ಎನ್ಐಟಿಕೆ: ಭದ್ರತಾ ವ್ಯೂಹ ರಚನೆ
ಕಾರ್ಯಕರ್ತರ ನಿಯಂತ್ರಣಕ್ಕೆ ತಡೆ ಬೇಲಿ, ಪೊಲೀಸ್ ಕಾವಲು
Team Udayavani, May 22, 2019, 10:20 AM IST
ಲೋಕಸಭೆ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಎನ್ಐಟಿಕೆ ಪರಿಸರದಲ್ಲಿ ತಡೆಬೇಲಿ ನಿರ್ಮಾಣ ಕಾರ್ಯ ನಡೆಯಿತು.
ಸುರತ್ಕಲ್: ಲೋಕಸಭೆ ಚುನಾವಣೆ ಮತ ಎಣಿಕೆ ಮೇ 23ರಂದು ನಡೆಯುವ ಎನ್ಐಟಿಕೆ ಪರಿಸದಲ್ಲಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಎನ್ಐಟಿಕೆ ಒಳಗೆ ಮತ್ತು ಮುಂಭಾಗ ಸರ್ಪಗಾವಲು ಹಾಕಲು ಸಿದ್ಧತೆ ನಡೆಸಲಾಗಿದೆ. ಹಲವಾರು ಕಾರ್ಮಿಕರು ರಾ.ಹೆ. 66ರಲ್ಲಿ ತಡೆಬೇಲಿ ರಚನೆ ಕಾಯಕದಲ್ಲಿ ನಿರತರಾಗಿದ್ದಾರೆ. ಎನ್ಐಟಿಕೆ ಮುಂಭಾಗ ತಡೆಬೇಲಿ ರಚಿಸಲಾಗಿದೆ. ಶೀಟ್ ಅಳವಡಿಕೆ ಕಾರ್ಯ ಭರದಿಂದ ನಡೆಯುತ್ತಿದೆ. ಕಾರ್ಯಕರ್ತರಿಗೆ ಈ ಬಾರಿ ಮತ ಎಣಿಕೆ ಮುಂಭಾಗ ನಿಲ್ಲಲೂ ಅವಕಾಶವಿಲ್ಲ. ದೂರದ ತಡಂಬೈಲ್ ಮತ್ತು ಮುಕ್ಕ ವ್ಯಾಪ್ತಿವರೆಗೆ ಬಿಗಿ ಪೊಲೀಸ್ ಕಾವಲು ಇರಲಿದ್ದು, ಮತ ಎಣಿಕೆಯ ಘೋಷಣೆ ಕೇಳಲು ಮೈಕ್ಗಳನ್ನು ಅಳವಡಿಸಲಾಗಿದೆ.
ಎನ್ಐಟಿಕೆ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಚುನಾವಣ ಗುರುತಿನ ಚೀಟಿ ಹೊಂದಿರುವವರು ಮಾತ್ರ ಕೊಠಡಿಯೊಳಗೆ ಪ್ರವೇಶಿಸಬೇಕು, ಬೇರೆಯವರಿಗೆ ಅವಕಾಶವಿಲ್ಲ. ವೀಕ್ಷರ ಸಮ್ಮುಖ ಮತ ಎಣಿಕೆ ನಡೆಯಲಿದ್ದು ಟೇಬಲ್ ಅಳವಡಿಕೆ ಕಾರ್ಯ ನಡೆಸಲಾಗಿದೆ.
ಎಣಿಕಾ ನಡೆಸುವ ಅಧಿಕಾರಿಗಳು, ಏಜೆಂಟರು ಮತದಾನದ ರಹಸ್ಯ ಕಾಪಾಡಲು ಮೊಬೈಲ್ ಕೊಂಡೊಯ್ಯುದನ್ನು ನಿಷೇಧಿಸಲಾಗಿದೆ.
ಮೇ 23ರಂದು ಬೆಳಗ್ಗೆ 8ಕ್ಕೆ ಎಣಿಕೆ ಆರಂಭವಾಗಲಿದ್ದು, ಮೊದಲು ಬ್ಯಾಲೆಟ್ ಪೇಪರ್ ಎಣಿಕೆ ಮುಗಿದ ಅನಂತರ ಇವಿಎಂ, ವಿವಿಪ್ಯಾಟ್ ಎಣಿಕೆ ನಡೆಯಲಿದೆ. ಮಧ್ಯಮ ದವರಿಗಾಗಿ ಪ್ರತ್ಯೇಕ ಕೊಠಡಿ ಮತ್ತು ಮಾಹಿತ ಸಂಗ್ರಹಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ