ವಿದ್ಯಾರ್ಥಿಗಳ ಮನಗೆದ್ದ ಆದರ್ಶ ಶಿಕ್ಷಕ ಧನ್ಯಕುಮಾರ್‌


Team Udayavani, Sep 5, 2021, 3:54 PM IST

ವಿದ್ಯಾರ್ಥಿಗಳ ಮನಗೆದ್ದ ಆದರ್ಶ ಶಿಕ್ಷಕ ಧನ್ಯಕುಮಾರ್‌

ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌, ಲೇಖನಿ ಸಾಮಗ್ರಿ ವಿತರಿಸಿದ ಸಂದರ್ಭ.

ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಹೋಬಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಶಿಕ್ಷಕ ಧನ್ಯಕುಮಾರ್‌ ಅವರು ಸೇವೆಯ ಪ್ರಾರಂಭದ ದಿನದಿಂದಲೂ ಗ್ರಾಮೀಣ ಮಕ್ಕಳ ಪಾಲಿಗೆ ಆದರ್ಶ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೋಸ್ಕರ ತಮ್ಮ ಸೇವೆ ಮುಡಿಪಾಗಿಟ್ಟಿದ್ದಾರೆ.

ತಂದೆಯ ಮಾರ್ಗದರ್ಶನ: ಶೈಕ್ಷಣಿಕ ಜಿಲ್ಲೆಯಲ್ಲಿ ಮಧುಗಿರಿ ತಾಲೂಕಿನ ಪುರವರ ಹೋಬಳಿ ಬ್ಯಾಲ್ಯ ಎಂಬ ಪುಟ್ಟ ಗ್ರಾಮದಲ್ಲಿ ವರಲಕ್ಷ್ಯಮ್ಮ ಮತ್ತು ಶ್ರೀರಾಮಶೆಟ್ಟಿ ಅವರಿಗೆ ಹಿರಿಯ ಮಗನಾಗಿ ಸೆ.6, 1960ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಓದಿನಲ್ಲಿ ಆಸಕ್ತಿ ಇದ್ದು, ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾ ಭ್ಯಾಸವನ್ನು ಸ್ವಗ್ರಾಮದಲ್ಲಿಯೇ ಮುಗಿಸಿದರು. ಪಿಯುಸಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆ, ಪದವಿಯನ್ನು ಎಇಎಸ್‌ ಕಾಲೇಜಿನಲ್ಲಿ ಪೂರ್ಣಗೊಳಿಸಿ.ಬಿ.ಎಡ್‌ ವಿದ್ಯಾಭ್ಯಾಸವನ್ನು ಮಧುಗಿರಿಯ ಟಿವಿವಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಪೂರೈಸಿ ಶಿಕ್ಷಕರ ವೃತ್ತಿ
ತರಬೇತಿ ಮುಗಿಸಿದರು. ತಂದೆ ಶ್ರೀರಾಮಶೆಟ್ಟಿ ಅವರು ಶಿಕ್ಷಕರಾಗಿದ್ದರಿಂದ ಅವರ ಮಾರ್ಗದರ್ಶನದಲ್ಲಿ ಸ್ವಾಮಿ ವಿವೇಕಾನಂದರ ಆದರ್ಶ, ರಾಧಾಕೃಷ್ಣ, ಅಂಬೇಡ್ಕರ್‌, ಮಹಾತ್ಮಗಾಂಧೀಜಿ, ತತ್ವ ಸಿದ್ಧಾಂತಗಳನ್ನು ಆದರ್ಶವಾಗಿಟ್ಟುಕೊಂಡು ಬೆಳೆದರು.

ಶಿಕ್ಷಕ ಸೇವೆ ಪ್ರಾರಂಭ: ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಜಯಮಂಗಲಿ ಗ್ರಾಮಾಂತರ ಪ್ರೌಢ ಶಾಲೆಯಲ್ಲಿ 1985ರಲ್ಲಿ ವೃತ್ತಿ ಜೀವನ ಪ್ರಾರಂಭಿಸಿ, 1987ರಲ್ಲಿ ಸರ್ಕಾರಿ ಶಾಲೆಯಾಗಿ ಪರಿವರ್ತನೆಗೊಂಡು ಇದೇ ಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಎರಡು ವಿಷಯಗಳಿಗೂ ಸಹ ಶಿಕ್ಷಕರರಾಗಿ 25 ವರ್ಷ ಯಶಸ್ವಿಯಾಗಿ ಬೋಧನೆ ಮತ್ತು ಪೋಷಕರೊಂದಿಗೆ ಒಡನಾಟ, ವಿದ್ಯಾರ್ಥಿಗಳ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಸಾಗಿದರು.

ರಜಾ ದಿನದಲ್ಲೂ ಬೋಧನೆ: ಇವರು ರಜಾ ದಿನಗಳಲ್ಲೂ ಭಾನುವಾರ ಸಹ ವಿಶೇಷವಾಗಿ ಪ್ರೌಢಶಾಲೆಯ ತರಗತಿಗೆ ಬೆಳಗ್ಗೆ10ರಿಂದ ಮಧ್ಯಾಹ್ನ
1 ಗಂಟೆವರೆಗೂ ಹಾಗೂ ಪ್ರತಿ ಶನಿವಾರ 11ರಿಂದ 2ವರೆಗೂ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದರು. ಇನ್ನು ರಾಷ್ಟೀಯ ಹಬ್ಬಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಪಾಲ್ಗೊಂಡು ಹಾಗೂ ಸಾರ್ವಜನಿಕರು,ಪೋಷಕರು, ಶಾಲಾ ಶಿಕ್ಷಕರು, ಇಲಾಖೆ ಅಧಿಕಾರಿಗಳ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು.

ಇದನ್ನೂ ಓದಿ:ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಕೊಲೆ ಬೆದರಿಕೆ

ಹೃದಯ ತಪಾಸಣೆ ಚಿಕಿತ್ಸೆ: ಶಿಕ್ಷಕ ಧನ್ಯಕುಮಾರ್‌ ಮಕ್ಕಳಿಗೋಸ್ಕರ ಅಂದು ಬೆಂಗಳೂರು ಎಂ.ಎಸ್‌.ರಾಮಯ್ಯ ಆಸ್ಪತ್ರೆ ವತಿಯಿಂದ ಉಚಿತವಾಗಿ ಹೃದಯದ ತಪಾಸಣೆ ಕೂಡ ಮಾಡಿಸಿದರು. ಇದರಿಂದ4ಮಕ್ಕಳಿಗೆ ಹೃದಯದಲ್ಲಿ ರಂಧ್ರ ಇರುವುದು ಕಂಡು ಬಂದಿತು. ಇಂತಹ ಮಕ್ಕಳನ್ನು ಗುರುತಿಸಿ ಎಂ.ಎಸ್‌ ರಾಮಯ್ಯ ಆಸ್ಪತ್ರೆಯಲ್ಲಿ ಉಚಿತ ಆಪರೇಷನ್‌ ಕೂಡ ಮಾಡಿಸಲಾಗಿತ್ತು.

ಪ್ರಶಸ್ತಿ ಪುರಸ್ಕಾರ: ಶಿಕ್ಷಣ ಜ್ಞಾನ ಮಾಸಪತ್ರಿಕೆವತಿಯಿಂದ ಹೊಸದುರ್ಗದಲ್ಲಿ 10ನೇ ವರ್ಷದ(ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರು) ಪ್ರಶಸ್ತಿ
ಕೊಟ್ಟು ಗೌರವಿಸಿದರು. ಅನೇಕ ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಕಟ್ಟಲಾಗದ ಪ್ರತಿ ವಿದ್ಯಾರ್ಥಿಗಳಿಗೆ, ಎಲ್ಲ ಲೇಖನಿ ಸಾಮಗ್ರಿಗಳನ್ನು ತಮ್ಮ ದುಡಿಮೆಯಿಂದ ಬಂದ ಸಂಬಳದಿಂದ ನೀಡುತ್ತಿದ್ದರು. ಬಡವರು, ನಿರ್ಗತಿಕರು, ಶಾಲೆಯಿಂದ ಹೊರಗೂಳಿದಮಕ್ಕಳಿಗೂ ಸಹ ಶಾಲಾ ಶುಲ್ಕ ನೀಡಿ, ಅವರ ಕುಟುಂಬಕ್ಕೆ ಧೈರ್ಯ ತುಂಬಿ ಅವರ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದರು.

ಮಕ್ಕಳಿಗೆ ಪ್ರೇರಣೆ: ಧನ್ಯಕುಮಾರ್‌ರ ಸ್ಫೂರ್ತಿದಾಯಕ ಮಾತುಗಳನ್ನು ಕೇಳುತ್ತ ಕೂತರೆ ಕನ್ನಡ ಸರಸ್ವತಿಯೇ ಇವರ ಪದಗಳಲ್ಲಿ ಇರುವಂತಹ
ಅನುಭೂತಿ. ಸಾಮಾನ್ಯರಂತೆ ಇದ್ದು ನಮ್ಮಲ್ಲಿ ಗುರಿ ಸಾಧಿಸುವ ಛಲ ಹುಟ್ಟಿಸಿದ ಗುರು ಎಂದರೆ ಅವರೇ ನಮ್ಮ ಡಿ.ಎಸ್‌.ಧನ್ಯಕುಮಾರ್‌ ಆದರ್ಶ ಶಿಕ್ಷಕರು. 2009ರಲ್ಲಿ ಬಾಲಕಿಯರ ಪ್ರೌಢಶಾಲೆ ಹೊಳವನ ಹಳ್ಳಿಯಲ್ಲಿ 11 ವರ್ಷ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ 2020ರಲ್ಲಿ ನಿವೃತ್ತರಾದರು. ಇವರ ಮಾರ್ಗ ದರ್ಶನದಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯ, ಶಾಲಾ ಆವರಣದಲ್ಲಿ ಕಾಲುವೆ ಮುಚ್ಚಿಸಿದ್ದು, ಶಾಲಾಭಿವೃದ್ಧಿ, ಮಕ್ಕಳಿಗೆ ಸಲಹೆ ಮತ್ತು ಮಾರ್ಗ ದರ್ಶನ. ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ತಜ್ಞ ವೈದ್ಯರಿಂದ ಹೆಣ್ಣು ಮಕ್ಕಳಿಗೆ ಆರೋಗ್ಯದ ಬಗ್ಗೆ ಅರಿವು ಸ್ವಚ್ಛತೆ ಬಗ್ಗೆಮಾರ್ಗದರ್ಶನ,ರಾಜ್ಯಮಟ್ಟದಲ್ಲಿ ವಾಲಿಬಾಲ್‌, ಜಾವೆಲಿನ್‌ ಎಸೆತ, ರನ್ನಿಂಗ್‌ ಓಟದಲ್ಲಿ ಭಾಗವಹಿಸು ವಂತೆ ಮಕ್ಕಳಿಗೆ ಪ್ರೇರಣೆ ನೀಡಿದ್ದರು.

ನಾನು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ನನಗೆ ನೈತಿಕ ಮೌಲ್ಯ ಮತ್ತು ಆದರ್ಶ ಗುಣ ಬೆಳೆಸಿದ ಶ್ರೇಷ್ಠ ಗುರು. ನನ್ನ ಭವಿಷ್ಯ ರೂಪಿಸಿಕೊಳ್ಳಲು ದಾರಿದೀಪ ತೋರಿದ ಗುರುವಿಗೆ ಶಿಕ್ಷಕರ ದಿನಾಚರಣೆ ಪ್ರಯುಕ್ತ ಅನಂತ ನಮನ ಸಲ್ಲಿಸುತ್ತೇನೆ.
-ಎಚ್‌.ಎಂ ಮಂಜುನಾಥ್‌, ಪತ್ರಿಕಾ
ವಿತರಕ, ಹೊಳವನಹಳ್ಳಿ

ನಿವೃತ್ತ ಶಿಕ್ಷಕ ಧನ್ಯಕುಮಾರ್‌ ಅವರು ಶಿಕ್ಷಕ ವೃತ್ತಿಗೆ ಗೌರವಕೊಟ್ಟಂತಹ ವ್ಯಕ್ತಿ. ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ಕೌಶಲ ಗಳನ್ನು ಬೆಳೆಸಿ ಕೊಟ್ಟಂತಹ ವ್ಯಕ್ತಿ. ವೃತ್ತಿ ಜೀವನ ದಲ್ಲಿ ತರಗತಿಯಲ್ಲಿ ಬೋಧನೆ ಮತ್ತು ಆಡಳಿ ತಾತ್ಮಕ ಜವಾಬ್ದಾರಿ, ವೃತ್ತಿ ಬದ್ಧತೆಕರ್ತವ್ಯ ನಿಷ್ಠೆ ತೋರಿ ಇತರೆ ಶಿಕ್ಷಕರಿಗೆ ಮಾದರಿಯಾದವರು.
-ರುದ್ರೇಶ್‌, ಅಧ್ಯಕ್ಷರು, ಸರ್ಕಾರಿ ನೌಕರರ
ಸಂಘ, ಕೊರಟಗೆರೆ ತಾಲೂಕು

ಧನ್ಯಕುಮಾರ್‌ ಉತ್ತಮ ಮುಖ್ಯ ಶಿಕ್ಷಕರಾಗಿದ್ದರು. ಇವರು ಶಾಲಾ ವಿದ್ಯಾರ್ಥಿಗಳು, ಎಸ್‌ಡಿಎಂಸಿ, ಪೋಷಕರು, ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳ ಜೊತೆ ಉತ್ತಮ ಸಲಹೆ ಸಂವಹನ, ಮಾರ್ಗ ದರ್ಶನ ಹಾಗೂ ಸಮಾಜಮುಖೀ ಕೆಲಸ ಮಾಡುತ್ತಾ ತಮ್ಮ ಸೇವೆಯಲ್ಲಿ ಪ್ರಾಮಾಣಿಕತೆತೋರಿದ ಮಾದರಿ ಮುಖ್ಯ ಶಿಕ್ಷಕರಾಗಿದ್ದರು.
-ಎನ್‌.ಎಸ್‌.ಸುಧಾಕರ್‌, ಕ್ಷೇತ್ರ
ಶಿಕ್ಷಣಾಧಿಕಾರಿ, ಕೊರಟಗೆರೆ

-ಸಿದ್ದರಾಜು ಕೆ.

ಟಾಪ್ ನ್ಯೂಸ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.