ಸುರಪುರ ಸೀತಾಫಲಕ್ಕೆ ಡಿಮ್ಯಾಂಡ್
ಬೆಟ್ಟಗುಡ್ಡಗಳಲ್ಲೇ ಹೆಚ್ಚಾಗಿ ಬೆಳೆಯುತ್ತೆಅರಣ್ಯ ಇಲಾಖೆಯವರು 2 ವರ್ಷಕ್ಕೊಮ್ಮೆ ಟೆಂಡರ್ ಕರೆಯುತ್ತಾರೆ
Team Udayavani, Oct 30, 2019, 10:55 AM IST
ಸಿದ್ದಯ್ಯ ಪಾಟೀಲ
ಸುರಪುರ: ತಾಲೂಕಿನ ಬಹುತೇಕ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಬೆಳೆದ ಸೀತಾಫಲ ಹಣ್ಣಿಗೆ ರಾಜ್ಯ ಸೇರಿದಂತೆ ನೆರೆ ರಾಜ್ಯಗಳಲ್ಲೂ ಭಾರೀ ಬೇಡಿಕೆ ಬಂದಿದೆ.
ಮಳೆ ಪ್ರಮಾಣ ಕಳೆದ ಮೂರ್ನಾಲ್ಕು ವರ್ಷಗಳಿಂದ ಕಡಿಮೆ ಆಗಿದ್ದರಿಂದ ಇಳುವರಿ ಕಡಿಮೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ ಸಾಕಷ್ಟು ಮಳೆಯಾಗಿದ್ದರಿಂದ ಉತ್ತಮ ಇಳುವರಿ ಬಂದಿದೆ. 2 ವರ್ಷಕ್ಕೊಮ್ಮೆ ಟೆಂಡರ್: ಈ ಹಣ್ಣು ಬೆಟ್ಟಗುಡ್ಡಗಳಲ್ಲಿ ಬೆಳೆಯುವುದರಿಂದ ಇದು ಅರಣ್ಯ ಇಲಾಖೆಗೆ ಒಳಪಡುತ್ತಿದ್ದು, ಅರಣ್ಯ ಇಲಾಖೆಯವರು 2 ವರ್ಷಕ್ಕೊಮ್ಮೆ ಟೆಂಡರ್ ಕರೆಯುತ್ತಾರೆ. ಕಳೆದ ಬಾರಿ 2017-18ನೇ ಸಾಲಿಗೆ 4 ಲಕ್ಷ ರೂ.ಗಳಿಗೆ ಗುತ್ತಿಗೆ ನೀಡಲಾಗಿತ್ತು. ಪ್ರಸ್ತಕ ವರ್ಷ 2019-20ನೇ ಸಾಲಿಗೆ 3.55 ಲಕ್ಷ ರೂ.ಗಳಿಗೆ ಟೆಂಡರ್ ಆಗಿದೆ.
ಇಲ್ಲೇ ಹೆಚ್ಚು ಬೆಳೆಯುತ್ತೆ: ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಬರುವ ಈ ಸೀತಾಫಲ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲೂ ದೊರೆಯುತ್ತದೆ. ತಾಲೂಕಿನ ಕುಂಬಾರಾಪೇಟ, ತಳವಾರಗೇರಾ, ವಾಗಣಾಗೇರಿ, ಜಾಲಿಬೆಂಚಿ, ಮಾಚಗುಂಡಾಳ, ದೇವರ ಗೋನಾಲ, ಟಿ.ಬೊಮ್ಮನಳ್ಳಿ, ಸಿದ್ದಾಪುರ, ವಾರಿ ಸಿದ್ದಾಪುರ, ಹಸನಾಪುರ, ರತ್ತಾಳ, ದೇವಿಕೇರಿ, ಲಕ್ಷ್ಮೀಪುರ, ಬಿಜಾಸ್ಪೂರ ಸೇರಿದಂತೆ ನಗರದ ಸುತ್ತಮುತ್ತಲಿನ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಸೀತಾಫಲ ಹೆಚ್ಚಾಗಿ ಬೆಳೆಯುತ್ತಿದೆ.
ಪ್ರತಿದಿನ ಸರಬರಾಜು: ಪ್ರತಿ ದಿನಕ್ಕೆ 2ರಿಂದ 3 ಕ್ವಿಂಟಲ್ ಸೀತಾಫಲವನ್ನು ಹೈದ್ರಾಬಾದ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ.
ವಿವಿಧ ದರ ನಿಗದಿ: ಈ ಹಿಂದೆ 200 ರಿಂದ 300 ರೂ. ಗೆ ನೂರು ಸೀತಾಫಲ ಸಿಗುತ್ತಿದ್ದವು. ಆದರೀಗ ಬೆಲೆ ಗಗನಕ್ಕೇರಿದೆ. 20 ಸೀತಾಫಲಕ್ಕೆ 100 ರೂಪಾಯಿ ದರದಂತೆ ಮಾರುತ್ತಿದ್ದಾರೆ. ಒಂದು ಹಣ್ಣನ್ನು 10 ರೂ.ಗೆ ಮಾರಲಾಗುತ್ತಿದೆ.
ಸ್ಥಳೀಯವಾಗಿ ಮಾರಾಟ: ನಗರದ ಬಸ್ ನಿಲ್ದಾಣ, ಗಾಂಧಿ ವೃತ್ತ, ಅರಮನೆ ಮಾರ್ಗ, ಕೋತಿ ಮಹಲ, ಪಟೇಲ್ ವೃತ್ತ, ತರಕಾರಿ ಮಾರುಕಟ್ಟೆ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಸೀತಾಫಲ ಮಾರಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್
MUST WATCH
ಹೊಸ ಸೇರ್ಪಡೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್