ನಾಳೆ ಚಂಪಕಸ್ವಾಮಿ ರಥೋತ್ಸವ


Team Udayavani, Mar 25, 2019, 1:19 PM IST

naa;le

ಆನೇಕಲ್: ಬೆಂಗಳೂರಿನ ಹೊರಹೊಲ ಯದಲ್ಲಿರುವ ಬನ್ನೇರುಘಟ್ಟದ ಇತಿಹಾಸ ಪ್ರಸಿದ್ಧ ಶ್ರೀ ಚಂಪಕಧಾಮ ಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ವಿಜೃಂಭಣೆ ಯಿಂದ ನಡೆಯಲಿದೆ.

9 ದಿನಗಳ ಕಾಲ ನಡೆಯುವ ಜಾತ್ರೆಯ ಪ್ರಕ್ರಿಯೆಯಲ್ಲಿ 7ನೇ ದಿನದಂದು ಚಂಪಕ ಧಾಮ ಸ್ವಾಮಿ ತನ್ನ ಸತಿಯರಾದ ಶ್ರೀದೇವಿ ಮತ್ತು ಭೂದೇವಿಯರೊಡನೆ ಬ್ರಹ್ಮರಥದಲ್ಲಿ ಕುಳಿತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೋರಟು, ಸಂಜೆ ವೇಳೆಗೆ ತನ್ನ ಮೂಲ ಸ್ಥಾನ ಸೇರುವ ವಾಡಿಕೆ ಹಿಂದಿ ನಿಂದಲೂ ನಡೆದುಕೊಂಡುಬಂದಿದೆ.

ಕೊಳದಲ್ಲಿ ಸ್ನಾನ: ಬ್ರಹ್ಮರಥೋತ್ಸವದ ದಿನದ ಹಿಂದಿನ ದಿನವನ್ನು ಕೂಟವೆ ಎಂದು ಕರೆ ಯುತ್ತಾರೆ. ಆ ದಿನದ ರಾತ್ರಿಯೇ ಗುಂಪು, ಗುಂಪುಗಳಲ್ಲಿ ಜನ ಬಂದು ಗ್ರಾಮದ ಹೊರ ವಲಯದಲ್ಲಿ ಬಿಡುಬಿಟ್ಟು ತಮ್ಮ ಹರಕೆ ಗಳನ್ನು ತೀರಿಸಿಕೊಳ್ಳುವ ಸಿದ್ಧತೆಯಲ್ಲಿರು ತ್ತಾರೆ. ಕೆಲವರು ರಾತ್ರಿ ಕತ್ತಲೆಯಲ್ಲಿಯೇ ವ್ನಹಿಗಿರಿ ಬೆಟ್ಟದ ಹಿಂದಿರುವ ಕಾಡಿನ ಕಾಲು ದಾರಿಯಲ್ಲಿ ನಡೆದು ಕಾಡಿನ ಮಧ್ಯೆ ಇರುವ ಪುಣ್ಯ ಕ್ಷೇತ್ರವಾದ ಸುವರ್ಣಮುಖೀ ತೀರ್ಥ ಕ್ಷೇತ್ರಕ್ಕೆ ತೆರಲಿ ಕೊಳದಲ್ಲಿ ಸ್ನಾನ ಮುಗಿಸಿ, ಮಡಿ ಬಟ್ಟೆಯಲ್ಲಿ ಬರುವ ವೇಳೆಗಾಗಲೇ ಬೆಳಗಾಗಿರುತ್ತದೆ. ಆ ವೇಳೆಗೆ ಚಂಪಕನ ಮೂಲ ಮೂರ್ತಿಯ ದರ್ಶನ ಪಡೆದು ರಥೋತ್ಸವದಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ.

ಅಲಂಕೃತ ವ್ಯಕ್ತಿಯ ಮೆರವಣಿಗೆ: ಇನ್ನು ಊರಿನ ಹೊರವಲಯದಲ್ಲಿ ಬಿಡಾರ ಹೂಡಿರುವ ತಂಡಗಳು ಸಹ ಒಬ್ಬ ವ್ಯಕ್ತಿಗೆ ಮಲ್ಲಿಗೆ ಹೂವುಗಳಿಂದ ಕರಗದ ರೀತಿಯಲ್ಲಿ ಅಲಂಕಾರ ಮಾಡಿ ತಮಟೆ ವಾದ್ಯಗಳ ಜತೆ ಮೆರವಣಿಗೆ ಮಾಡುತ್ತಾರೆ. ಅಲಂಕೃತ ವ್ಯಕ್ತಿ ಆವೇಶಭರಿತನಾಗಿ ಕುಣಿಯುತ್ತ ಸಾಗುವ ಮೂಲಕ ಜನಮನ ಸೆಳೆಯುತ್ತಾನೆ. ಈ ರೀತಿ ಹರಕೆಗಳನ್ನು ತೀರಿಸುವ ತಂಡಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವ ಣಿಗೆ ನಡೆಸಿ ಬ್ರಹ್ಮರಥದ ಬಳಿ ಬಂದು ತಮ್ಮ ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ. ನಂತರ ಸಮೀಪದ ಬೇಗಿಹಳ್ಳಿ ಗ್ರಾಮ ದೇವತೆ ಬೇಗಳಮ್ಮ ದೇವಿಗೂ ಹರಕೆ ಸಲ್ಲಿಸುವ ವಾಡಿಕೆ ಹಿಂದಿನಿಂದಲೂ ಬೆಳೆದು ಬಂದಿದೆ.

ತಮಿಳು ಭಕ್ತರೇ ಹೆಚ್ಚು: ಜಾತ್ರೆಗೆ ತಮಿಳು ನಾಡು ಸೇರಿದಂತೆ ರಾಜ್ಯದ ವಿವಿಧ ಕಡೆ ಗಳಿಂದ ಸಾವಿರಾರು ಭಕ್ತರು ಆಗಮಿಸು ತ್ತಾರೆ. ಈ ಜಾತ್ರೆಗೆ ತಮಿಳುನಾಡು ಮೂಲದ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಅದಕ್ಕೆ ಪ್ರಮುಖ ಕಾರಣ ಇತಿಹಾಸ ಪುಟಗಳಿಂದ ತಿಳಿದು ಬರುತ್ತದೆ. ಇಂದಿನ ಚಂಪಕಧಾಮ ಸ್ವಾಮಿ ದೇವಾಲಯವನ್ನು ಚೋಳರ ರಾಜ ಪೂರ್ವಾಧಿರಾಯ ಈಗಿನ ತಮಿಳುನಾಡಿಗೆ ಸೇರಿದ ಹೊಸೂರನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸುತ್ತಿದ್ದ. ಆಗ ಬನ್ನೇರುಘಟ್ಟದಲ್ಲಿ ದಾಮೋದರ ಪೆರು ಮಾಳ್‌ ಹೆಸರಿನ ದೇವಾಲಯವನ್ನು ಕಟ್ಟಿಸಿದ್ದ ನೆಂಬ ಬಗ್ಗೆ ಇಲ್ಲಿನ ಶಾಸನಗಳಿಂದ ತಿಳಿದು ಬಂದಿದೆ. ಹಾಗಾಗಿ, ಈ ದೇವರಿಗೆ ತಮಿಳು ಮೂಲದ ಭಕ್ತರೇ ಹೆಚ್ಚು.

ಬನ್ನೇರುಘಟ್ಟದ ಶ್ರೀ ಚಂಪಕಧಾಮ ಸ್ವಾಮಿ ದೇವಾಲಯ ಸಾವಿರ ವರ್ಷಗಳಿಗೂ ಹೆಚ್ಚು ಹಳೆಯದೆಂದು ಇಲ್ಲಿ ದೊರೆತಿರುವ ಶಾಸನಗಳಿಂದ ತಿಳಿದು ಬರುತ್ತದೆ. ದೇವಾ ಲಯ ಹಲವು ರಾಜ ಮನೆತನಗಳಿಂದ ನೂರಾರು ವರ್ಷಗಳ ಕಾಲಾವಧಿಯಲ್ಲಿ ಅಭಿವೃದ್ಧಿಯಾಗುತ್ತ ಬಂದಿದ್ದು, ಇಂದಿಗೂ ಸಾಗಿದೆ. ದೇವಾಲಯ ಎತ್ತರವಾದ ಜಗಲಿಯ ಮೇಲೆ ಬೃಹತ್‌ ಗಾತ್ರದ ಕಲ್ಲು ಕಂಬಗಳಿಂದ ನಿರ್ಮಾಣ ಮಾಡಲಾಗಿದೆ. ಚಂಪಕಸ್ವಾಮಿ ದೇವರ ಸಮೀಪದಲ್ಲಿ ಶ್ರೀ ಲಕ್ಷ್ಮೀ ದೇವಾಲಯವೂ ಇದೆ. ಇದು ವಿಜಯನಗರ ಅರಸರ ಕಾಲಕ್ಕೆ ಸೇರಿದ್ದೆಂದು ಇತಿಹಾಸಕಾರರು ಹೇಳುತ್ತಾರೆ.

50 ಅಡಿ ಏಕ ಶಿಲಾ ಗರುಡಗಂಬ: ದೇವಾ ಲಯದ ಹಿಂದೆ ದೊಡ್ಡ ಬೆಟ್ಟವಿದ್ದು, ಅದನ್ನು ವ್ನಹಿಗಿರಿ ಎಂದು ಕರೆದಿರುವುದಕ್ಕೆ ಶಾಸನ ಗಳು ಸಾಕ್ಷಿಯಾಗಿವೆ. ಬೆಟ್ಟದ ಮೇಲೆ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವಿದೆ. ಊರಿನ ಮಧ್ಯೆ ಭಾಗದಲ್ಲಿ ಗ್ರಾಮ ದೇವತೆ ಮಾರಮ್ಮ ದೇವಾಲಯ, ಗ್ರಾಮದ ದ್ವಾರ ಭಾಗದಲ್ಲಿ ಆಂಜ ನೇಯಸ್ವಾಮಿ ದೇವಾಲಯ ವಿವೆ. ಈ ಎಲ್ಲ ದೇಗುಲಗಳಿಗೂ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದೆ. ಹಾಗೆ ಸುಮಾರು 50 ಅಡಿಗಳ ಏಕ ಶಿಲಾ ಗರುಡಗಂಬ ಅಪರೂಪದ್ದಾಗಿದೆ.

* ಮಂಜುನಾಥ್‌ ಎನ್‌ ಬನ್ನೇರುಘಟ್ಟ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.