ಪುರಾತನ ದೇಗುಲಕ್ಕೆ ಬೇಕಿದೆ ಕಾಯಕಲ್ಪ


Team Udayavani, Sep 30, 2019, 4:58 PM IST

tk-tdy-1

ಚಿಕ್ಕನಾಯಕನಹಳ್ಳಿ: ತಾಲೂಕಿನ ಶೆಟ್ಟಿಕೆರೆಯಲ್ಲಿನ ಹೊಯ್ಸಳರ ಕಾಲದ ಪುರಾತನ ಯೋಗಮಾಧವ ದೇವಾಲಯ ಅಪರೂಪವಾದ ಶಿಲ್ಪಕಲೆಗಳ ಕೆತ್ತನೆಯಿಂದ ನಿರ್ಮಾಣವಾಗಿದ್ದು, ಪುರಾತತ್ವ ಇಲಾಖೆ ನಿರ್ಲಕ್ಷ್ಯದಿಂದ ಸೌಂದರ್ಯ ಕಳೆದುಕೊಂಡಿದೆ.

ಕ್ರಿ.ಶ. 1261ರಲ್ಲಿ ಹೊಯ್ಸಳರ ದೊರೆ ಮುಮ್ಮಡಿ ವೀರ ನರಸಿಂಹ ದಂಡನಾಯಕ ಗೋಪಾಲ ದಣಾಯಕನಿಂದ ನಿರ್ಮಾಣವಾಗಿರುವ ಯೋಗಮಾಧವ ದೇವಾಲಯ ನಕ್ಷತ್ರಾಕಾರದಲ್ಲಿ ಮೂರು ಅಡಿ ಎತ್ತರವಿದೆ. ಐದು ಸಾಲುಗಳಲ್ಲಿ ಕಲ್ಲಿನ ಕೆತ್ತನೆ ಮಾಡಲಾಗಿದೆ. ದೇವಸ್ಥಾನದ ಗೋಡೆಗಳಲ್ಲಿ ವಿವಿಧ ಆಕಾರದ ಗೋಪುರಗಳು, ಕಲ್ಲಿನ ಕಂಬಗಳು, ಸಣ್ಣ ಸಣ್ಣ ಆಕಾರದಲ್ಲಿ ರೂಪಕೊಂಡಿರುವ ಕೆತ್ತನೆಗಳು ಇವೆ. ಈ ದೇವಾಲಯಕ್ಕೆ ಮೂರು ಗರ್ಭಗುಡಿಗಳು, ಒಳ ಭಾಗದ ನಕ್ಷತ್ರಾಕಾರದ ಗರ್ಭಗುಡಿಗೆ ಉತ್ತರ ದಕ್ಷಿಣ, ಪಶ್ಚಿಮಗಳಲ್ಲಿ ಚತುರ ಸ್ತರ ಭಾಗಗಳು ಸೇರಿಸಲ್ಪಟ್ಟಿವೆ. ಸಣ್ಣ ಸಣ್ಣ ಗೋಪುರಗಳ ಮೂಲಕ ನಾಲ್ಕು ಸಾಲಿನ ಶಿಖರ, ಕಲ್ಲಿನ ಕಳಶ ಹೊಂದಿದ್ದು, ಕಣ್ಮನ ಸೆಳೆಯುತ್ತದೆ.

ಅಪರೂಪದ ವಿಗ್ರಹ: ಗರುಡ ಪೀಠದ ಮೇಲೆ ಒಂಭತ್ತು ಅಡಿ ಎತ್ತರದ ಯೋಗಮಾಧವನ ಸುಂದರ ವಿಗ್ರಹವಿದೆ. ಪದ್ಮಾಸನ ಶೈಲಿಯಲ್ಲಿ ವಿಷ್ಣು ಕುಳಿತಿರುವ ಕೆತ್ತನೆ ಇದ್ದು, ಹಿಂದಿನ ಕೈಗಳಲ್ಲಿ ಚಕ್ರ, ಶಂಖಗಳಿವೆ. ಗರ್ಭಗುಡಿಯ ತೋರಣದಲ್ಲಿ ದಶಾವತಾರಗಳು, ಸಿಂಹಮುಖವಿರುವ ವಿಗ್ರಹವಿದೆ. ಯೋಗಮಾಧವ ಮೂರ್ತಿಗೆ ಸುಂದರವಾದ ಕಿರೀಟ, ಕೈಗೆ ಉಂಗುರಗಳು ಭುಜಕೀರ್ತಿ ಇದೆ. ಇತಿಹಾಸದ ಪ್ರಕಾರ ಇಂತಹ ಮೂರ್ತಿ ನಿರ್ಮಾವಾಗಿರುವುದು ಬಲು ಅಪರೂಪ.

ಪ್ರವಾಸಿ ಸ್ಥಳ: ಹೊಯ್ಸಳರ ಕಾಲದ ಈ ದೇವಾಲಯದಲ್ಲಿ ಶಿಲ್ಪಕಲೆಗಳ ವೈಭವ ಕಾಣಬಹುದು. ಶೆಟ್ಟಿಕೆರೆ ಹೋಬಳಿ ಯಲ್ಲಿರುವ ಯೋಗ ಮಾಧವ ದೇವಾಲಯ ಅದ್ಬುತವಾಗಿದ್ದು, ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಅನೇಕ ಜನರಿಗೆ ಈ ದೇವಾಲಯ ಇರುವುದರ ಬಗ್ಗೆ ಮಾಹಿತಿ ಇಲ್ಲವಾಗಿದೆ. ನಶಿಸುತ್ತಿರುವ ಶಿಲ್ಪಕಲೆಗಳ ನಡುವೆ ಈ ದೇವಾಲಯ ಅಭಿವೃದ್ದಿಪಡಿಸಿ ಪ್ರವಾಸಿ ಸ್ಥಳವನ್ನಾಗಿ ಮಾಡಬೇಕಾಗಿದೆ.

ಸೌಕರ್ಯ ಬೇಕಿದೆ: ದೇವಾಲಯದ ಸುತ್ತ ತಡೆಗೊಡೆ ಬೇಕಾಗಿದೆ. ಉದ್ಯಾನವನ, ಅಲಂಕಾರಿಕ ಕಲಾಕೃತಿಗಳು ಸೇರಿ ಪ್ರವಾಸಿ ಸ್ಥಳಕ್ಕೆ ಬೇಕಾಗಿರುವ ಮೂಲಸೌಕರ್ಯ ನೀಡಿದರೆ ದೇವಾಲಯ ಪ್ರೇಕ್ಷಕರನ್ನು ಆಕರ್ಷಿಸುವುದರಲ್ಲಿ ಅನುಮಾನವಿಲ್ಲ.

ಪುರಾತನ ಹೊಯ್ಸಳರ ಕಾಲದ ದೇವಾಲಯ ಉಳಿಸಿಕೊಳ್ಳುವುದು ಹಾಗೂ ಅಭಿವೃದ್ಧಿಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಸರ್ಕಾರ ಈ ದೇವಾಲಯಕ್ಕೆ ಅಗತ್ಯ ಸೌಕರ್ಯ ನೀಡಿ ಸ್ಥಳವನ್ನು ಪ್ರೇಕ್ಷಣಿಯ ಸ್ಥಳವನ್ನಾಗಿ ಮಾಡಬೇಕು.-ಎಂ.ವಿ. ನಾಗರಾಜರಾವ್‌, ಹಿರಿಯ ಸಾಹಿತಿ

 

-ಚೇತನ್

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.