ದೇವೇಗೌಡರ ಸೋಲಿಗೆ ಮೈತ್ರಿಯೇ ಕಾರಣ

ಹೊಂದಾಣಿಕೆ ರಾಜಕಾರಣದಿಂದ ಜೆಡಿಎಸ್‌ ವರಿಷ್ಠರಿಗೆ ಮುನ್ನಡೆಯಾಗಿಲ್ಲ: ಶಾಸಕ ಡಿ ಸಿ ಗೌರಿಶಂಕರ್‌

Team Udayavani, May 27, 2019, 10:54 AM IST

tk-tdy-2..

ತುಮಕೂರಿನ ಜೆಡಿಎಸ್‌ ಜಿಲ್ಲಾ ಕಚೇರಿಯಲ್ಲಿ ಭಾನುವಾರ ನಡೆದ ಆತ್ಮಾವಲೋಕನ ಸಭೆಯಲ್ಲಿ ಶಾಸಕ ಡಿ.ಸಿ ಗೌರಿಶಂಕರ್‌ ಮಾತನಾಡಿದರು.

ತುಮಕೂರು: ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್‌ ಹಿನ್ನಡೆಯಾಗಲು ಕೆ.ಎನ್‌.ರಾಜಣ್ಣ, ಮುದ್ದಹನುಮೇಗೌಡ, ಶಿವಣ್ಣ ಅವರೇ ಕಾರಣ. ಎಲ್ಲರೂ ಒಂದಾಗಿ ಗ್ರಾಮಾಂತರದಲ್ಲಿ ಜೆಡಿಎಸ್‌ಗೆ ಹಿನ್ನಡೆಯುಂಟು ಮಾಡಿದ್ದಾರೆ. ಈ ಹೊಂದಾಣಿಕೆ ರಾಜಕಾರಣದಿಂದಾಗಿ ಜೆಡಿಎಸ್‌ ವರಿಷ್ಠರಿಗೆ ನನ್ನ ಕ್ಷೇತ್ರದಲ್ಲಿ ಮುನ್ನಡೆಯನ್ನು ನೀಡಲು ಆಗಲಿಲ್ಲ ಎಂದು ಗ್ರಾಮಾಂತರ ಶಾಸಕ ಡಿ ಸಿ ಗೌರಿಶಂಕರ್‌ ತಿಳಿಸಿದರು.

ನಗರದ ಜಿಲ್ಲಾ ಜೆಡಿಎಸ್‌ ಕಚೇರಿಯಲ್ಲಿ ಭಾನುವಾರ ನಡೆದ ಗ್ರಾಮಾಂತರ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರ ಆತ್ಮವಾಲೋಕನ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡ ವಿರುದ್ಧ ಮಾತನಾಡುವ ಕೆ.ಎನ್‌.ರಾಜಣ್ಣ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಬೇಕು, ದುರಂಹಕಾರದಿಂದ ಮಾತನಾಡಿದವರನ್ನು ಜನರು ಮನೆಗೆ ಕಳುಹಿಸಿದ್ದಾರೆ. ನಮಗೂ ಮಾತನಾಡಲು ಬರುತ್ತದೆ, ನಾವೇನು ಷಂಡರಲ್ಲ, ನಮಗೂ ಗಂಡಸ್ತನ ಇದೆ. ತಾಕತ್‌ ಇದ್ದರೆ ನೇರವಾಗಿ ಯುದ್ಧ ಮಾಡುವಂತೆ ಸವಾಲು ಹಾಕಿದರು.

ರಾಜ್ಯ ಪರ ಧ್ವನಿ ಎತ್ತುವುದು ಯಾರು?: ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರಿಲ್ಲದ ಲೋಕಸಭೆಯಲ್ಲಿ ಈಗ ಗೆದ್ದಿರುವವರು ಏನು ಮಾತನಾಡುತ್ತಾರೆ. ರಾಜ್ಯದ ನೀರಾವರಿಯಾಗಲಿ, ಇನ್ನಾವುದೇ ವಿಚಾರದ ಬಗ್ಗೆಯಾಗಲಿ ರಾಜ್ಯ ಪರ ಹೇಗೆ ಧ್ವನಿ ಎತ್ತಲಿದ್ದಾರೆ ಎನ್ನುವುದನ್ನು ಕಾದು ನೋಡ ಬೇಕಿದೆ. ಗಂಗೆಯ ಶಾಪ ಇದೆ ಎಂದು ಹೇಳಿದ ಬಸವರಾಜು ಜಿಲ್ಲೆಯ ಎಷ್ಟು ಕೆರೆ ತುಂಬಿಸು ತ್ತಾರೋ ನೋಡೋಣ, ನೀರು ತುಂಬಿಸದೇ ಇದ್ದಲ್ಲಿ ಕೊರಳಪಟ್ಟಿಯನ್ನು ಹಿಡಿದು ಕಾರ್ಯಕರ್ತರೇ ಕೇಳಬೇಕು ಎಂದು ಗುಡುಗಿದರು.

ಮೈತ್ರಿ ಇಲ್ಲದೇ ಹೋಗಿದ್ದಲ್ಲಿ ದೇವೇಗೌಡರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿಕೊಳ್ಳುತ್ತಿದ್ದೆವು, ಮೈತ್ರಿ ಮುಖಂಡರ ಮಟ್ಟದಲ್ಲಿ ಆಗಿದೆ, ಆದರೆ, ಕಾರ್ಯಕರ್ತರ ಮಟ್ಟದಲ್ಲಿ ಆಗಲಿಲ್ಲ. ವಿಧಾನಸಭಾ ಚುನಾವಣೆ ಯಂತೆ ತಳ ಮಟ್ಟದ ಕಾರ್ಯ ಕರ್ತರನ್ನು ಭೇಟಿ ಮಾಡಲು ಈ ಚುನಾವಣೆ ಯಲ್ಲಿ ಸಾಧ್ಯವಾಗ ಲಿಲ್ಲ. ಕಾಂಗ್ರೆಸ್‌ನವರನ್ನು ಸಮಾಧಾನ ಪಡಿಸು ವುದಕ್ಕಷ್ಟೇ ಸೀಮಿತ ವಾಯಿತು. ಪೂರ್ವ ಭಾವಿ ತಯಾರಿ ಮಾಡಿ ಕೊಳ್ಳಲು ಆಗಲಿಲ್ಲ. ಸಿಕ್ಕಿರುವ ಸಮಯಾವಕಾಶ ದಲ್ಲಿ ಜೆಡಿಎಸ್‌ ಉತ್ತಮ ಮತಗಳಿಕೆಯನ್ನು ಮಾಡಿದೆ, ಇನ್ನಷ್ಟು ಮತ ಗಳನ್ನು ಸೆಳೆಯುವ ನಿಟ್ಟಿನಲ್ಲಿ ನಾವು ವಿಫ‌ಲರಾಗಿದ್ದೇವೆ ಎಂದರು.

ಚುನಾವಣೆ ಜೆಡಿಎಸ್‌ ಕಾರ್ಯಕರ್ತರಿಗೆ ಪಾಠ: ಲೋಕಸಭಾ ಚುನಾವಣೆ ಗ್ರಾಮಾಂತರ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರಿಗೆ ಪಾಠವಾಗಬೇಕಿದೆ. ಏಳು ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಎಲ್ಲ ಕಡೆ ಬಿಜೆಪಿ ಸದಸ್ಯರಿದ್ದರೆ ಎಂದು ಬೀಗುತ್ತಿದ್ದವರನ್ನು ಜನ ಮನೆಗೆ ಕಳುಹಿಸಿದ್ದಾರೆ ಎಂದು ಮಾಜಿ ಶಾಸಕ ಸುರೇಶ್‌ ಗೌಡರಿಗೆ ಟಾಂಗ್‌ ನೀಡಿದ ಅವರು, ಮುಂದೆ ಗ್ರಾಪಂ ಚುನಾವಣೆ ಬರಲಿ 35 ಗ್ರಾಪಂಗಳ ಪೈಕಿ 33 ಗ್ರಾಪಂಗಳಲ್ಲಿ ಜೆಡಿಎಸ್‌ ಗೆಲುವು ಸಾಧಿಸಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಪಕ್ಷವನ್ನು ಸಂಘಟನೆ ಮಾಡೋಣ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಹಿಂಜರಿಯುವುದು ಬೇಡ: ಗೌರಿಶಂಕರ್‌ ತುಮಕೂರು ಗ್ರಾಮಾಂತರ ಬಿಟ್ಟು ಹೋಗುತ್ತಾನೆ ಎಂದು ಅಪಪ್ರಚಾರ ಮಾಡ ಲಾಗುತ್ತಿದೆ. ಬಳ್ಳಗೆರೆಯಲ್ಲಿ ಮನೆಕಟ್ಟಿಕೊಂಡು ಶಾಶ್ವತವಾಗಿ ಇಲ್ಲೇ ನೆಲೆಸುತ್ತೇನೆ, ಏನೇ ಆದರೂ ಎದುರಿಸೋಣ, ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟನೆ ಮಾಡೋಣ. ಯಾವುದೇ ಕಾರಣಕ್ಕೂ ಕಾರ್ಯಕರ್ತರು ಹಿಂಜರಿಯುವುದು ಬೇಡ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಸಂಯಮ ಕಾಪಾಡಿಕೊಳ್ಳಿ: ಜೆಡಿಎಸ್‌ ಸಾಮಾಜಿಕ ಜಾಲತಾಣದ ಹುಡುಗರು ಸಂಯಮ ಕಾಪಾಡಿಕೊಳ್ಳಬೇಕು. ಅಭಿವೃದ್ಧಿ ವಿಚಾರಗಳನ್ನು ಚರ್ಚಿಸಿ, ವೈಯಕ್ತಿಕ ವಿಚಾರಗಳ ಬಗ್ಗೆ ಗಮನ ನೀಡಬೇಡಿ, ಇದರಿಂದ ಪಕ್ಷಕ್ಕೆ ಮುಜುಗರವಾಗಲಿದೆ ಎನ್ನುವುದು ಅರಿತುಕೊಳ್ಳಬೇಕು. ಗ್ರಾಮಾಂತರ ಕ್ಷೇತ್ರದಲ್ಲಿ ಎಲ್ಲ ಘಟಕಗಳನ್ನು ವಿಸರ್ಜಸಿದ್ದು, ಹೊಸ ತಂಡವನ್ನು ಕಟ್ಟಿ ಪಕ್ಷವನ್ನು ಇನ್ನಷ್ಟು ಸಂಘಟಿತವಾಗಿಸುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ಸಲಹೆ ನೀಡಿದರು.

ಕಳೆದ ಚುನಾವಣೆಯಲ್ಲಿ ನಾನು ಗೆದ್ದಾಗ ಅಡ್ಜೆಸ್ಟ್‌ಮೆಂಟ್ನಿಂದ ಗೆದ್ದ ಎಂದು ಆರೋಪಿಸಿದರು, ಈಗ ಅವರು ಮಾಡಿದ್ದ ಏನು? ಅಡ್ಜೆಸ್ಟ್‌ಮೆಂಟ್ ಮಾಡಿಕೊಂಡು ಜೆಡಿಎಸ್‌ಗೆ ಹಿನ್ನಡೆ ಮಾಡಲಿಲ್ಲವೇ, ನೀತಿಗೆಟ್ಟ ಹೊಂದಾಣಿಕೆ ಮೂಲಕ, ನನ್ನನ್ನು ತುಳಿಯಲು ಯತ್ನಿಸಿದವರು ಧೈರ್ಯವಿದ್ದರೆ ನೇರವಾಗಿ ಯುದ್ಧಕ್ಕೆ ಬರಲಿ ಎಂದು ಸವಾಲು ಹಾಕಿದರು.

ಸಭೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ವಿವಿಧ ಘಟಕಗಳ ಮುಖಂಡರು, ಗ್ರಾಪಂ ಸದಸ್ಯರು, ಕಾರ್ಯಕರ್ತರು ಹಿನ್ನಡೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಬೆಳಗುಂಬ ವೆಂಕಟೇಶ್‌, ಉಮೇಶ್‌, ಹಾಲನೂರು ಅನಂತ್‌, ಕೆಂಪರಾಜಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

1-aaaa

2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಈ ಬಾರಿ ಸೋಮಣ್ಣ ಗೆಲ್ಲಬೇಕು: ಎಚ್.ಡಿ.ದೇವೇಗೌಡ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.