಾ ಕಚೇರಿಯನ್ನು ಮೇಲ್ದರ್ಜೆಗೆ ಏರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.