ಗ್ರಾಪಂ ಗದ್ದುಗೆ ಹಿಡಿಯಲು ಹೊಂದಾಣಿಕೆ
ಮೀಸಲಾತಿ ಎದುರು ನೋಡುತ್ತಿರುವ ಗ್ರಾಪಂ ಸದಸ್ಯರು ಗೆದ್ದ ಅಭ್ಯರ್ಥಿಗಳನ್ನು ಒತ್ತಡಕ್ಕೀಡುಮಾಡಿದ ನಾಯಕರು
Team Udayavani, Jan 3, 2021, 2:40 PM IST
ತುಮಕೂರು: ಪಂಚಾಯತ್ ಕದನ ಪೂರ್ಣಗೊಂಡಿದೆ ಇನ್ನು ಗ್ರಾಪಂ ಗದ್ದಿಗೆ ಹಿಡಿಯಲು ಮೂರು ಪಕ್ಷಗಳಿಂದ ಫೈಪೋಟಿ ಶುರುವಾಗಿದೆ. ತಮ್ಮ ಶಕ್ತಿ ಹೆಚ್ಚಿಸಿ ಕೊಳ್ಳಲು ಸದಸ್ಯರನ್ನು ತಮ್ಮ ಪಕ್ಷಕ್ಕೆ ಬೆಂಬಲಿಸುವಂತೆ ಮುಖಂಡರಿಂದ ಒತ್ತಡಗಳು ಹೆಚ್ಚುತ್ತಿವೆ.
ಕಲ್ಪತರು ನಾಡಿನಾದ್ಯಂತ ಗ್ರಾಪಂ ಚುನಾವಣೆ ಪೂರ್ಣಗೊಂಡು ಯಾವ ಪಕ್ಷದ ಅಭ್ಯರ್ಥಿಗಳು ಎಷ್ಟು ಗೆದ್ದಿದ್ದಾರೆ ಎನ್ನುವುದು ಆಯಾ ಪಕ್ಷಗಳ ಮುಖಂಡರಿಗೆ ತಿಳಿಯುತ್ತಲೇ ಈಗ ಯಾವ ಗ್ರಾಪಂ ನಾವು ಸ್ವತಂತ್ರವಾಗಿ ಅಧಿಕಾರ ಹಿಡಿಯಬಹುದು. ಇನ್ನು ತಮ್ಮ ಪಕ್ಷದ ಬೆಂಬಲಿಗರ ಕೊರತೆ ಇರುವ ಕಡೆಯೂ ಅಧಿಕಾರ ಹಿಡಿಯಲು ಪಕ್ಷದ ಮುಖಂಡರು ತಂತ್ರಗಾರಿಕೆ ಎಣೆಯಲಾರಂಭಿಸಿದ್ದಾರೆ.ಸರ್ಕಾರದಿಂದ ಗ್ರಾಪಂ ವಾರು ಮೀಸಲಾತಿಪ್ರಕಟವಾಗುತ್ತಲೇ ತಮ್ಮ ಪಕ್ಷವನ್ನು ಅಧಿಕಾರಕ್ಕೆತರಬೇಕು ಎನ್ನುವ ಕಾಳಜಿಯಿಂದ ಪಕ್ಷದ ಮುಖಂಡರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚೆ ಆರಂಭಿಸಿದ್ದಾರೆ.
ಅದಕ್ಕಾಗಿ ಈಗಿನಿಂದಲೇ ಮೀಸಲಾತಿ ಪ್ರಕಟವಾಗುವ ಮುನ್ನವೇ ತಮ್ಮ ಬೆಂಬಲಿಗರ ಶಕ್ತಿ ಹೆಚ್ಚಿಸಿ ಕೊಳ್ಳಲು ಇತರೆ ಪಕ್ಷಗಳ ಬೆಂಬಲಿಗರಾಗಿ ಗೆದ್ದಿರುವವರಿಗ ಪಕ್ಷಗಳಮುಖಂಡರಿಂದ ಕರೆಗಳ ಮೇಲೆ ಕರೆಗಳುಹೋಗುತ್ತಿವೆ. ಈ ವರೆಗೆ ಗ್ರಾಪಂನಲ್ಲಿ ಇರುವ ಮೀಸಲಾತಿ ಆದರಿಸಿ ಮುಂದೆ ನಮ್ಮ ಪಂಚಾಯಿತಿಯಲ್ಲಿ ಇಂತಹದ್ದೇ, ಮೀಸಲಾತಿ ಬರಬಹುದು ಎನ್ನುವ ಲೆಕ್ಕಾಚಾರದ ಮೇಲೆ ಯಾರು ಯಾರನ್ನು ಅಧ್ಯಕ್ಷ ಉಪಾಧ್ಯಕ್ಷರನ್ನಾಗಿ ಮಾಡಬಹುದು ಎಂಬ ಲೆಕ್ಕಚಾರ ಪ್ರಾರಂಭವಾಗಿದೆ.
ಅದಕ್ಕಾಗಿ ಸದಸ್ಯರುಗಳ ಕುದುರೆ ವ್ಯಾಪಾರ ಪ್ರಕ್ರಿಯೆ ಆರಂಭ ಗೊಂಡಿದೆ, ಬಿಜೆಪಿ ಕಾಂಗ್ರೆಸ್, ಜೆಡಿಎಸ್ ಬೆಂಬಲಿತ ಕಾರ್ಯಕರ್ತರು ಪಂಚಾಯತ್ ಫೈಟ್ನಲ್ಲಿಗೆದ್ದು ಬೀಗಿದ ಮೇಲೆ ಈಗ ಗೆದ್ದಿರುವ ವಿವಿದರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಬೇಡಿಕೆ ಹೆಚ್ಚು ಮಾಡಿಕೊಂಡಿದ್ದಾರೆ.ವಿವಿದ ಪಕ್ಷಗಳ ಬೆಂಬಲಿತ ಗ್ರಾಪಂಗಳ
ಸದಸ್ಯರು ಪಂಚಾಯತ್ ಅಧಿಕಾರ ಗದ್ದುಗೆ ಹಿಡಿಯಲು ತಂತ್ರಗಾರಿಕೆ ಎಣೆದಿದ್ದಾರೆ.ಜಿಲ್ಲೆಯ 329 ಗ್ರಾಪಂಗಳಲ್ಲಿ ಅಧಿಕಪಂಚಾಯತ್ಗಳ ಗದ್ದುಗೆ ಹಿಡಿಯಲುಮೂರು ರಾಜಕೀಯ ಪಕ್ಷಗಳಿಂದ ಸದಸ್ಯರಕುದುರೆ ವ್ಯಾಪಾರ ಮಾಡಿ ಅಧಿಕಾರ ಹಿಡಿಯಲು ಎಲ್ಲಾ ರೀತಿಯ ತಯಾರಿ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಬಿಜೆಪಿಪಕ್ಷಗಳು ತನ್ನ ಕಮಾಲು ಮುಂದುವರಿಸಿವೆ ಗೆದ್ದಿರುವ ಅಭ್ಯರ್ಥಿಗಳಲ್ಲಿ ಕೆಲವರು ಇನ್ನೂಯಾವ ಪಕ್ಷದ ಬೆಂಬಲಿಗರು ಎಂದುಹೇಳುತ್ತಿಲ್ಲ ನಮ್ಮ ಪಕ್ಷದವರು ಎಂದು ಹೇಳುತ್ತಿದ್ದಾರೆ.
ಕಾಂಗ್ರೆಸ್, ಜೆಡಿಎಸ್,ಬಿಜೆಪಿ ಪಕ್ಷದಮುಖಂಡರು ನಮ್ಮ ಪಕ್ಷದ ಬೆಂಬಲಿಗರುಇಷ್ಟು ಸದಸ್ಯರು ಗೆದ್ದಿದ್ದಾರೆ ಎಂದುಹೇಳುತ್ತಿದ್ದಾರೆ, ಈಗ ಮೂರು ಪಕ್ಷಗಳವರುಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಮೇಲೆಕಣ್ಣಿಟ್ಟಿದ್ದು ಅದಕ್ಕೆ ಪೂರಕ ವಾಗಿ ಸದಸ್ಯರ ಬಲ ಬೇಕಾಗಿದೆ,
ಮೀಸಲಾತಿಗೆ ಅನುಗುಣವಾಗಿ ತಮ್ಮಪಕ್ಷದ ಬೆಂಬಲಿಗರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಆ ಪಂಚಾಯತ್ ನಮ್ಮ ಪಕ್ಷದ ವಶದಲ್ಲಿ ಇದೆ ಎನ್ನುವ ಹೆಗ್ಗಳಿಕೆ ಪಡೆಯಲು ಮೂರುಪಕ್ಷಗಳು ರಣ ತಂತ್ರ ರೂಪಿಸುತ್ತಿದ್ದಾರೆ. ಮುಂದೆ ಮಾರ್ಚ್ ಏಪ್ರಿಲ್ನಲ್ಲಿ ಬರಲಿರುವಜಿಪಂ, ತಾಪಂಗಳ ಚುನಾವಣೆ ಗಮನದಲ್ಲಿಇಟ್ಟು ಕೊಂಡು ಗ್ರಾಪಂ ಅಧಿಕಾರ ಹಿಡಿಯಲುಮೂರು ರಾಜಕೀಯ ಪಕ್ಷಗಳು ಕಾರ್ಯತಂತ್ರ ಎಣಿಯುತ್ತಲಿವೆ.
–ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ
Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತೆಯರು
2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಈ ಬಾರಿ ಸೋಮಣ್ಣ ಗೆಲ್ಲಬೇಕು: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?