ಮಂಗಗಳ ಹಾವಳಿ ತಡೆಗೆ ಹುಲಿಯಾದ ನಾಯಿ!
Team Udayavani, Nov 28, 2019, 1:36 PM IST
ರಾಂಚಂದ್ರ ಕೊಪ್ಪಲು
ತೀರ್ಥಹಳ್ಳಿ: ಮಲೆನಾಡಿನಲ್ಲಿನ ಕೃಷಿಕರಿಗೆ ತಮ್ಮ ತೋಟ-ಗದ್ದೆಗಳಿಗೆ ದಾಳಿ ಇಡುತ್ತಿರುವ ಮಂಗಗಳು ಹಾಗೂ ಕಾಡುಪ್ರಾಣಿಗಳ ಹಾವಳಿಯಿಂದ ಬೇಸತ್ತಿದ್ದು, ತಾವು ಬೆಳೆದ ಬೆಳೆಗಳನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ತಮ್ಮ ಮನೆಯ ಸಾಕು ನಾಯಿಗೆ ಹುಲಿವೇಷವನ್ನು ಹಾಕಿ ಮಂಗಗಳನ್ನೇ ಮಂಗ ಮಾಡಲು ಕೃಷಿಕರು ತಂತ್ರಗಾರಿಕೆ ನಡೆಸುತ್ತಿದ್ದಾರೆ.
ಮಂಗಗಳ ಹಾವಳಿಯಿಂದ ತಾಲೂಕಿನಾದ್ಯಂತ ಅಡಕೆ ಬೆಳೆಯ ಪ್ರಮಾಣ ಇಳಿಮುಖವಾಗುತ್ತಿದೆ. ರೈತರು ಮಂಗಗಳನ್ನು ಹೆದರಿಸಲು ಕೋವಿಯೊಂದಿಗೆ ಕಾವಲು, ಪಟಾಕಿ ಸಿಡಿಸಿದರೂ ಮಂಗಗಳ ಉಪಟಳ ಕಡಿಮೆಯಾಗಿಲ್ಲ. ತಾಲೂಕಿನ ಅರಳಾಪುರ ಗ್ರಾಮದ ಹಂಗಾರಕೊಡಿಗೆಯ ಕೃಷಿಕ ಎಚ್. ಎನ್. ನಾಗಭೂಷಣ್ ಮಂಗಗಳ ಹಾವಳಿಯನ್ನು ತಡೆಯಲು ತಮ್ಮ ಸಾಕು ನಾಯಿಗೆ ಹುಲಿಯ ಬಣ್ಣ ಬಳಿದು ತೋಟದಲ್ಲಿ ಹಾಗೂ ಮನೆಯ ಸಮೀಪ ನಾಯಿಯನ್ನು ಕಟ್ಟುವ ತಂತ್ರಗಾರಿಕೆ ತೋರಿದ್ದಾರೆ.
ಕಳೆದ ಹಲವು ವರ್ಷಗಳಿಂದ ತಾಲೂಕಿನ ಪ್ರಮುಖ ಬೆಳೆಯಾದ ಅಡಕೆ ಕಾಪಾಡಿಕೊಳ್ಳುವ ಸಂಕಷ್ಟ ಅಡಕೆ ಬೆಳೆಗಾರಾರಿಗೆ ಎದುರಾಗಿದೆ. ಮಳೆಗಾಲದಲ್ಲಿ ಅಡಕೆಗೆ ಅಂಟುವ ಕೊಳೆರೋಗದ ಸಮಸ್ಯೆಯಾದರೆ ಉಳಿದಂತೆ ವಿಪರೀತ ಮಂಗಗಳ ಹಾವಳಿಯಿಂದ ರೈತರು ಬೇಸತ್ತಿದ್ದಾರೆ. ರಾತ್ರಿ ಸಮಯದಲ್ಲಿ ಕಾಡು ಪ್ರಾಣಿಗಳಾದ ಕಾಡುಕೋಣ, ಕಾಡುಹಂದಿಗಳ ಹಾವಳಿ ಹೆಚ್ಚಾಗುತ್ತಲಿದ್ದು, ರೈತರ ಸಮಸ್ಯೆ ಯಾರಿಗೂ ಹೇಳಂತಾಗಿದೆ.
ಅಡಕೆ ತೋಟಗಳಿಗೆ ಕಳೆದ 2 ತಿಂಗಳಿಂದ ಸತತವಾಗಿ ಮಂಗಗಳ ವಿಪರೀತ ದಾಳಿ ಹೆಚ್ಚಾಗುತ್ತಲೆ ಇದೆ. ಪಕ್ಕದ ತಾಲೂಕಿನಲ್ಲಿ ಈಗಾಗಲೆ ಸರ್ಕಾರದ ವತಿಯಿಂದ ಮಂಕಿ ಪಾರ್ಕ್ ಸ್ಥಾಪಿಸಲು ಚಿಂತನೆ ನಡೆಸಿದ್ದು, ಇದರಿಂದ ರೈತರಿಗೆ ಯಾವ ರೀತಿ ಉಪಯೋಗವಾಗಲಿದೆ ಎಂಬುದರ ಬಗ್ಗೆ, ಕೃಷಿಕರಲ್ಲಿ ಜಿಜ್ಞಾಸೆ ಉಂಟಾಗಿದೆ. ಒಟ್ಟಾರೆ ತಾಲೂಕಿನ ಕೃಷಿಕರಿಗೆ ಮಂಗಗಳ ಹಾವಳಿ ಕಿರಿಕಿರಿಯಾಗಿದ್ದು, ಏನು ಮಾಡಬೇಕೆಂಬ ಚಿಂತೆಯಲ್ಲಿ ಕೃಷಿ ಬದುಕಲ್ಲಿ ಸಾಗುವಂತಾಗಿದೆ.
ಮಂಗಗಳನ್ನು ಹಿಡಿದರೆ ಅರಣ್ಯ ಇಲಾಖೆಯವರ ಭಯ. ಹಾಗಾಗಿ ಈ ಮಂಗಗಳ ಹಾವಳಿಯ ಸಮಸ್ಯೆ ಹೆಚ್ಚಾಗುತ್ತಲೆ ಇದ್ದು, ತಾವು ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.
ಮಂಗಗಳ ಉಪಟಳ ತಾಳಲಾರದೆ ನಾನು ಸಾಕಿದ ನಾಯಿಗೆ ಹುಲಿವೇಷ ಹಾಕಿದ ಮೇಲೆ ಮಂಗಗಳ ಹಾವಳಿ ನಿಯಂತ್ರಿಸಬಹುದೆಂಬ ನಂಬಿಕೆ ಇತ್ತು. ಆದರೆ ಕೆಲವು ದಿನ ಹುಲಿವೇಷದ ನಾಯಿಗೆ ಹೆದರಿದ ಮಂಗಗಳು ಮತ್ತೆ ಕಾಟ ಆರಂಭಿಸಿವೆ. ಈ ಸಮಸ್ಯೆಗೆ ಎಂದು ಪರಿಹಾರ ಎಂಬುದು ತೋಚದಂತಾಗಿದೆ.
.ಎಚ್.ಎನ್. ನಾಗಭೂಷಣ್,
ಅಡಕೆ ಬೆಳೆಗಾರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ