ಬೀದಿ ನಾಯಿಗಳ ದಾಳಿಗೆ ಬಾಲಕಿ ಬಲಿ
Team Udayavani, Sep 10, 2018, 6:30 AM IST
ಕುಣಿಗಲ್(ತುಮಕೂರು): ತಾಲೂಕಿನ ನಿಂಗಯ್ಯನಪಾಳ್ಯ ಗ್ರಾಮದ ದೊಡ್ಡಕೆರೆ ಅಂಗಳದಲ್ಲಿ ಭಾನುವಾರ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಆಕೆಯನ್ನು ಕಚ್ಚಿ ಕೊಂದು ಹಾಕಿವೆ. ಪಟ್ಟಣದ ಸಂತ ರೀತಮ್ಮನ
ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿರುವ ತೇಜಸ್ವಿನಿ (12) ನಾಯಿಗಳ ದಾಳಿಯಿಂದ ಮೃತಪಟ್ಟಿರುವ ಬಾಲಕಿ.
ಬೆಳಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ಆಕೆಯ ತಾಯಿ ಗಂಗಮ್ಮ, ಬಟ್ಟೆ ಒಗೆಯಲು ದೊಡ್ಡಕೆರೆಗೆ ಹೋಗಿದ್ದರು.
ತಾಯಿಯನ್ನು ಹುಡುಕಿಕೊಂಡು ತೇಜಸ್ವಿನಿ ಕೆರೆ ಬಳಿಗೆ ಬಂದಾಗ ಏಳೆಂಟು ನಾಯಿಗಳ ಗುಂಪೊಂದು ಹಠಾತ್ತನೆ ದಾಳಿ ನಡೆಸಿದ್ದು, ಕೈ-ಕಾಲು, ಮುಖ ಸೇರಿ ದೇಹದ ಹಲವುಭಾಗವನ್ನು ತಿಂದು ಕೊಂದು ಹಾಕಿದವು. ಬಹಳ ಹೊತ್ತಾದರೂ ಬಾರದಿದ್ದಾಗ, ತಂದೆ ಗಂಗಾಧರ್ ಮಗಳನ್ನು ಹುಡುಕಿಕೊಂಡು ಕೆರೆ ಅಂಗಳಕ್ಕೆ ಬಂದಾಗ ನಾಯಿಗಳ ಗುಂಪೊಂದು ಮಗಳ ದೇಹ ತಿನ್ನುತ್ತಿದ್ದ ದೃಶ್ಯ ಕಂಡು ಕಿರುಚಿಕೊಂಡರು. ನಾಯಿಗಳನ್ನು ಓಡಿಸುವಷ್ಟರಲ್ಲಿ ಮಗಳು ಅಸು ನೀಗಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ
ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ