ಸೋಂಕಿಗೆ ಸರ್ಕಾರ ಕಡಿವಾಣ ಹಾಕಲಿ
Team Udayavani, May 20, 2021, 9:03 PM IST
ತುಮಕೂರು: ಕೊರೊನಾ ಎರಡನೇ ಅಲೆ ಈಗ ತೀವ್ರವಾಗಿದೆ. ಈ ಮೊದಲು ಸೋಂಕು ನಗರ ಮತ್ತುಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿತ್ತು. ಈಗ ಹಳ್ಳಿಯಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಈ ಕೊರೊನಾವೇಗವನ್ನು ಸರ್ಕಾರ ತಡೆಯದಿದ್ದರೆ ಮುಂದೆ ಭಾರೀಅನಾಹುತವಾಗುತ್ತದೆ ಎಂದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಆತಂಕ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾಸೋಂಕು2ನೇ ಅಲೆ ಈಗ ಗ್ರಾಮೀಣ ಭಾಗಕ್ಕೆ ಹೆಚ್ಚಾಗಿಹಬ್ಬಿರುವುದು ಕಳವಳ ಮೂಡಿಸಿದೆ. ಪಾವಗಡಸೇರಿದಂತೆ ಜಿಲ್ಲೆಯ ಗ್ರಾಮೀಣಭಾಗದಲ್ಲಿಕೊರೊನಾತೀವ್ರತೆ ಹೆಚ್ಚಾಗಿಯೇ ಇದೆ. ಇದರಿಂದ ಜನ ಸಂಕಷ್ಟಪಡುತ್ತಿದ್ದಾರೆ. ಸರ್ಕಾರ ಸರಿಯಾಗಿ ಕೆಲಸ ಮಾಡಿಜಾಗೃತಿ ಮೂಡಿಸದಿದ್ದರೆ ಇಡಿ ರಾಜ್ಯ ವಿನಾಶದಹಂಚಿಗೆ ತಲುಪಲಿದೆ ಎಂದರು.ಗ್ರಾಮೀಣ ಭಾಗದ ಜನರು ಸರಿಯಾಗಿ ಮಾಸ್ಕ್ಧರಿಸುತ್ತಿಲ್ಲ, ಸಾಮಾಜಿಕ ಅಂತರ ಕಾಪಾಡುತ್ತಿಲ್ಲ.ಸೋಂಕಿತರು ಸೂಕ್ತ ಕಾಲದಲ್ಲಿ ಸರಿಯಾದ ಚಿಕಿತ್ಸೆ ಪಡೆಯುತ್ತಿಲ್ಲ.
ಇದುಕೊರೊನಾ ಹೆಚ್ಚಳಕ್ಕೆಕಾರಣವಾಗಿದೆ.ಅಲ್ಲಿಯ ಅಧಿಕಾರಿಗಳು ಜನರಿಗೆ ಜಾಗೃತಿ ಮೂಡಿಸುತ್ತಿಲ್ಲ, ಮೊದಲು ಹಳ್ಳಿಯ ಜನರಲ್ಲಿ ಅರಿವು ಮೂಡಿಸಿಎನ್ಎಸ್ಎಸ್ ಮತ್ತು ಎನ್ಸಿಸಿ ಸೇರಿದಂತೆ ವಿವಿಧಸೇವಾ ಸಂಘಗಳನ್ನು ಬಳಸಿ ಜಾಗೃತಿ ಮೂಡಿಸಿ,ಅಲ್ಲದೇ ಸಮಾಜದಲ್ಲಿ ಹಲವಾರು ಸಂಘಗಳು ಇದ್ದುಅವುಗಳು ಸೇವಾ ಕಾರ್ಯದಲ್ಲಿ ತೊಡಗಿ ಜನರಲ್ಲಿಅರಿವು ಮೂಡಿಸಿ ಎಂದರು.
ಕೋವಿಡ್ ಗೆಲ್ಲಲು ಸಾಧ್ಯ: ಸರ್ಕಾರ ಜನರಿಗೆ ಅರಿವುಮೂಡಿಸುವ ಬಗ್ಗೆ ಗಮನಹರಿಸಲಿ. ರಾಜ್ಯದ ಎಲ್ಲಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ಗೆ ಸಂಬಂಧಿಸಿದಔಷಧಿ, ಮಾತ್ರೆಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ರೋಟರಿ, ಲಯನ್ಸ್ ಸೇರಿದಂತೆ ಎಲ್ಲರೀತಿಯ ಸಂಘ, ಸಂಸ್ಥೆಗಳು, ಸಂಘಟನೆಗಳ ಸಹಕಾರಪಡೆದರೆ ಮತ್ತು ಇದಕ್ಕೆ ಪೂರಕವಾಗಿ ಸಾರ್ವಜನಿಕರುಸ್ಪಂದಿಸಿದರೆ ಕೋವಿಡ್ ಗೆಲ್ಲಲು ಸಾಧ್ಯ ಎಂದುಅಭಿಪ್ರಾಯಪಟ್ಟರು.ಬೆಂಗಳೂರಿನ ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ಶ್ರೀ ರಾಮಕೃಷ್ಣ ಸೇವಾಶ್ರಮ ನೇತೃತ್ವದಲ್ಲಿ ಕೋವಿಡ್ 2ನೇ ಅಲೆಯ ನಿಯಂತ್ರಣಕ್ಕೆ ಯೋಜನೆರೂಪಿಸಿದ್ದು, ಏ.18ರಿಂದ ಮಾರ್ಚ್ 19ರವರೆಗೆಮಧ್ಯಂತರ ವರದಿ ತಯಾರಿಸಿದ್ದು, ಸೋಂಕು ಹರಡುವುದನ್ನುತಡೆಯಲುಅಗತ್ಯಮಾರ್ಗೋಪಾಯಗಳನ್ನುಜಾರಿಗೊಳಿಸಲು ಮುಂದಾಗಿದೆ ಎಂದರು.
ಶಾಶ್ವತ ನೀರಿನ ಸೌಕರ್ಯ: ನಮ್ಮ ಆಶ್ರಮದವತಿಯಿಂದ ಪಾವಗಡ ತಾಲೂಕಿನ ಅಗತ್ಯವಿರುವಕಡೆಸೋಂಕು ನಿವಾರಕ ಔಷಧ ಸಿಂಪಡಿಸುವಿಕೆ,ಮಧ್ಯಾಹ್ನದ ಭೋಜನ ವಿತರಿಸುವ ಕಾರ್ಯಕ್ರಮ,ದವಸ ಧಾನ್ಯಗಳ ಕಿಟ್ ವಿತರಣೆ, ಆಮ್ಲಜನಕ ಸಿಲಿಂಡರ್ ಕೊಡುವುದು, ಹೋಂ ಕಾರ್ವಂಟೈನ್ನಲ್ಲಿರುವಸೋಂಕಿತರಿಗೆ ಉಚಿತವಾಗಿ ಔಷಧ ವಿತರಣೆ, ಅಗ್ನಿಶಾಮಕ ಠಾಣೆಗೆ ಶಾಶ್ವತ ನೀರಿನ ಸೌಕರ್ಯ ಕಲ್ಪಿಸಲಾಗಿದೆ ಎಂದು ವಿವರಿಸಿದರು. ಆಶ್ರಮದ ಶಿವಕುಮಾರ್ ಮತ್ತಿತರರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
ಆಕಸ್ಮಿಕ ಬೆಂಕಿಗೆ ಅಡಿಕೆ, ಬಾಳೆ ಗಿಡಗಳು ನಾಶ… ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಆಕ್ರೋಶ
Pray for Rain: ಮಳೆಗಾಗಿ ಮಕ್ಕಳ ಮದುವೆ, ಊರಿಗೆಲ್ಲಾ ಊಟ!
Kunigal; ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ ಹಣ ದೋಚಿ ಪರಾರಿಯಾದ ದರೋಡೆಕೋರರು
ಸಂವಿಧಾನ ವಿರೋಧಿ ಹೇಳಿಕೆಯಿಂದ ಅನಂತ್ ಹೆಗಡೆಗೆ ಟಿಕೆಟ್ ತಪ್ಪಿದೆ: ಸೋಮಣ್ಣ
MUST WATCH
ಹೊಸ ಸೇರ್ಪಡೆ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್