ನಗರದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖ!
Team Udayavani, May 11, 2021, 4:09 PM IST
ತುಮಕೂರು: ಜಿಲ್ಲೆಯಲ್ಲಿ ದಿನೇ ದಿನೆ ಕೋವಿಡ್ ಸೋಂಕಿನ ಪ್ರಕರಣ ಹೆಚ್ಚು ವರದಿಯಾಗುತ್ತಿತ್ತು, ಈಗ 3 ದಿನದಿಂದ ಸೋಂಕಿತರ ಪ್ರಮಾಣ ಕಡಿಮೆಯಾಗಿದೆ. ಜನರು ಇನ್ನು ಜಾಗೃತರಾಗಿ ಇರಬೇಕು ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು.
ನಗರದ ಮಹಾನಗರ ಪಾಲಿಕೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ಜಿಲ್ಲೆಯ ಕೊರೊನಾ ಹಾಟ್ಸ್ಪಾಟ್ ಆಗಿರುವತುಮಕೂರು ನಗರದಲ್ಲಿ ಕೋವಿಡ್ ಸೋಂಕನ್ನು ಇಳಿಮುಖ ವಾಗಿಸಲು ಪಾಲಿಕೆಹಲವು ಕ್ರಮ ಕೈಗೊಳ್ಳುತ್ತಿದೆ. ನಗರದಲ್ಲಿ440,0 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲೆಯಲ್ಲಿ ಅಧಿಕ ಸೋಂಕಿತರ ಪ್ರದೇಶವಾಗಿಮಾರ್ಪಟ್ಟಿದೆ. ನಗರದ ಸೋಂಕಿನ ಸರಪಳಿ ಕಳಚಲು ಪಾಲಿಕೆ, ಆರೋಗ್ಯ ಇಲಾಖೆ, ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿಸ್ವಯಂಸೇವಕರು, ಪಾಲಿಕೆ ಸಿಬ್ಬಂದಿ ಮೂಲಕಹೆಚ್ಚು ಗಂಟಲು ದ್ರವ ಪರೀಕ್ಷೆ, ವ್ಯಾಕ್ಸಿನೇಷನ್,ಸೋಂಕಿತರ ಮನೆ ಮನೆಗೆ ತೆರಳಿ ಆಕ್ಸಿಜನ್ ಪಲ್ಸ್ ರೇಟ್ ಪರಿಶೀಲನೆ ಕಾರ್ಯ ಮಾಡುತ್ತಿದ್ದು, 1,463 ಮಂದಿ ಸದ್ಯಕ್ಕೆ ಸೋಂಕಿತರಾಗಿ ಹೋಂ ಐಸೋಲೇಷನ್ ನಲ್ಲಿದ್ದಾರೆ. ಅವರಲ್ಲಿ ಅರ್ಹರಿಗೆ ಆಹಾರ, ಮೆಡಿಕಲ್ ಕಿಟ್ ಪೂರೈಸುವ ಕಾರ್ಯ ಮಾಡುತ್ತಿದೆ ಎಂದರು.
ನಗರದಲ್ಲಿ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಎಎನ್ಎಂ ವೈದ್ಯಕೀಯಸಿಬ್ಬಂದಿ, ಆರೋಗ್ಯ ಇಲಾಖೆ ವ್ಯಾಕ್ಸಿನ್,ಕೋವಿಡ್ ಕೇರ್ ಸೆಂಟರ್ಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗಿದೆ. ಈ ಕಾರಣಕ್ಕೆ 35ವಾರ್ಡ್ ಕಮಿಟಿ ರಚಿಸಿ ಆಶಾಕಾರ್ಯಕರ್ತೆಯರು, 27 ಸ್ವಯಂಸೇವಕರನ್ನು ಗುರುತಿಸಿ ಅವರಿಗೆ ತರಬೇತಿ ನೀಡಿ, ವ್ಯಾಕ್ಸಿನ್ ಹಾಕಿ ಸೂಕ್ತ ಸುರಕ್ಷಾ ಪರಿಕರ ನೀಡಿ ವಾರ್ಡ್ ವ್ಯಾಪ್ತಿಯಲ್ಲಿ ಸೋಂಕಿತರು, ಹೋಂ ಐಸೋಲೇಷನ್ನಲ್ಲಿರುವವರನ್ನು ಪತ್ತೆ ಹಚ್ಚಿ ಅವರಿಗೆ ಅಗತ್ಯ ಔಷಧ ಪೂರೈಸಿ ಸಲಹೆಗಳನ್ನು ನೀಡಲಾಗುತ್ತಿದೆ ಎಂದರು.
ಹೊಸ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ: ಮಹಾನಗರ ಪಾಲಿಕೆ ಕೈಗೊಂಡ ನಿಯಂತ್ರಣಕ್ರಮಗಳಿಂದ ನಗರದಲ್ಲಿ ನಾಲ್ಕು ದಿನಗಹಿಂದೆ ನಿತ್ಯ 700ಕ್ಕೂ ಮೇಲ್ಪಟ್ಟು ದಾಖಲಾಗುತ್ತಿದ್ದ ಹೊಸ ಸೋಂಕಿನಪ್ರಕರಣ 300ಕ್ಕೆ ಭಾನುವಾರದಿಂದ ಇಳಿಕೆಯಾಗಿದೆ. ನಾಗರಿಕರ ಸಹಕಾರವಿದ್ದಲ್ಲಿ ಸೋಂಕಿನ 2ನೇ ಅಲೆಯನ್ನು ಸಮರ್ಥವಾಗಿಹಿಮ್ಮೆಟ್ಟಿಸುವ ವಿಶ್ವಾಸ ಮೂಡಿದೆ. ಪಾಲಿಕೆಮೇಯರ್, ಉಪಮೇಯರ್, ಸದಸ್ಯರು,ಶಾಸಕರು, ಸಂಸದರು, ಮಾಜಿಜನಪ್ರತಿನಿಧಿಗಳು, ಸಿಬ್ಬಂದಿ,ಪೌರಕಾರ್ಮಿಕರು ಸಹ ಅಗತ್ಯ ಸಹಕಾರ ನೀಡುತ್ತಿದ್ದಾರೆ ಎಂದರು.
ಕಿರಿದಾದ ಮನೆಯಲ್ಲಿದ್ದು, ಹೋಂ ಐಸೋಲೇಷನ್ ಅಸಾಧ್ಯವಾದವರನ್ನುಗುರುತಿಸಿ ಅವರನ್ನು ಕೋವಿಡ್ ಕೇರ್ಸೆಂಟರ್ಗೆ ಸ್ಥಳಾಂತರಿಸಲು ಆ್ಯಂಬುಲೆನ್ಸ್ ಅನ್ನು ಸೋಮವಾರದಿಂದ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸೋಂಕಿತರ ಮನೆ ಡೀಸಿ ಭೇಟಿ: ನಗರದಲ್ಲಿ ಕೋವಿಡ್ ಸೋಂಕಿತರಾಗಿಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿ ಇದ್ದು, ಚಿಕಿತ್ಸೆ ಪಡೆಯುವ ಸೋಂಕಿತರ ಮನೆಗಳಿಗೆ ಸೋಮವಾರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಪಾಲಿಕೆ ಆಯುಕ್ತೆ ರೇಣುಕಾ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಸೋಂಕಿತರ ಕುಟುಂಬದವರಿಂದ ಮಾಹಿತಿ ಪಡೆದು ಸೋಂಕಿತರಿಗೆ ಧೈರ್ಯ ತುಂಬಿದರು.
ಸೋಂಕಿತರಿಗೆ ನೆರವು ನೀಡಲು ನಮ್ಮಲ್ಲಿ ಆಶಾ, ಆರೋಗ್ಯಕಾರ್ಯಕರ್ತೆಯರು ಹೆಚ್ಚುಇಲ್ಲದ ಕಾರಣ ಸ್ವಯಂ ಸೇವಕರನ್ನುನೇಮಕ ಮಾಡಿದ್ದು,ಸ್ವಯಂಸೇವಕರು ಉತ್ತಮ ಕೆಲಸಮಾಡುತ್ತಿದ್ದಾರೆ. ಇವರಿಂದಸೋಂಕಿತರಿಗೆ ಹೆಚ್ಚು ನೆರವು ದೊರೆಯುತ್ತಿದೆ. ಸೋಂಕಿತರಲ್ಲಿನಮ್ಮನ್ನು ವಿಚಾರಿಸುವವರು ಇದ್ದಾರೆ ಎನ್ನುವ ಆತ್ಮವಿಶ್ವಾಸ ಮೂಡಿದೆ.-ರೇಣುಕಾ ಆಯುಕ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
ಆಕಸ್ಮಿಕ ಬೆಂಕಿಗೆ ಅಡಿಕೆ, ಬಾಳೆ ಗಿಡಗಳು ನಾಶ… ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಆಕ್ರೋಶ
Pray for Rain: ಮಳೆಗಾಗಿ ಮಕ್ಕಳ ಮದುವೆ, ಊರಿಗೆಲ್ಲಾ ಊಟ!
Kunigal; ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ ಹಣ ದೋಚಿ ಪರಾರಿಯಾದ ದರೋಡೆಕೋರರು
ಸಂವಿಧಾನ ವಿರೋಧಿ ಹೇಳಿಕೆಯಿಂದ ಅನಂತ್ ಹೆಗಡೆಗೆ ಟಿಕೆಟ್ ತಪ್ಪಿದೆ: ಸೋಮಣ್ಣ
MUST WATCH
ಹೊಸ ಸೇರ್ಪಡೆ
Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ