ನರಭಕ್ಷಕ ಚಿರತೆ ಸೆರೆ?
ನಾಲ್ವರನ್ನು ಬಲಿ ಪಡೆದಿದ್ದ ಚಿರತೆ ಎಂಬ ಶಂಕೆ
Team Udayavani, Mar 19, 2020, 5:56 AM IST
ತುಮಕೂರು: ನಾಲ್ವರನ್ನು ಬಲಿ ಪಡೆದ, ಜಿಲ್ಲೆಯಲ್ಲಿ ಭಾರೀ ಭೀತಿಗೆ ಕಾರಣವಾಗಿದ್ದ ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬಂದಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯಲ್ಲಿ ಇಬ್ಬರು ಮಕ್ಕಳು ಸಹಿತ ಒಟ್ಟಾರೆ ನಾಲ್ವರು ಚಿರತೆ ದಾಳಿಗೆ ಬಲಿಯಾಗಿದ್ದರು. ಮಾನವರ ಮೇಲೆ ದಾಳಿ ನಡೆಸಿದ್ದ 12ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿ ಕಾಣಿಸಿದ್ದ ಚಿರತೆಯ ಚಹರೆ ಮತ್ತು ಇದರ ಚಹರೆ ಒಂದೇ ರೀತಿ ಇರುವುದರಿಂದ ಇದೇ ನರಹಂತಕ ಚಿರತೆ ಇರಬಹುದು ಎಂದು ನಂಬಲಾಗಿದೆ.
ಸೆರೆ ಸಿಕ್ಕಿದ್ದು ಹೇಗೆ?
ತುಮಕೂರು ತಾಲೂಕಿನ ಹಾಲನೂರು ಸಮೀಪ ಹೇಮಾವತಿ ಚಾನಲ್ ಮೇಲೆ ಓಡಾಡುತ್ತಿದ್ದ ಚಿರತೆ ಜನರ ಕಣ್ಣಿಗೆ ಬಿತ್ತು. ಜನರನ್ನು ಕಂಡು ಗಾಬರಿಗೊಂಡ ಚಿರತೆ ಸೇತುವೆ ಕೆಳಗೆ ಅವಿತುಕೊಂಡಿತು. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅವರು ಕಾರ್ಯಾಚರಣೆ ನಡೆಸಿ ದರೂ ಚಿರತೆ ಸೆರೆ ಹಿಡಿಯಲು ಆಗಲಿಲ್ಲ. ಅನಂತರ ಅರಿವಳಿಕೆ ತಜ್ಞ ಡಾ| ಸನತ್ ಹಾಗೂ ಶಾರ್ಪ್ಶೂಟರ್ ಅಕ್ರಂ ಅವರನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ಡಾ| ಸನತ್ ಅವರು ಸೇತುವೆ ಕೆಳಗೆ ಅಡಗಿದ್ದ ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಬಳಿಕ ಸೆರೆ ಹಿಡಿಯಲಾಯಿತು. ಇನ್ನು ಕೆಲವು ಪರೀಕ್ಷೆಗಳ ಬಳಿಕ ಇದೇ ನರಹಂತಕ ಚಿರತೆಯೇ ಎಂಬುದನ್ನು ಖಾತರಿಪಡಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil