ಶಿರಾ ಸೀಮೆ ಸಾಂಸ್ಕೃತಿಕ ವೇದಿಕೆ : ಇಂದಿನಿಂದ 2 ದಿನದ ನಾಟಕೋತ್ಸವ
Team Udayavani, Dec 14, 2021, 11:49 AM IST
ಶಿರಾ : ಶಿರಾ ಸೀಮೆ ಸಾಂಸ್ಕೃತಿಕ ವೇದಿಕೆಯಿಂದ ಡಿ. 14 ರಿಂದ (ಇಂದಿನಿಂದ) ಎರಡು ದಿನದ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ.
ನಗರದ ಬಾಲಕಿಯರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಡಿ. 14 ರಂದು ಮಂಗಳವಾರ ಸಂಜೆ 7.30ಕ್ಕೆ ರಾಜೇಂದ್ರ ಕಾರಂತರ ಹಾಸ್ಯ ನಾಟಕ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ರಂಗ ಪ್ರದರ್ಶನದ ಮೂಲಕ ನಾಟಕೋತ್ಸವ ಚಾಲನೆಯಾಗಲಿದೆ.
ಡಿ. 15 ಬುಧವಾರ ಸಂಜೆ 7.30ಕ್ಕೆ ಆದಿಕವಿ ಪಂಪನ ಆದಿಪುರಾಣ ಗ್ರಂಥದಿಂದ ಆಯ್ದ ಭಾಗ ‘ಬಾಹುಬಲಿ ವಿಜಯಂ’ ರಂಗ ಪ್ರದರ್ಶನ ನಡೆಯಲಿದೆ. ಬಳ್ಳಾರಿ ಜಿಲ್ಲೆ ಸಿರಿಗೇರಿಯ ‘ಧಾತ್ರಿ ರಂಗ ಯಾತ್ರೆ’ ತಂಡ ಪ್ರದರ್ಶಿಸುವ ಈ ಎರಡು ನಾಟಕಗಳಲ್ಲಿ ಪ್ರತಿಷ್ಠಿತ ನೀನಾಸಂ, ಸಾಣೆಹಳ್ಳಿ ರಂಗ ಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದ ಕಲಾವಿದರು ಅಭಿನಯಿಸಲಿದ್ದಾರೆ.
ಈಗಾಗಲೇ ರಾಜ್ಯದ ಹಲವೆಡೆ ಪ್ರದರ್ಶನವಾಗಿರುವ ಈ ನಾಟಕಗಳು ಮನೋರಂಜನೆ ಜತೆಗೆ ಮನೋ ವಿಕಾಸಕ್ಕೆ ಪೂರಕವಾಗಿವೆ. ಎರಡು ಪ್ರದರ್ಶನಗಳು ಉಚಿತವಾಗಿದ್ದು ಪ್ರೇಕ್ಷಕರು ಿದರ ಲಾಭವನ್ನು ಪಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ