ಜಲಮೂಲಗಳು ಬರಿದು; ಜಲಚರಗಳು ವಿಲವಿಲ

ಆಮ್ಲಜನಕದ ಕೊರತೆಯಿಂದ ಮೀನುಗಳ ಜೀವಕ್ಕೆ ಕುತ್ತು

Team Udayavani, Apr 3, 2019, 11:11 AM IST

3-April-5

ನಾಗಪಟ್ಟಣ ಬಳಿಯ ಸೇತುವೆ ಸನಿಹದಲ್ಲಿ ಪಯಸ್ವಿನಿ ಚಿತ್ರಣ.

ಸುಳ್ಯ : ಜಿಲ್ಲೆಯ ನದಿ, ಹೊಳೆಗಳಲ್ಲಿ ಹರಿವು ಕ್ಷೀಣಿಸಿ ಆಮ್ಲಜನಕ ಕೊರತೆ ಆಗಿ ಜಲಚರಗಳಿಗೆ ಕುತ್ತುಬಂದಿದೆ. ಒಂದೆಡೆ ಜನರು ಕುಡಿಯುವ ನೀರಿಗೆ ಪರದಾಡುತ್ತಿದ್ದರೆ, ಇನ್ನೊಂದೆಡೆ ನೀರೇ
ಆವಾಸ ಸ್ಥಾನವಾಗಿರುವ ಜಲಚರಗಳು ಜಲಾಶ್ರಯ ಇಲ್ಲದೆ ಸಾಯುವ ಸ್ಥಿತಿ ತಲುಪಿವೆ. ಕೆಂಡವಾಗಿರುವ ಬೇಸಗೆಯಲ್ಲಿ ನದಿ ಪಾತ್ರಗಳು ಬರಿದಾಗಿ, ಅಮೂಲ್ಯ ಪ್ರಾಕೃತಿಕ ಸಂಪತ್ತಾಗಿರುವ ಜಲಜೀವಿಗಳು ನಾಶದಂಚಿನತ್ತ ತಲುಪಿರುವುದು ಆತಂಕಕಾರಿಯಾಗಿದೆ.

ಜಲಚರಗಳಿಗೆ ಕುತ್ತು
ಜಿಲ್ಲೆಯಲ್ಲಿ ಶೇ. 95ಕ್ಕಿಂತ ಹೆಚ್ಚು ಪ್ರಮಾಣದ ಹೊಳೆ, ಕೆರೆ, ಬಾವಿಗಳು ಜನವರಿಯಲ್ಲಿಯೇ ಬತ್ತಿವೆ. ಅಲ್ಲಿರುವ ಜಲಚರಗಳು ಸಂಪೂರ್ಣವಾಗಿ ನಾಶವಾಗಿವೆ. ನದಿ, ತೋಡು, ಕೆರೆಗಳಲ್ಲಿ ನೀರು ಆರಿ ಹೋದರೂ ಜಲಚರಗಳು ಬದುಕುಳಿಯುವುದು ನೈಸರ್ಗಿಕ ವಿದ್ಯಮಾನ. ಆಳದ ಕೆಸರು, ಅಲ್ಲೂ ಒರತೆ ಕಡಿಮೆ ಆದ ಮೇಲೆ ಮಣ್ಣಿನೊಳಗೆ ಹೂತು ಹೋಗಿ ಮಳೆಗಾಲದಲ್ಲಿ ಮರಳಿ ಬರುವ ವ್ಯವಸ್ಥೆ ಜಲಚರಗಳಲ್ಲಿದೆ. ಆದರೆ ಈಗ ಸಣ್ಣ ಪುಟ್ಟ ತೋಡು, ಹೊಳೆಗಳಲ್ಲಿ ನೀರಿನ ಹರಿವು ಬೇಸಗೆಯ ಮೊದಲೇ ಬತ್ತುವ ಕಾರಣ ಮನುಷ್ಯನ ಬಳಕೆಗಾಗಿ ಯಂತ್ರಗಳ ಮೂಲಕ ಹೊಂಡ ತೋಡಲಾಗುತ್ತದೆ.

ಇದರಿಂದ ಲಭ್ಯ ಎಲ್ಲ ಒರತೆ ಪ್ರದೇಶ ಬತ್ತಿ ಹೋಗಿ ಜಲಚರಗಳಿಗೆ ಸ್ವರಕ್ಷಣೆಯ ಮಾರ್ಗಗಳಿಲ್ಲ. ಪರಿಣಾಮವಾಗಿ ಮೀನು, ಏಡಿ ಮೊದಲಾದವು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ ಎನ್ನುತ್ತಾರೆ ಜಲತಜ್ಞರು.

ನಾಲ್ಕು ವರ್ಷಗಳಲ್ಲೇ ಗರಿಷ್ಠ
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಅಕ್ಟೋಬರ್‌ ತನಕ ಮಳೆ ಬಂದು ಫೆಬ್ರವರಿಯವರೆಗೆ ನೀರಿನ ಹರಿವು ಇರುತ್ತಿತ್ತು. ಆದರೆ ನಾಲ್ಕು ವರ್ಷಗಳಿಂದ ಪರಿಸ್ಥಿತಿ ಬದಲಾಗಿ ಮಳೆಗಾಲ ಮುಗಿದ ಒಂದೇ ತಿಂಗಳಲ್ಲಿ ನದಿ, ತೋಡಿನಲ್ಲಿ ಹರಿವು ನಿಲ್ಲುತ್ತಿದೆ. ಇದಕ್ಕೆ ಮುಖ್ಯ ಕಾರಣ ಅರಣ್ಯ ನಾಶ, ಕಾಡಿನಲ್ಲಿ ನೀರಿನ ಹರಿವು ವ್ಯಾಪ್ತಿ ಕುಸಿತ ಮತ್ತು ಕಾಡ್ಗಿಚ್ಚು. ಫೆಬ್ರವರಿ ತನಕ ನೀರು ಹರಿಯುತ್ತಿದ್ದ ಸಂದರ್ಭ ಬೇಸಗೆಯ ಕೊನೆಯ ಎರಡು ತಿಂಗಳ ಕಾಲ ಜಲಚರಗಳು ಕೆಸರು ನೀರಿನಲ್ಲಿ ಬದುಕಬಹುದಿತ್ತು. ಆದರೆ ಈಗ ಫೆಬ್ರವರಿ ಹೊತ್ತಿಗೇ ನೀರಾಶ್ರಯಗಳು ಬರಡು ನೆಲವಾಗುವ ಕಾರಣ ಜಲಚರಗಳಿಗೆ ಆಮ್ಲಜನಕ, ಆವಾಸ ಸ್ಥಾನ ಕೊರತೆಯಾಗುತ್ತಿದೆ.

ಆವಾಸದ ಆಳ ಕಣ್ಮರೆ
ಪ್ರಮುಖ ಮೂಲ ನದಿಗಳಲ್ಲಿ ಆಳ ಪ್ರದೇಶ ಕಣ್ಮರೆಯಾಗಿರುವುದು ಆವಾಸಕ್ಕೆ ಇಲ್ಲವಾಗಲು ಮುಖ್ಯ ಕಾರಣ. ಆಳವು ಹೂಳು, ಮರಳು ಮಿಶ್ರಿತ ಮಣ್ಣು ತುಂಬಿ ಕಣ್ಮರೆಯಾಗಿದೆ. ಯಂತ್ರಗಳ ಅಗೆತಕ್ಕೆ ಸಿಲುಕಿ ಸ್ವರೂಪ ಕಳೆದುಕೊಂಡಿದೆ. ಕೊಡಗಿನ ಪ್ರಾಕೃತಿಕ ಅವಘಡದಿಂದ ಹರಿದು ಬಂದ ಅಪಾರ ಮಣ್ಣು ಪಯಸ್ವಿನಿ ನದಿಯ ಆಳವನ್ನು ಮುಚ್ಚಿದೆ. ಪುಟ್ಟ ತೊರೆ, ತೋಡುಗಳನ್ನು ಇಲ್ಲವಾಗಿಸಿದೆ. ಇವೆಲ್ಲವೂ ಜಲಚರಗಳ ಸಂತಾನೋತ್ಪತ್ತಿ, ಸ್ವರಕ್ಷಣೆಗೆ ಅಡ್ಡಿಯಾಗಿವೆ.

ಪ್ರಕೃತಿ ವಿರೋಧಿ ಕೃತ್ಯ
ಹಸುರು ಸಂಪತ್ತಿನ ಮೇಲೆ ನಮ್ಮ ದಬ್ಟಾಳಿಕೆಯ ಫಲವಿದು. ಬದುಕುವ ಎಲ್ಲ ದಾರಿಗಳನ್ನು ನಾವು ಕಸಿದುಕೊಂಡ ಕಾರಣ ಹಲವು ಜಲಚರಗಳು ಅವನತಿ ಹೊಂದಿವೆ. ನದಿ ಪಾತ್ರದಲ್ಲಿ ದೊರೆಯಬಹುದಾದ ಎಲ್ಲ ನೀರನ್ನು ಮೇಲೆತ್ತುತ್ತಿರುವುದರಿಂದ ಜಲಚರಗಳಿಗೆ ಬದುಕಲು ಅಸಾಧ್ಯ ಸ್ಥಿತಿ ಉಂಟಾಗಿದೆ. ಅವುಗಳು ವಾಸಿಸಬಲ್ಲ ಕಟ್ಟಕಡೆಯ ಸೀಮಿತ ಪ್ರದೇಶದಲ್ಲಿಯೂ ನಾವು ಅತಿಯಾಸೆ ಪ್ರದರ್ಶಿಸುವುದರಿಂದ ಅವು ವಿನಾಶದಂಚಿಗೆ ತಲುಪಿವೆ.
-ದಿನೇಶ್‌ ಹೊಳ್ಳ,
ಪರಿಸರ ಹೋರಾಟಗಾರ

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.