ಲಾಕ್ಡೌನ್ ಸಡಿಲಿಕೆ: ರಸ್ತೆಗಳಲ್ಲಿ ಜನವೋ ಜನ
Team Udayavani, Jun 15, 2021, 8:15 PM IST
ತುಮಕೂರು: ಮಹಾಮಾರಿ ಕೊರೊನಾ ಇನ್ನೂಜಿಲ್ಲೆಯಿಂದ ದೂರವಾಗಿಲ್ಲ. ಆದರೆ, ಸೋಂಕುಕಡಿಮೆಯಾಗುತ್ತಿರುವುದಕ್ಕೆ ಜನರಿಗೆ ಅನುಕೂಲವಾಗಲಿಎಂದು ಜಿಲ್ಲಾಡಳಿತ ಲಾಕ್ಡೌನ್ ಸಡಿಲಿಕೆ ಮಾಡಿದ್ದರೂ ಅದನ್ನು ಜನ ಅರಿಯದೇ ಕೊರೊನಾ ನಿಯಮ ಮೀರಿ ಎಗ್ಗಿಲ್ಲದೇ ವಾಹನಗಳಲ್ಲಿ ಸಂಚಾರ ಆರಂಭಿಸಿದ್ದಾರೆ.
ಕಳೆದ 2-3 ದಿನಗಳಿಂದ ಪಾಸಿವಿಟಿದರ ಕಡಿಮೆಯಾಗಿ ಶೇಕಡ ಆರು, ಏಳು ಬರುತ್ತಿತ್ತು. ಸರ್ಕಾರಸೋಂಕು ಕಡಿಮೆಯಾಗಬಹುದು ಎಂದು ನಿರ್ಬಂಧಿತಲಾಕ್ಡೌನ್ಗೆ ಅವಕಾಶ ನೀಡಿ ದಿನಸಿ ಮತ್ತು ಅಗತ್ಯವಸ್ತು ಖರೀದಿಗೆ ಸ್ವಲ್ಪ ಸಡಿಲಿಕೆ ಮಾಡಿದ್ದೇ ತಡ ಸೋಮವಾರ ಕೊರೊನಾ ಮರೆತು ಲೀಲಾ ಜಾಲವಾಗಿ ವಾಹನಗಳಲ್ಲಿ ಎಂದಿನಂತೆ ಸಂಚಾರ ಆರಂಭಿಸಿದರು.
ಇದರಿಂದಸಹಜವಾಗಿಯೇ ಸಂಚಾರ ಸಮಸ್ಯೆ ಉಂಟಾಗಿತ್ತು.ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿನಗರದಲ್ಲಿ ಜ್ಯೂವೆಲ್ಲರಿ, ಜವಳಿ ಹಾಗೂ ಗ್ಯಾರೇಜ್ಗಳನ್ನು ಮಧ್ಯಾಹ್ನ 2 ಗಂಟೆವರೆಗೆ ತೆರೆಯಲು ಅವಕಾಶ ನೀಡಲಾಗುವುದು ಎಂದು ಘೋಷಿಸಿದ್ದರು. ಆದರೆಮತ್ತೆ ಭಾನುವಾರ ಸಂಜೆ ಬಟ್ಟೆ ಅಂಗಡಿ, ಚಿನ್ನ ಬೆಳ್ಳಿಅಂಗಡಿ ಹಾಗೂ ಗ್ಯಾರೇಜ್ ಗಳಿ ಆರಂಭವಾದರೆ ಇನ್ನೂ ಜನ ಸಂಚಾರ ಅಧಿಕವಾಗುತ್ತದೆ ಎಂದು ಈ ಅಂಗಡಿಗಳನ್ನು ತೆರೆಯಲು ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿವೈ.ಎಸ್.ಪಾಟೀಲ ಆದೇಶ ಹೊರಡಿಸಿದರು.
ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ