ಔಷಧಿ ವನ ಪುನರುಜ್ಜೀವನಗೊಳಿಸಲು ಆಗ್ರಹ

ನಾಮದ ಚಿಲುಮೆಯ ಸಿದ್ಧಸಂಜೀವಿನಿ ಔಷಧಿ ಸಸ್ಯ ವನ ಸಂಪೂರ್ಣ ನಾಶ: ಕ್ರಮಕ್ಕೆ ಮನವಿ

Team Udayavani, May 22, 2019, 10:50 AM IST

tk-tdy-2..

ತುಮಕೂರು ತಾಲೂಕಿನ ನಾಮದ ಚಿಲುಮೆ.

ತುಮಕೂರು: ತಾಲೂಕಿನ ನಾಮದ ಚಿಲುಮೆ ಯಲ್ಲಿರುವ ಅರಣ್ಯ ಇಲಾಖೆಯ ಸಿದ್ಧ ಸಂಜೀವಿನಿ ಔಷಧಿಸಸ್ಯ ವನ ಸಂಪೂರ್ಣವಾಗಿ ಪಾಳು ಬಿದ್ದಿದೆ. ಅದ‌ನ್ನು ಪುನರುಜ್ಜೀವನಗೊಳಿಸಿ ಮೊದಲಿನಂತೆ ಆಕರ್ಷಣೀಯ ಕೇಂದ್ರವನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರಿ ರಾಜ್ಯಪಾಲರು, ಸಿಎಂ, ಡಿಸಿಎಂ, ಅರಣ್ಯ ಸಚಿವರಿಗೆ ಆಗ್ರಹಪೂರ್ವಕ ಮನವಿ ಯನ್ನು ತುಮಕೂರಿನ ಸಾರ್ವಜನಿಕ ಹೋರಾ ಟಗಾರ ಆರ್‌.ವಿಶ್ವನಾಥನ್‌ ಸಲ್ಲಿಸಿ ದ್ದಾರೆ. ತಾಲೂಕಿನ ಅರೆಗುಜ್ಜನಹಳ್ಳಿ ಗ್ರಾಪಂ ವ್ಯಾಪ್ತಿ ಯಲ್ಲಿರುವ ನಾಮದ ಚಿಲುಮೆಯು ದೇವ ರಾಯನದುರ್ಗ ಅರಣ್ಯ ಪ್ರದೇಶದ ನಡುವೆ ಇರುವ ಸುಂದರ ತಾಣವಾಗಿದೆ. ನಿಸರ್ಗ ಧಾಮವಷ್ಟೇ ಅಲ್ಲದೆ, ಪೌರಾಣಿಕ ವಾಗಿಯೂ ಪ್ರಸಿದ್ಧಿ ಪಡೆದಿದೆ. ಇಲ್ಲಿರುವ ಅರಣ್ಯ ಇಲಾ ಖೆಗೆ ಸೇರಿದ ಸಿದ್ಧಸಂಜೀವಿನಿ ಔಷಧಿ ಸಸ್ಯ ವನ ಸೂಕ್ತ ನಿರ್ವಹಣೆ, ಮೇಲ್ವಿ ಚಾರಣೆ ಯಿಲ್ಲದೇ ಪಾಳುಬಿದ್ದಿರುವುದು ಶೋಚನೀಯ ಸಂಗತಿ ಎಂದು ಮನವಿಯಲ್ಲಿ ವಿಷಾದಿಸಿದ್ದಾರೆ.

ವನದಲ್ಲಿದೆ ವೈವಿಧ್ಯಮಯ ಅಸಂಖ್ಯಾತ ಸಸ್ಯ:ಸುಮಾರು 15 ವರ್ಷಗಳಿಗೂ ಹಿಂದೆ ಆಗಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತೋರಿದ ಆಸಕ್ತಿ ಹಾಗೂ ಅಪಾರ ಪರಿಶ್ರಮ ದಿಂದ ನಾಮದ ಚಿಲುಮೆಯಲ್ಲಿ ಸಿದ್ಧ ಸಂಜೀವಿನಿ ಔಷಧಿಸಸ್ಯ ವನ ಹೊಸದಾಗಿ ಸೃಷ್ಟಿ ಯಾಯಿತು. ತುಮಕೂರು ಭಾಗದಲ್ಲಿ ಪ್ರಪ್ರಥಮ ಬಾರಿಗೆ ಇಂತಹದೊಂದು ವನ ರೂಪುಗೊಂಡು ನಾಮದ ಚಿಲುಮೆಯ ಆಕರ್ಷಣೆಯನ್ನು ದ್ವಿಗುಣಗೊಳಿಸಿತು. ಅಪ ರೂಪದ ಹಾಗೂ ವೈವಿಧ್ಯಮಯವಾದ ಅಸಂಖ್ಯಾತ ಔಷಧಿ ಸಸ್ಯಗಳಿಂದ ಕೂಡಿದ್ದ ಈ ವನವು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸತೊಡಗಿತು. ಸುಮಾರು 15 ಎಕರೆ ಯಷ್ಟು ವಿಶಾಲವಾದ ಪ್ರದೇಶದಲ್ಲಿ ಔಷಧಿ ಸಸ್ಯಗಳ ನರ್ಸರಿ, ಪಿರಮಿಡ್‌ ಧ್ಯಾನ ಮಂದಿರ, ನವಗ್ರಹ ವನ, ಶಿವಪಂಚಾಯತನ ವನ, ಅಷ್ಟದಿಕ್ಪಾಲಕರ ವನ, ವರಮಹಾಲಕ್ಷ್ಮೀ ವ್ರತ ವನ, ಸತ್ಯನಾರಾಯಣ ವ್ರತ ವನ, ಸಂಕಷ್ಟ ಚತುರ್ಥಿ ವನ, ರಾಶಿ ನಕ್ಷತ್ರ ವನ, ಅಶೋಕ ವನ, ಅಗ್ರೌಷಧ ವನ, ಮಕ್ಕಳ ಉದ್ಯಾನವನ, ಸ್ವಾಸ್ಥ್ಯ ವನ, ಪಾರಂಪರಿಕ ವೈದ್ಯ ಚಿಕಿತ್ಸಾಲಯ, ಗಿಡಮೂಲಿಕಾ ವನ, ಉದ್ಯಾನವನ ಹೀಗೆ ಸುವ್ಯವಸ್ಥಿತವಾಗಿ ವಿನ್ಯಾಸಗೊಳಿಸಿ ಈ ಸಿದ್ಧಸಂಜೀವಿನಿ ಔಷಧಿಸಸ್ಯ ವನವನ್ನು ರೂಪಿಸ ಲಾಗಿತ್ತು ಎಂದು ತಿಳಿಸಿದ್ದಾರೆ.

ಜ್ಞಾನಾರ್ಜನೆಯ ಕೇಂದ್ರವಾಗಿತ್ತು: ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಔಷಧಿ ಸಸ್ಯಗಳ ಬಗ್ಗೆ ವಿವಿಧೆಡೆ ಸೂಕ್ತ ತರಬೇತಿಯನ್ನು ನೀಡಿ, ಇಲ್ಲಿಗೆ ನಿಯೋಜಿಸಲಾಗಿತ್ತು. ನಾಡಿನ ವಿವಿಧೆಡೆಗಳಿಂದ ಅಪರೂಪದ ಔಷಧಿ ಸಸ್ಯ ಗಳನ್ನು ತರಿಸಿ ಇಲ್ಲಿ ಬೆಳೆಸಲಾಯಿತು. ಕೊಳವೆ ಬಾವಿ ಮೂಲಕ ನೀರಿನ ವ್ಯವಸ್ಥೆ ಮಾಡ ಲಾಗಿತ್ತು. ಕಳೆ ಕೀಳಲು ಹಾಗೂ ಗಿಡಗಳ ವಿನ್ಯಾಸಕ್ಕೆ ಯಂತ್ರೋಪಕರಣಗಳ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಇಲ್ಲೊಂದು ಪಿರಮಿಡ್‌ ಧ್ಯಾನ ಮಂದಿರವನ್ನೂ ನಿರ್ಮಿಸಿ ಈ ವನದ ಆಕರ್ಷಣೆಯನ್ನು ಹೆಚ್ಚಿಸಲಾಗಿತ್ತು. ಆರಂಭದ ದಿನಗಳಲ್ಲಿ ಈ ಔಷಧಿ ಸಸ್ಯವನ ಉತ್ತಮ ಸ್ಥಿತಿಯಲ್ಲಿದ್ದು, ಆಸಕ್ತರಿಗೆ ಹಾಗೂ ವಿಶೇಷವಾಗಿ ಸಸ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಕೇಂದ್ರವೇ ಆಗಿಹೋಗಿತ್ತು. ಆದರೆ, ಇಂದು ಇಡೀ ವನವು ಸಂಪೂರ್ಣ ಅವನತಿ ಹೊಂದಿದೆ ಎಂದು ವಿವರಿಸಿದ್ದಾರೆ.

ಹೊಸ ಔಷಧಿ ಸಸ್ಯ ಬೆಳೆಸಿ: ಈ ವನವು ನಿರ್ಲಕ್ಷ್ಯಕ್ಕೊಳಗಾಗಿ, ಕ್ರಮೇಣ ಕಳೆಗುಂದುತ್ತಾ ಇಂದು ಅಕ್ಷರಶಃ ಕೇವಲ ನಾಮ ಫ‌ಲಕದಲ್ಲಷ್ಟೇ ಔಷಧಿ ಸಸ್ಯವನ ಎಂದು ಉಳಿದುಕೊಳ್ಳು ವಂತಹ ಹೀನಾಯ ಸ್ಥಿತಿಯನ್ನು ತಲುಪಿ ಬಿಟ್ಟಿದೆ. ತುಮಕೂರಿನ ಹೆಮ್ಮೆಯ ಆಸ್ತಿ ಯಾಗಬಹುದಾಗಿದ್ದ ಈ ಸ್ಥಳ ಇಂದು ಅವನತಿ ಹೊಂದಿದೆ. ಆದ್ದರಿಂದ ಈ ಔಷಧಿ ಸಸ್ಯವನ ವನ್ನು ಪುನರುಜ್ಜೀವನಗೊಳಿಸಿ ಮೊದಲಿನಂತೆ ಆಕರ್ಷಣೀಯ ಕೇಂದ್ರವಾಗಿಸಲು ನಾಶವಾಗಿ ರುವ ಔಷಧಿ ಸಸ್ಯಗಳ ಸ್ಥಳದಲ್ಲಿ ಮತ್ತೂಮ್ಮೆ ಹೊಸದಾಗಿ ಔಷಧಿ ಸಸ್ಯಗಳನ್ನು ಬೆಳೆಸಬೇಕು. ಔಷಧಿ ಸಸ್ಯಗಳ ಬಗ್ಗೆ ಅರಿವುಳ್ಳ ಸಿಬ್ಬಂದಿಯನ್ನು ಇಲ್ಲಿ ನೇಮಿಸಬೇಕು ಅಥವಾ ಇಲ್ಲಿರುವ ಸಿಬ್ಬಂದಿಗೆ ಆ ಬಗ್ಗೆ ತರಬೇತಿ ಕೊಡಿಸಬೇಕು. ಔಷಧಿ ಸಸ್ಯವನ ಸಿದ್ಧಗೊಳ್ಳುವಾಗ ಇಲ್ಲಿದ್ದ ಸಿಬ್ಬಂದಿಯನ್ನು ಕರೆಸಿ ಅವರ ಸಲಹೆ-ಸಹಕಾರ ಅನುಭವದ ಜ್ಞಾನ ಪಡೆದುಕೊಳ್ಳಬೇಕು. ಔಷಧಿ ಸಸ್ಯವನದ ನಿರ್ವಹಣೆಗಾಗಿ ಅಗತ್ಯ ವಿರುವಷ್ಟು ನುರಿತ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದ್ದಾರೆ.

ವೈಜ್ಞಾನಿಕವಾಗಿ ನೀರು ಪೂರೈಸಿ: ಕೊಳವೆ ಬಾವಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು. ಅಗತ್ಯವಿದ್ದರೆ ಹೆಚ್ಚುವರಿಯಾಗಿ ಕೊಳವೆಬಾವಿ ಕೊರೆಸಿ, ಆಮೂಲಕ ಇಡೀ ಔಷಧಿ ವನಕ್ಕೆ ನೀರು ಪೂರೈಸುವ ವ್ಯವಸ್ಥೆ ವೈಜ್ಞಾನಿಕವಾಗಿ ಆಗಬೇಕು. ಮಳೆ ನೀರಿನ ಸಂಗ್ರಹಕ್ಕೆ ವ್ಯವಸ್ಥೆ ಮಾಡಬೇಕು. ಕಳೆ ಕೀಳುವ ಹಾಗೂ ಗಿಡಗಳ ವಿನ್ಯಾಸ ನಿರ್ವಹಣೆಯ ಯಂತ್ರೋಪಕರಣಗಳನ್ನು ಒದಗಿಸಬೇಕು ಹಾಗೂ ಅದರ ಬಳಕೆಗೆ ಅಗತ್ಯವಿರುವ ಸೌಲಭ್ಯ ಒದಗಿಸಬೇಕು. ಔಷಧಿ ಸಸ್ಯಗಳ ತಜ್ಞರ ಮತ್ತು ಜಿಲ್ಲೆಯ ಪಾರಂಪರಿಕ ವೈದ್ಯರ ಜ್ಞಾನವನ್ನು ಈ ವನದ ಅಭಿವೃದ್ಧಿಗೆ ಬಳಸಿ ಕೊಳ್ಳಬೇಕು. ವನದ ಸುತ್ತಲೂ ಹಾಕಿರುವ ಬೇಲಿ, ಒಳಭಾಗದಲ್ಲಿ ಹಾಕಿರುವ ನಾಮಫ‌ಲಕ ಗಳು ಇತ್ಯಾದಿಗಳ ನಿರ್ವಹಣೆಗೆ ಶಾಶ್ವತ ವ್ಯವಸ್ಥೆ ಮಾಡಬೇಕು. ಇಲ್ಲಿರುವ ಪಿರಮಿಡ್‌ ಧ್ಯಾನ ಮಂದಿರವನ್ನು ಸುವ್ಯವಸ್ಥೆಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

1-aaaa

2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಈ ಬಾರಿ ಸೋಮಣ್ಣ ಗೆಲ್ಲಬೇಕು: ಎಚ್.ಡಿ.ದೇವೇಗೌಡ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.