ವಿದ್ಯಾವಾರಿಧಿ ಶ್ರೀ ಕೆಳಗಿಳಿಸಲು ಸಹಮತ

ಕಣ್ವ ಶಾಖಾ ವಿಪ್ರ ಸಮಾಜ ಬಾಂಧವರ ಸಭೆಯಲ್ಲಿ ಒಮ್ಮತದ ನಿರ್ಧಾರ ಅರ್ಹರ ಆಯ್ಕೆ ಬಳಿಕ ಅದ್ಧೂರಿ ಪೀಠಾರೋಹಣ

Team Udayavani, Sep 21, 2019, 11:24 AM IST

21-Sepctember–2

ಸುರಪುರ: ಮೈಸೂರು ಮೂಲದ ಯುವತಿ ಜತೆ ಅಶ್ಲೀಲ ಸಂಭಾಷಣೆ ನಡೆಸಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಯಾದಗಿರಿ ಜಿಲ್ಲೆಯ ಹುಣಸಗಿ ಸಮೀಪದ ಹುಣಸಿಹೊಳೆ ಕಣ್ವ ಮಠಾಧೀಶ ವಿದ್ಯಾವಾರಿಧಿ ತೀರ್ಥ ಯತಿಗಳನ್ನು ಪೀಠದಿಂದ ಕೆಳಗಿಳಿಸಲು ನಿರ್ಣಯ ಕೈಗೊಳ್ಳಲಾಗಿದೆ.

ಅಖೀಲ ಭಾರತ ಕಣ್ವ ಶಾಖಾ ವಿಪ್ರ ಸಮಾಜ ಬಾಂಧವರು ನಗರದ ದರ್ಬಾರ್‌ನಲ್ಲಿ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಣ್ವ ಶಾಖಾ ವಿಪ್ರ ಸಮಾಜದ ಮುಖಂಡ ಮಲ್ಹಾರಾವ್‌ ಕುಲಕರ್ಣಿ ಸಿಂದಗೇರಿ, ಹುಣಸಿಹೊಳೆ ಕಣ್ವಮಠಕ್ಕೆ ಐತಿಹಾಸಿಕ ಪರಂಪರೆಯಿದೆ. ರಾಜಾಶ್ರಯ ನೀಡಿ ಮಠದ
ಶ್ರೇಯೋಭಿವೃದ್ಧಿಗೆ ಅರಸರು ನೀಡಿದ ಕೊಡುಗೆ ಅಪಾರ. ಅಂದಿನಿಂದ ಇಂದಿನವರೆಗೂ ಪ್ರತಿ ಧರ್ಮ ಕಾರ್ಯವೂ ಅರಸು ಮನೆತನದವರ ಮಾರ್ಗದರ್ಶನದಲ್ಲಿ ನಡೆದುಕೊಂಡು ಬಂದಿದೆ. ಆದರೆ, ಮಠದ ಯತಿ ವಿದ್ಯಾವಾರಿಧಿ ತೀರ್ಥರು
ಅನೈತಿಕತೆಯಿಂದ ನಡೆದುಕೊಳ್ಳುವುದರೊಂದಿಗೆ ಶ್ರೀಮಠಕ್ಕೆ ಮತ್ತು ಸಂಸ್ಥಾನಕ್ಕೆ ಚ್ಯುತಿ ತಂದಿದ್ದಾರೆ. ಹೀಗಾಗಿ ಅವರನ್ನು ತಕ್ಷಣದಿಂದಲೇ ಪೀಠದಿಂದ ಕೆಳಗಿಳಿಸಲು ನಿರ್ಧರಿಸಲಾಗಿದೆ
ಎಂದರು.

ರಾಯಚೂರಿನ ಎಸ್‌.ಕೆ. ಪುರೋಹಿತ ಮಾತನಾಡಿ, ಯತಿಗಳ ನಡೆಯಿಂದ ಇಡೀ ವಿಪ್ರ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಉನ್ನತ ಸ್ಥಾನದಲ್ಲಿದ್ದು ಈ ರೀತಿ ನಡೆದುಕೊಂಡಿರುವುದು ಮಠದ ಭಕ್ತರಲ್ಲಿ ನೋವು ತರಿಸಿದೆ. ಕೂಡಲೇ ಪೀಠದಿಂದ ಕೆಳಗಿಳಿಸಬೇಕು ಎಂಬುದು ತಮ್ಮ
ಜಿಲ್ಲೆಯ ವಿಪ್ರರ ಮನವಿಯಾಗಿದೆ ಎಂದರು.

ಬಳ್ಳಾರಿಯ ಎ.ಜೆ.ದೇಸಾಯಿ ಮಾತನಾಡಿ, ವಿದ್ಯಾವಾರಿಧಿ ತೀರ್ಥರು ಇಡೀ ಯತಿ ವರ್ಗಕ್ಕೆ ಕಳಂಕ ತಂದಿದ್ದಾರೆ. ಪೀಠದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದ್ದಾರೆ. ತಕ್ಷಣದಿಂದಲೇ ಅವರನ್ನು ಪೀಠದಿಂದ ಕೆಳಗಿಳಿಸಬೇಕು. ಸೂಕ್ತ ಯತಿಯೊಬ್ಬರ ನೇಮಕಕ್ಕೆ ಸಹಕರಿಸಬೇಕು ಎಂದು ಕೋರಿದರು.

ಕಮಲಾಪುರದ ಸತ್ಯನಾರಾಯಣ ಮಾತನಾಡಿ, ಯತಿಗಳ ಕರ್ಮಕಾಂಡ ದೇಶದ ವಿಪ್ರ ಸಮಾಜವನ್ನೇ ಘಾಸಿಗೊಳಿಸಿದೆ. ಸ್ತ್ರೀ ಕುಲವನ್ನು ಗೌರವಿಸುವ ಸಮಾಜದಲ್ಲಿ ಘಟನೆ ನಡೆದಿರುವುದು ನೋವು ತಂದಿದೆ. ಇದೊಂದು ನಾಚಿಕೆಗೇಡಿನ ಸಂಗತಿ. ಇದಕ್ಕೆ ಯಾರದ್ದೂ ಸಮ್ಮತಿಯಿಲ್ಲ. ಪೀಠದಿಂದ ಕೆಳಗಿಳಿಸಲು
ಕಲಬುರಗಿ ಜಿಲ್ಲೆಯ ವಿಪ್ರರ ಸಹಮತವಿದೆ ಎಂದರು.

ಬೀದರನ ಪ್ರಾಣೇಶಾಚಾರ್ಯ ಒಂದಾಲಿ ಮಾತನಾಡಿ, ಯತಿಗಳ ನಡೆ ಸುಸಂಸ್ಕೃತ ಸಮಾಜಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ. ಮಠದಲ್ಲಿ ಅವರು ಮುಂದುವರಿದಿದ್ದೇ ಆದಲ್ಲಿ ವಿಪ್ರರ್ಯಾರೂ ಮಠಕ್ಕೆ ಹೆಜ್ಜೆ ಇಡುವುದಿಲ್ಲ ಎಂಬ ನಿರ್ಧಾರ ಕೈಗೊಂಡಿದ್ದೇವೆ. ಹೀಗಾಗಿ ಅವರನ್ನು ಕೆಳಗಿಳಿಸಲು ನಮ್ಮ ಸಂಪೂರ್ಣ
ಸಹಕಾರವಿದೆ ಎಂದರು.

ಸಿಂಧನೂರಿನ ಕಮಲಾಬಾಯಿ, ಕೊಪ್ಪಳದ ರಾಧಾಬಾಯಿ ಪುರೋಹಿತ ಮಾತನಾಡಿ, ಯತಿಗಳ ಕರ್ಮಕಾಂಡ ಸಮಾಜದೆದುರು ತೆರೆದಿಟ್ಟ ಮೈಸೂರು ಮೂಲದ ಸಂತ್ರಸ್ತೆ
ಯುವತಿಗೆ ಕಣ್ವ ಶಾಖೆ ಸಮಸ್ತ ಮಹಿಳೆಯರ ಪರವಾಗಿ ಹಾರ್ದಿಕ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಒಂದು ವೇಳೆ ಮಹಿಳೆ ಹೊರ ಹಾಕದೆ ಇದ್ದರೆ ಈ ಸ್ವಾಮೀಜಿ
ಮಠಕ್ಕೆ ಬರುವ ನಮ್ಮಂತ ಅದೆಷ್ಟೋ ಅಸಹಾಯಕ ಭಕ್ತರ ಮಾನಹರಣ ಮಾಡುವ ಅಪಾಯವಿತ್ತು. ಅವರನ್ನು ಕೂಡಲೇ ಕೆಳಗಿಳಸಬೇಕು ಎಂದು ಮನವಿ ಮಾಡಿದರು.

ವಿವಿಧ ಜಿಲ್ಲೆಗಳ ಕಣ್ವ ಶಾಖಾ ವಿಪ್ರರಾದ ವೇದಮೂರ್ತಿ ರಂಗನಾಥಾಚಾರ್ಯ, ಗುರುರಾಜಚಾರ್ಯ ಪುಣ್ಯವಂತರ, ಶಂಕರ ಪುರೋಹಿತ, ನಾರಾಯಣಚಾರ್ಯ, ವಾಸುದೇವಚಾರ್ಯ, ಬಿ.ಪಿ. ಕುಲಕರ್ಣಿ,
ಭೀಮಸೇನಾಚಾರ್ಯ, ಮಂಜುನಾಥ ಕುಲಕರ್ಣಿ,
ರಾಘವೇಂದ್ರಚಾರ್ಯ ರಾಜಪುರೋಹಿತ, ಅಶೋಕ ಕುಲಕರ್ಣಿ ಹೇಮನೂರ ಮಾತನಾಡಿ, ವಿದ್ಯಾವಾರಿಧಿ ತೀರ್ಥರನ್ನು ಪೀಠದಿಂದ ಕೆಳಗಿಳಿಸುವಂತೆ ಒತ್ತಾಯಿಸಿ ಸಲಹೆ-ಸೂಚನೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಮಾತನಾಡಿ, ವಿಪ್ರರೆಲ್ಲರ ಅಭಿಪ್ರಾಯ ಆಲಿಸಿದ್ದೇನೆ. ಮೊದಲು ನೀವೆಲ್ಲರೂ ಒಟ್ಟಾಗಿ ಸೇರಿ ಚರ್ಚಿಸಿ ಒಂದು ನಿರ್ಣಯಕ್ಕೆ ಬನ್ನಿ. ಯೋಗ್ಯರನ್ನು ಪೀಠಕ್ಕೆ ಕರೆತರಲು ಸೂಕ್ತ ವ್ಯಕ್ತಿಯನ್ನು ಹುಡುಕಾಡಿ. ಇಂತಹವರೇ ಅರ್ಹರು ಎಂದು ಗುರುತಿಸಿಕೊಟ್ಟಲ್ಲಿ ಅವರನ್ನು ಕರೆ ತಂದು ಪರಂಪರೆಯಂತೆ ರಾಜಮರ್ಯಾದೆಯಿಂದ ಪೀಠಾಲಂಕಾರ ಸಮಾರಂಭ ಅದ್ಧೂರಿಯಾಗಿ ಮಾಡೋಣ ಎಂದು ಭರವಸೆ ನಿಡಿದರು.
ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಲಹೆ ಸೂಚನೆ ನೀಡಿದರು. ರಾಜಾ ಸೀತಾರಾಮ ನಾಯಕ, ರಾಜಾ ಲಕ್ಷ್ಮೀ ನಾರಾಯಣ ನಾಯಕ, ಕೃಷ್ಣ ದೇವರಾಯ ನಾಯಕ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವಿಪ್ರ ಸಮಾಜ ಬಾಂಧವರು ಭಾಗವಹಿಸಿದ್ದರು.

ಸುರಪುರ: ದರ್ಬಾರ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ವಿಪ್ರ ಸಮಾಜದವರನ್ನು ಉದ್ದೇಶಿಸಿ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಮಾತನಾಡಿದರು.

ಟಾಪ್ ನ್ಯೂಸ್

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.