ಬೆಳೆಗಳಿಗೆ ಬೇಕು ಬೆಂಬಲ ಬೆಲೆ,ಖರೀದಿ ಕೇಂದ್ರ

ಬಯಲು ಸೀಮೆ ರೈತರಿಗೆ ಬೇಕು ಸರ್ಕಾರದ ನೆರವು

Team Udayavani, Oct 13, 2020, 4:00 PM IST

tk-tdy-2

ಮಧುಗಿರಿ: ಕಳೆದ ಬಾರಿ ಮಧುಗಿರಿಯಲ್ಲಿ ಪ್ರಥಮಬಾರಿಗೆ ರಾಗಿ ಖರೀದಿ ಕೇಂದ್ರ ತೆರದ ಪರಿಣಾಮ ಸಾವಿರಾರು ರೈತರು ನಷ್ಟದಿಂದ ಪಾರಾಗಿದ್ದರು. ಆದರೆ ಈ ಬಾರಿ ಇಂಥ ಬೆಂಬಲ ಬೆಲೆ ನೀಡುವ ರಾಗಿ ಅಥವಾ ಇತರೆ ಬೆಳೆಯನ್ನು ಖರೀದಿ ಕೇಂದ್ರವನ್ನು ಸರ್ಕಾರ ತೆರೆಯಲು ಮುಂದಾಗಬೇಕಿದೆ.

ಸರ್ಕಾರಈಗಾಗಲೇಜಾರಿಗೆ ತರಲುಹೊರಟಿರುವ ಭೂ ಸುಧಾರಣೆ, ಎಪಿಎಂಸಿ, ಬೀಜ ಹಾಗೂ ವಿದ್ಯುತ್‌ ಕಾಯ್ದೆಯಿಂದ ರೈತರು ಭಯಭೀತರಾಗಿದ್ದು, ರೈತ ರಿಂದ ಹೋರಾಟ ನಡೆಯುತ್ತಿದೆ. ಈ ಬಾರಿ ಉತ್ತಮಮಳೆಯಿಂದಾಗಿ ಬಯಲುಸೀಮೆಯ ರೈತರು ಉತ್ತಮಬೆಳೆಯ ನಿರೀಕ್ಷೆಯಲ್ಲಿದ್ದರು.

ರೈತ ನೆರವಿಗೆ ಬರಬೇಕು: ಆದರೆ ಅತಿವೃಷ್ಟಿಯಿಂದಬಯಲು ಸೀಮೆ ಬೆಳೆಗಳಾದ ರಾಗಿ, ಶೇಂಗಾ ಭೂಮಿಯಲ್ಲೆ ಮೊಳಕೆಯೊಡೆಯಲು ಆರಂಭಿಸಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕು. ಈಗಾಗಲೇ ಮಧುಗಿರಿಯಲ್ಲಿ ಖಾಸಗಿ ವರ್ತಕರಿಂದ ಶೇಂಗಾ ಖರೀದಿಯು ನಡೆಯುತ್ತಿದ್ದು, ದಲ್ಲಾಳಿಗಳ ಕಾಟವೂ ಮುಂದುವರಿದಿದೆ. ಈ ಕಾರ್ಯ ದಿಂದ ರೈತರು ನಷ್ಟ ಅನುಭವಿಸುತ್ತಿದ್ದರೂ ಎಪಿಎಂಸಿಗೆ ಆಯ್ಕೆ ಯಾದ ಚುನಾಯಿತ ರೈತರು ಅತ್ತ ಕಡೆ ತಲೆ ಹಾಕುತ್ತಿಲ್ಲ.

ಈ ಬಾರಿ ಖರೀದಿ ಕೇಂದ್ರವಿಲ್ಲ: ಈ ಬಾರಿ ಖರೀದಿ ಕೇಂದ್ರವಿಲ್ಲವೆಂದು ಈಗಾಗಲೇ ಸಿಎಂ ಸ್ಪಷ್ಟಪಡಿಸಿದ್ದು, ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ಚೆನ್ನಾ ನಾಯಕ್‌ ಮಾತ್ರಈ ಬಗ್ಗೆ ವರ್ಷಾಂತ್ಯದಲ್ಲಿ ಇಲಾಖೆ ತೀರ್ಮಾನ ಕೈ ಗೊಳ್ಳುವುದಾಗಿ ಹೇಳುತ್ತಾರೆ. ಆದರೆ ವಾಸ್ತವವಾಗಿ ಈ ಬಾರಿ ಎಲ್ಲೂ ರೈತರಿಂದ ಸರ್ಕಾರ ರೈತ ಬೆಳೆದ ಯಾವ ಬೆಳೆಯನ್ನೂ ಖರೀದಿ ಸುವುದಿಲ್ಲ ಎಂಬ ಮಾಹಿತಿಯಿದ್ದು ರೈತರಿಗೆ ಆತಂಕ ಉಂಟು ಮಾಡಿದೆ.ರೈತ ಸಂಘಆಕ್ರೋಶ:ಕಳೆದ ಬಾರಿ ಕ್ವಿಂಟಲ್‌ಗೆ3150ರೂ. ಬೆಂಬಲ ಬೆಲೆ ನೀಡಿ ರಾಗಿಯನ್ನು ಸರ್ಕಾರ ಖರೀದಿಸಿತ್ತು. ಇದರಿಂದಾಗಿ ರೈತರು ಸರಿಯಾದ ಬೆಲೆಸಿಕ್ಕ ಖುಷಿಯಲ್ಲಿದ್ದರು. ಆದರೆ ಈ ಬಾರಿ ಖರೀದಿ ಕೇಂದ್ರವನ್ನು ಸರ್ಕಾರ ಆರಂಭಿಸಿದರಿರುವುದು ರೈತ ವಿರೋಧಿಯಾಗಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ರಾಜಶೇಖರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತ ಸಮುದಾಯ ಆಗ್ರಹ: ತಾಲೂಕಿನಲ್ಲಿ 16 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಕೃಷಿ ಮಾಡಿರುವ ರೈತರು ಪ್ರಮುಖ ಬೆಳೆಗಳಾದ ರಾಗಿ, ಶೇಂಗಾ, ಭತ್ತ,ಹತ್ತಿ, ಜೋಳ, ಬೆಳೆದಿದ್ದಾರೆ. ಇದು ಕಳೆದ ಬಾರಿಗಿಂತ ಹೆಚ್ಚಾಗಿದ್ದು, ಈಗ ನಿರಂತರ ಮಳೆಯಿಂದಾಗಿರೈತರು ಕಂಗಾಲಾಗಿದ್ದಾರೆ. ರೈತರೊಂದಿಗೆ ಚೆಲ್ಲಾಟವಾಡುವ ಮಳೆ ಎಂದೂ ರೈತರಿಗೆ ಸಮರ್ಥವಾಗಿ ಮಳೆ ಸುರಿಸಿಲ್ಲ. ಇಂಥ ಸಂದರ್ಭದಲ್ಲಿ ಖರೀದಿ ಕೇಂದ್ರವನ್ನು ತರೆಯದಿರುವ ಸರ್ಕಾರದ ನಿರ್ಧಾರ ಸರಿಯಾದ ಕ್ರಮವಲ್ಲ. ಕಳೆದ ಬಾರಿಯಂತೆ ರೈತರಿಗೆ ಖರೀದಿ ಕೇಂದ್ರ ತೆರೆಯುವಂತೆ ರೈತ ಸಮುದಾಯ ಒತ್ತಾಯಿಸುತ್ತಿದೆ.

ಕಳೆದ ಬಾರಿ 1,347ಕ್ವಿಂಟಲ್‌ ರಾಗಿ ಖರೀದಿ : ತಾಲೂಕಿನಲ್ಲಿ 1347 ಕ್ವಿಂಟಲ್‌ ರಾಗಿಯನ್ನುಖರೀದಿಸಿರುವ ಸರ್ಕಾರ 79 ರೈತರಖಾತೆಗಳಿಗೆ ಕ್ವಿಂಟಲ್‌ಗೆ 3150 ರೂ. ನಂತೆ ಒಟ್ಟು 42.43ಲಕ್ಷ ಹಣವನ್ನುಖಾತೆಗೆ ಹಾಕಿದ್ದು, ಯಾವುದೇ ಬಾಕಿಯಿಲ್ಲವೆಂದು ತಾಲೂಕು ಆಹಾರ ನಿರೀಕ್ಷಕ ಗಣೇಶ್‌ಮಾಹಿತಿ ನೀಡಿದ್ದಾರೆ. ಈ ಬಾರಿಬೆಂಬಲಬೆಲೆ ಹಾಗೂಖರೀದಿ ಕೇಂದ್ರದಬಗ್ಗೆ ಸರ್ಕಾರದಿಂದ ಯಾವುದೇ ಆದೇಶವಿಲ್ಲ. ಹಾಗಾಗಿ ಸರ್ಕಾರದ ನಿರ್ಧಾರದ ಮೇಲೆ ನಿಂತಿದ್ದು,ಸರ್ಕಾರದಿಂದ ಹಸಿರು ನಿಶಾನೆ ದೊರೆತರೆತಾಲೂಕಿನಲ್ಲೂಖರೀದಿ ಕೇಂದ್ರ ತೆರೆಯುವುದಾಗಿ ತಿಳಿಸಿದರು.

ಈಗಿನ ಸರ್ಕಾರ ರೈತರ ಮೇಲೆ ನಿರಂತರ ಬರೆ ಎಳೆಯುತ್ತಿದ್ದು, ಅದುಖರೀದಿ ಕೇಂದ್ರ ಹಾಗೂ ಬೆಂಬಲ ಬೆಲೆ ತಡೆಯುವ ತನಕ ಬಂದು ನಿಂತಿದೆ. ಅಕಾಲಿಕ ಮಳೆಯಿಂದಾಗಿ ರೈತರು ನಿರಂತರ ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲೇ ಭೂ ಸುಧಾರಣೆ, ಎಪಿಎಂಸಿ ಹಾಗೂ ಬೀಜ ಕಾಯ್ದೆ ತಿದ್ದುಪಡಿಗೆ ಮುಂದಾಗಿ ರೈತರ ಜೀವನ ಕೊನೆಗೊಳಿಸಲು ಮುಂದಾಗಿದೆ. ಇನ್ನೂ ಬೆಂಬಲ ಬೆಲೆ,ಖರೀದಿ ಕೇಂದ್ರ ಆರಂಭಿಸದಿದ್ದರೆ ಸಣ್ಣ ರೈತರ ಪಾಡುಬೆಂಕಿಗೆ ಬಿದ್ದ ಹುಳುವಿನಂತಾಗುತ್ತದೆ. ಸರ್ಕಾರ ಬೇಗ ಬೆಂಬಲ ಬೆಲೆ ನೀಡಿ,ಖರೀದಿ ಕೇಂದ್ರ ಸ್ಥಾಪನೆಗೆ ಮುಂದಾಗಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ. ಆನಂದ ಪಟೇಲ್‌, ಅಧ್ಯಕ್ಷರು, ಜಿಲ್ಲಾ ರೈತಸಂಘ ಹಾಗೂ ಹಸಿರು ಸೇನೆ.

 

ಮಧುಗಿರಿ ಸತೀಶ್‌

ಟಾಪ್ ನ್ಯೂಸ್

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.