ಕಾರಿಗಾಗಿ ಚಾಲಕನ ಕೊಲೆಗೈದ ಕಿರಾತಕನ ಬಂಧನ
Team Udayavani, Feb 7, 2021, 4:29 PM IST
ಕೊರಟಗೆರೆ: ಅಕ್ಕನ ಮದುವೆ ಬಳಿಕ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಬೇಕೆಂದುಕೊಂಡ ಸೋದರ ಬಾಡಿಗೆ ಕಾರನ್ನು ಅಪಹರಿಸಲು ಸಂಚು ರೂಪಿಸಿ, ಚಾಲಕನ ಕೊಲೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಅತ್ತಿಬೆಲೆ ನಿವಾಸಿ ವಿರೇಂದ್ರ(24) ಬಂಧಿತ ಆರೋಪಿ. ಫೆ. 16ರಂದು ಅತ್ತಿಬೆಲೆಯಲ್ಲಿ ವಿರೇಂದ್ರನ ಅಕ್ಕನ ಮದುವೆ ಇತ್ತು. ಮದುವೆ ಬಳಿಕ ಅಕ್ಕ ಭಾವನನ್ನು ವಿವಿಧ ದೇಗುಲಗಳಿಗೆ ಕರೆದುಕೊಂಡು ಹೋಗಬೇಕೆಂದು ಕಾರನ್ನು ಬಾಡಿಗೆಗೆ ಪಡೆದು ನಂತರ ಚಾಲಕನನ್ನು ಕೊಲೆ ಮಾಡಿ ಕಾರನ್ನು ಅಪಹರಿಸಬಹುದೆಂದು ಸಂಚು ರೂಪಿಸಿದ್ದ. ಅದರಂತೆ ಪೆ. 2ರಂದು ರಾತ್ರಿ 7.30ರಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಹೋಗಿ ವೀರೇಂದ್ರ ಬಾಡಿಗೆ ಕಾರನಲ್ಲಿ ಚಾಲಕ ನಿಸಾರ್ ಅಹ್ಮದ್ ಜತೆ ತುಮಕೂರು ಕಡೆಗೆ ತೆರಳಿದ್ದ.
ನೆಲಮಂಗಲಕ್ಕೆ ಬರುವಾಗ ಪೊಲೀಸರು, ಇವರ ವಾಹನ ತಪಾಸಣೆ ನಡೆಸಿದ್ದು, ಸಂಚು ವಿಫಲವಾಗಿದೆ. ನಂತರ ಸಂಗಮ್ ಹೋಟೆಲ್ನಲ್ಲಿ ಊಟ ಮಾಡಿ ದಾಬಸ್ ಪೇಟೆಗೆ ಬಂದಿದ್ದು, ನಾವು ಮಧುಗಿರಿ ಹೋಗೋಣ ಎಂದು ಚಾಲಕನಿಗೆ ಹೇಳಿದ್ದಾನೆ. ಮಧಗಿರಿ ಮಾರ್ಗದಲ್ಲಿ ಕೊರಟಗೆರೆ ಬಳಿ ತುಂಬಾಡಿಗೆ ಬಂದು, ಅಲ್ಲಿ ಸುಮಾರು ,1ಗಂಟೆ ಸಮಯ ಕಾರನ್ನು ನಿಲ್ಲಿಸಿ ಕಾಲವನ್ನು ಕಳೆದಿದ್ದಾರೆ.
11.30ರಲ್ಲಿ ಇಲ್ಲಿಗೆ ನಮ್ಮ ಮಾವ ಬರುತ್ತಾರೆ ಬಾಡಿಗೆ ಕೊಟ್ಟು ಕಳುಹಿಸುತ್ತೇನೆ ಎಂದು ವೀರೇಂದ್ರ ಹೇಳಿ¨ದ್ದಾನೆ. ಈ ಸಮಯದಲ್ಲಿಯೇ ಈತನ ಮಾತನ್ನು ನಂಬಿ ಕಾರನ್ನು ಮಧುಗಿರಿ ಮಾರ್ಗಕ್ಕೆ ನಿಲ್ಲಿಸಲು ಹೋದ ಚಾಲಕನನ್ನು ಹತ್ಯೆ ಮಾಡಿದ್ದಾನೆ. ಬಳಿಕ ಕಾರನ್ನೂ ತೆಗೆದು ಕೊಂಡು ಹೋಗಲು ಸಾಧ್ಯವಾಗದೆ ಅಲ್ಲಿಂದ ರವೀಂದ್ರ ಪರಾರಿಯಾಗಿದ್ದಾನೆ.
ಇದನ್ನೂ ಓದಿ :ಕೇಂದ್ರದಿಂದ ರೈತರ ಕಡೆಗಣನೆ: ವೀರಣ್ಣ
ಈ ಮಾರ್ಗದಲ್ಲಿ ಹೋಗುತ್ತಿದ್ದವರು ಕಾರನ್ನು ಗಮನಿಸಿದಾಗ ಕೊಲೆ ಬೆಳಕಿಗೆ ಬಂದಿದ್ದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದು, ವರಿಷ್ಠಾಧಿಕಾರಿ ಕೋನವಂಶಿಕೃಷ್ಣ ಅವರು ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿಗಳಾದ ಉದೇಶ್ ಅವರ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ