ತಾಳಿಕೋಟೆ: ಗಣೇಶ ಮೂರ್ತಿಗಳ ವಿಸರ್ಜನೆ
Team Udayavani, Sep 8, 2019, 11:43 AM IST
ತಾಳಿಕೋಟೆ: ಡೋಣಿ ನದಿ ತೀರದಲ್ಲಿ ಮನೆಗಳಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ನಡೆಯಿತು
ತಾಳಿಕೋಟೆ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಗಣೇಶ ಉತ್ಸವ ಯುವಕ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾದ ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳನ್ನು ಐದನೇ ದಿನ ಸಾಮೂಹಿಕವಾಗಿ ಡೋಣಿ ನದಿಯಲ್ಲಿ ವಿಸರ್ಜಿಸಲಾಯಿತು.
ದಾರಿಯುದ್ದಕ್ಕೂ ಗಣಪತಿ ಮೂರ್ತಿ ಹೊತ್ತುಕೊಂಡು ಗಣಪತಿ ಬಪ್ಪಾ ಮೋರಯ್ಯ ಎಂಬ ನಾಮಾಂಕಿತ ಜಪಿಸುತ್ತ ಹಾಗೂ ಪಟಾಕಿ ಸಿಡಿಸುತ್ತ ಮೆರವಣಿಗೆ ಮೂಲಕ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ವಿಸರ್ಜಿಸಲಾಯಿತು.
ವಿವಿಧ ಚಲನ ಚಿತ್ರಗಳ ಗೀತೆಗಳ ಹಾಗೂ ವೀರ ಮಹಾಪುರುಷ ಛತ್ರಪತಿ ಶಿವಾಜಿ ಮಹಾರಾಜರ ಗೀತೆಗೆ ತಕ್ಕಂತೆ ಸಾವಿರಾರು ಯುವಕರ ನೃತ್ಯ ನೋಡುಗರಿಗೆ ಮನರಂಜನೆ ತಂದುಕೊಟ್ಟಿತು.
ಮೆರವಣಿಗೆಯಲ್ಲಿ ಭಗತ್ಸಿಂಗ್ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಲಾದ ಶಿವಾಜಿ ಮಹಾರಾಜರ ಪ್ರತಿರೂಪದ ಗಣೇಶ ಮೂರ್ತಿ ನೋಡುಗರ ಜನಮನ ಸೆಳೆಯುವುದರೊಂದಿಗೆ ಭಕ್ತಿಗೀತೆಗಳ ನಾದ ಭಕ್ತಿಮಾರ್ಗದತ್ತ ಕೊಂಡೊಯ್ದವು.
ಇನ್ನೂ ಏಳನೇ ದಿನದಂದು ಕೆಲ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳ ವಿಸರ್ಜನೆ ಜರುಗಿದರೆ, ಒಂಬತ್ತನೇ ದಿನಕ್ಕೆ ಹಿಂದೂ ಗಣಪತಿ ಮಹಾ ಮಂಡಳ ಪ್ರತಿಷ್ಠಾಪಿಸಿರುವ 15 ಅಡಿ ಎತ್ತರದ ಗಣೇಶ ಮೂರ್ತಿ ವಿಸರ್ಜನೆ ಜರುಗಲಿದೆ.
ಗಣೇಶ ಮೂರ್ತಿಗಳ ವಿಸರ್ಜನಾ ಸಮಯದಲ್ಲಿ ಅಹಿತಕರ ಘಟನೆ ಜರುಗದಂತೆ ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸೈ ಗೋವಿಂದೇಗೌಡ ಪಾಟೀಲ ಸಿಬ್ಬಂದಿಯೊಂದಿಗೆ ಬಂದೋಬಸ್ತ್ ಕೈಗೊಂಡಿದ್ದರು.
ಕೃತಕ ಹೊಂಡ: ಡೋಣಿ ನದಿಯಲ್ಲಿ ಮಳೆ ಅಭಾವದಿಂದ ನೀರಿನ ಕೊರತೆಯಾಗಿದೆ. ಇದರಿಂದ ಗಣೇಶ ಮೂರ್ತಿಗಳನ್ನು ಬಾವಿ ಮತ್ತು ಇನ್ನಿತರ ಕಡೆಗಳಲ್ಲಿ ವಿಸರ್ಜಿಸಿ ಶುದ್ಧ ನೀರು ಕಲುಷಿತಗೊಳ್ಳಬಾರದೆಂಬ ಉದ್ದೇಶದಿಂದ ಡೋಣಿ ನದಿಯಲ್ಲಿ ಪುರಸಭೆ ನಿರ್ಮಿಸಿದ್ದ ಕೃತಕ ಹೊಂಡದಲ್ಲಿ ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ವಿಸರ್ಜಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ
MUST WATCH
ಹೊಸ ಸೇರ್ಪಡೆ
Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?