ಜನರ ಆಶೋತ್ತರಗಳಿಗೆ ಸರ್ಕಾರ ಸ್ಪಂದಿಸಲಿ

„ಇಂಡಿಯನ್ನು ಸ್ವತಂತ್ರ ಜಿಲ್ಲಾಕೇಂದ್ರವನ್ನಾಗಿಸುವುದು ಬಹುಜನರ ಬೇಡಿಕೆ

Team Udayavani, Nov 8, 2019, 6:46 PM IST

8-November-25

ತಾಂಬಾ: ಜಿಲ್ಲೆಯಲ್ಲಿ ಮತ್ತೂಂದು ಜಿಲ್ಲೆಗಾಗಿ ಈಗಾಗಲೇ ಕೂಗು ಕೇಳಿ ಬರುತ್ತಿದೆ. ಸುಗಮ ಆಡಳಿತಕ್ಕಾಗಿ ಇಂಡಿಯನ್ನು ಸ್ವತಂತ್ರ ಜಿಲ್ಲಾ ಕೇಂದ್ರವನ್ನಾಗಿಸಬೇಕೆಂದು ಬಹು ಜನರ ಬೇಡಿಕೆಯಾಗಿದೆ. ಅಭಿವೃದ್ಧಿಯ ಮಾನ ದಂಡದ ಜೊತೆ-ಜೊತೆಗೆ ಸಾರ್ವಜನಿಕರ ಆಶೋತ್ತರಗಳಿಗೆ ಸ್ಪಂದಿಸಿ ಹಿತ ಕಾಪಾಡುವ ಮಹೋನ್ನತಿ ಮಹಾದಾಸೆ ಇಂಡಿ ಜಿಲ್ಲೆ ಎಂಬ ಸ್ವತಂತ್ರ ಮೈಲುಗಲ್ಲಿನಲ್ಲಿಡಗಿದೆ. ಇದರ ಬಗ್ಗೆ ಸರಕಾರ ಚಿಂತನೆ ಮಾಡಬೇಕಾಗಿದೆ ಎಂದು ಕನ್ನಡಪರ ಹೋರಾಟಗಾರ ಸಂತೋಷಕುಮಾರ ಎಸ್‌. ನಿಗಡಿ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಜನರ ಮತ್ತು ಜನರ ಭಾವನೆಗಳಿಗೆ ಸ್ಪಂದಿಸುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ಇದನ್ನು ಸರಕಾರ ಮುತುವರ್ಜಿವಹಿಸಿ ಗಡಿಭಾಗಕ್ಕೆ ಅಂಟಿಕೊಂಡ ಇಂಡಿಯನ್ನು ಸ್ವತಂತ್ರ ಜಿಲ್ಲಾ ಕೇಂದ್ರವನ್ನಾಗಿಸಬೇಕೆಂದು ಈ ಭಾಗದ ಸಾರ್ವಜನಿಕರ ಮುಖ್ಯ ಧ್ಯೇಯವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 13 ತಾಲೂಕುಗಳಿವೆ. ಅದಕ್ಕಾಗಿ ಆಡಳಿತಾತ್ಮಕ ದೃಷ್ಟಿಕೋನದಿಂದ ಇಂಡಿಯನ್ನು ಜಿಲ್ಲೆಯ ಸ್ಥಾನಮಾನ ನೀಡಬೇಕೆಂದು ಇದೇ ಸಂದರ್ಭದಲ್ಲಿ ಸರಕಾರಕ್ಕೆ ಒತ್ತಾಯಿಸಿದರು.

ಯಾರದೋ ಲಾಭಕ್ಕಾಗಿ ಜಿಲ್ಲಾ ಕೇಂದ್ರ ಕೇಳುತ್ತಿಲ್ಲ. ಎಲ್ಲರ ಹಿತಕ್ಕಾಗಿ ಕೂಗು ಕೇಳಿಬರುತ್ತಿದೆ. ಅದರಲ್ಲೂ ಮುಖ್ಯವಾಗಿ ನಮ್ಮ ಅಸ್ತಿತ್ವದ ಕುರುವಿನ ಉಳುವಿಗಾಗಿ, ಅಭಿವೃದ್ಧಿಗಾಗಿ, ಕೈಗಾರಿಕಾ, ವ್ಯವಹಾರಿಕ ಬೆಳವಣಿಗೆಗಾಗಿ, ಸಮಗ್ರ ನೀರಾವರಿ ಅಭಿವೃದ್ಧಿಗಾಗಿ, ಸಾರಿಗೆ ಸಂಪರ್ಕ ಬೆಳವಣಿಗೆಗಾಗಿ, ರೈತರ ಪ್ರಗತಿಗಾಗಿ, ಸಂಪನ್ಮೂಲಗಳ ಕ್ರೂಢೀಕರಣ ಜೊತೆ-ಜೊತೆಗೆ ಸದ್ಭಳಕೆಗಾಗಿ ಹೀಗೆ ಇದರ ಹಿಂದೆ ನೂರಾರು ಕನಸಿನ ಪ್ರಗತಿಯ ಚಿಂತನೆಗಳು ಅಡಗಿಕೊಂಡಿವೆ ಎಂದು ಹೇಳಿದರು.

ಇಂದಲ್ಲ ನಾಳೆ ಆಗಬೇಕಾಗಿರುವ ಜಿಲ್ಲಾ ಕೇಂದ್ರಗಳನ್ನು ಆದಷ್ಟು ಬೇಗನೆ ಘೋಷಿಸಿ ಅಭಿವೃದ್ಧಿಗೆ ಧಾರೆಯರೆಯಬೇಕು. ಇದಕ್ಕಾಗಿ ಕಾಲಹರಣ ಸಲ್ಲದು. ಇದು ನಮ್ಮ ಹೋರಾಟದ ಪೀಠಿಕೆಯಾಗಿದೆ. ಇಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿಸುವುದರಿಂದ ಯಾವುದೇ ನಷ್ಟ-ಕಷ್ಟಗಳಿಲ್ಲ. ಆದರೆ ಲಾಭದ ಅಂಶಗಳು ಹೆಚ್ಚಾಗಿ ಕಾಣುತ್ತವೆ. ಹೆಚ್ಚು ಸರಕಾರದ ಅನುದಾನ ಮೆಡಿಕಲ್‌ ಕಾಲೇಜು, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಸರಕಾರದ ಮುಖ್ಯ ಕಚೇರಿಗಳು ಮುಂದುವತಿದ ಸರಕಾರಿ ಆಸ್ಪತ್ರೆ, ಉಪನಿರ್ದೇಶಕ ಕಚೇರಿ, ಹೀಗೆ ಹತ್ತು ಹಲವಾರು ಚಿಂತನೆಗಳ ಪ್ರಗತಿಯ ಬಿಂಬ ಇಟ್ಟುಕೊಂಡು ಹೋರಾಟದ ಹಾದಿ ಹಿಡಿದಿದೆ. ಇಂಡಿ, ಸಿಂದಗಿ, ದೇವರಹಿಪ್ಪರಗಿ, ಚಡಚಣ ಮತ್ತು ಆಲಮೇಲ ಈ ಐದು ತಾಲೂಕುಗಳನ್ನೊಳಗೊಂಡ ಸ್ವತಂತ್ರ ಜಿಲ್ಲೆ ಕನಸಿನ ಜೊತೆಗೆ ಪ್ರಗತಿಯ ಚಿಗುರು ಕಾಣಬಹುದಾಗಿದೆ. ಅದಕ್ಕಾಗಿ ಪ್ರಗತಿಪರರು, ಸ್ವಾಮಿಜಿಗಳು, ಚಿಂತಕರು, ಸಾಹಿತಿಗಳು ರೈತರು, ವಿದ್ಯಾವಂತರು, ಹೋರಾಟ ಗಾರರು ಸೂಕ್ತವಾಗಿ ಸ್ಪಂದಿಸುತ್ತಿರುವುದು ಅಭಿನಂದ ನಾರ್ಹ ಎಂದರು.

ಇದೇ ಸಂದರ್ಭದಲ್ಲಿ ಸಾಹಿತಿ ಮಹಾಂತೇಶ ಅಲೇಗಾವಿ, ರಾಯಗೊಂಡ ಪೂಜಾರಿ, ಸಿದ್ದಗೊಂಡ ಹಿರೇಕುರಬರ, ರಾಯಗೊಂಡ ನಾಟೀಕಾರ, ಮಾಶೀಮ್‌ ವಾಲೀಕಾರ, ಭೀರಪ್ಪ ಪೂಜಾರಿ, ಪೂಜಪ್ಪ ಸಿಂದಗಿ, ಪರಶು ಬಿಸನಾಳ, ಹಣಮಂತ ಕಾಳೆ, ಮಾದುರಾಯಗೌಡ ಪಾಟೀಲ, ಪುಟ್ಟು ಪಾಟೀಲ, ಮಹಮ್ಮದ ವಾಲೀಕಾರ, ಮಹಾಂತೇಶ ಬಡದಾಳ, ಪೈಗಂಬರ ಹಚ್ಯಾಳ, ವಿಠ್ಠಲ ಮೂಲಿಮನಿ ಇದ್ದರು.

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.