ಸಂಸ್ಕಾರ ಹಾಗೂ ಸಾಧನೆಯಿಂದ ದೈವತ್ವ ಸಾಧ್ಯ

ತುಮಕೂರಿನ ರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಮತ

Team Udayavani, May 13, 2019, 4:54 PM IST

tumkur-tdy-6..

ಕುಣಿಗಲ್: ಸನಾತನ ಪರಂಪರೆ ಪ್ರತಿಪಾದಿಸುವಂತೆ ಪ್ರತಿಯೊಂದು ಜೀವಿಯೂ ಜನ್ಮತಃ ಮೃಗವಾಗಿರುತ್ತದೆ. ಸಂಸ್ಕಾರಗಳಿಂದ ಮಾನವ ಮತ್ತು ಸಾಧನೆಯಿಂದ ದೈವತ್ವವನ್ನು ಪಡೆಯುತ್ತದೆ ಎಂದು ತುಮಕೂರಿನ ರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ರಾಮಣ ಬ್ಲಾಕ್‌ನ ಶ್ರೀ ಕೋಂದಡರಾಮ ದೇವಸ್ಥಾನದಲ್ಲಿ ನಡೆದ ಶ್ರೀ ಶಂಕರ ಜಯಂತಿ ಹಾಗೂ ಸಾಮೂಹಿಕ‌ ಉಪನಯನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ವೇದಾಧ್ಯಯನ ಅಗತ್ಯ: ಮಾನವ ಜೀವನದ ಪಯಣ 16ಸಂಸ್ಕಾರದೊಂದಿಗೆ ಹಾಸುಹೊಕ್ಕಾಗಿದೆ. ಇವುಗಳಲ್ಲಿ ಉಪನಯನ ಅರ್ಥಾತ್‌ ಬ್ರಹ್ಮೋಪ ದೋಶ ಎಂಬುದು ಶ್ರೇಷ್ಠ ಸಂಸ್ಕಾರವಾಗಿದೆ. ಮಾಂಸದ ಶರೀರಕ್ಕೆ ತಾಯಿ, ತಂದೆಯರು ಜನ್ಮ ನೀಡಿದರೆ, ಸೂಕ್ಷ್ಮ ಶರೀರಕ್ಕೆ ದ್ವಿಜತ್ವ ಅಂದರೆ, ಎರಡನೇ ಜನ್ಮ ಪ್ರಾಪ್ತವಾಗುತ್ತದೆ. ಉಪನಯನ ಸಂಸ್ಕಾರ ಎಂದರೆ ಬದುಕಿಗೆ ಹೊಸ ದೃಷ್ಟಿಯನ್ನು ನೀಡುವ, ಜೀವನ ತತ್ವವನ್ನು ಪರಿಚಯಿಸುವ ಬದುಕಿನ ಶಿಕ್ಷಣ. ಆದ್ದರಿಂದ, ಪ್ರತಿಯೊಬ್ಬ ಮಾನವನಿಗೂ ವೇದಾಧ್ಯಯನ ಹಾಗೂ ಸದ್‌ಗ್ರಂಥಗಳ ಪಾರಾಯಣಗಳ ಧಾರ್ಮಿಕ ಕರ್ತವ್ಯ ಎನಿಸುತ್ತದೆ ಎಂದು ತಿಳಿಸಿದರು.

ಉಪನಯನಕ್ಕೆ ತಂದೆ ತಾಯಿ ಅಗತ್ಯ: ಸಮಾಜದಲ್ಲಿ ವಿವಾಹದ ಕರ್ತವ್ಯ ತಾಯಿ ತಂದೆಗಳಿಂದ ನಿರ್ವಹಿಸಲ್ಪಡಬಹುದು. ಕೆಲ ವೊಂದು ಸಂದರ್ಭಗಳಲ್ಲಿ ವಿವಾಹಗಳು ಪೊಲೀಸ್‌ ಠಾಣೆಗಳಲ್ಲಿ ಆಗಬಹುದು. ಆದರೆ, ಉಪನಯನ ಜನ್ಮ ಕೊಟ್ಟ ತಂದೆ ತಾಯಿಗಳ ಮತ್ತು ಕುಲ ಗುರುಗಳ ಸಮಕ್ಷಮದಲ್ಲಿಯೇ ನಡೆಯಬೇಕೇ ಹೊರತು ಆರಕ್ಷಕರ ಠಾಣೆಗಳಲ್ಲಿ ಅಲ್ಲ. ವಿದ್ಯಾರ್ಥಿ ಬದುಕಿನಲ್ಲಿ ಆಯಾ ಕಾಲಕ್ಕೆ ದೊರೆಯಬೇಕಾದ ಸಂಸ್ಕಾರಗಳನ್ನು ತಂದೆ ತಾಯಿ ಮತ್ತು ಸಮಾಜದ ಹಿರಿಯರೇ ನಿರ್ವಹಿಸಬೇಕು ಎಂದರು.

ಸಂಸ್ಕಾರ, ಶಿಕ್ಷಣ ಅವಶ್ಯಕ: ಸ್ವಾಮಿ ವಿವೇಕಾನಂದರು, ಶ್ರೀ ಶಂಕರಚಾರ್ಯರು ವೇದಾಧ್ಯಯನದ ಕುರಿತಾಗಿ ಸಮಾಜಕೆ ವಿಶೇಷ ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೇ, ದೇಶದ ಸಂಸ್ಕೃತಿಗಳ ಮುಂದುವರಿಕೆಗೆ ಸಂಸ್ಕಾರ, ಶಿಕ್ಷಣ ಅವಶ್ಯಕ ಎಂದು ಯುಗಪುರುಷರು ಸಾರಿ ಹೇಳಿದ್ದಾರೆ. ಅವರ ಸಂದೇಶಗಳನ್ನು ಬದುಕಿಗೆ ಹೆದ್ದಾರಿಗಳಾಗಿ ಪರಿಗಣಿಸಿ ಸಾಗಬೇಕಾದ ಕರ್ತವ್ಯ ಸಮಾಜದ್ದಾಗಿದೆ ಎಂದು ತಿಳಿಸಿದರು.

ಶ್ಲಾಘನೀಯ ಕಾರ್ಯ: ಕುಣಿಗಲ್ನ ಬ್ರಾಹ್ಮಣ ಸಾಮುದಾಯ 7 ಜನ ಒಟ್ಟಾಗಿ ಅತ್ಯಂತ ಉತ್ತಮ ರೀತಿಯಲ್ಲಿ ಉಪನಯನ ಕಾರ್ಯಕ್ರಮವನ್ನು ಆಯೋಜಿಸಿ ಸಾಕಾರಗೊಳಿಸುವುದು ಹರ್ಷ ದಾಯಕ ಸಂಗತಿ. ಇದು ಇಡೀ ಸಮಾಜಕ್ಕೆ ಮಾರ್ಗದರ್ಶಿಯಾಗಿದೆ ಎಂದು ವಿಪ್ರ ಜನಾಂಗದ ಮಾರ್ಗದರ್ಶಕರನ್ನು ಪೂಜ್ಯರು ಅಭಿನಂದಿಸಿದರು.

ನಿಮ್ಮ ಊರು ಕುಣಿಗಲ್ ನಿಮಗೆ ಏನು ಕೊಟ್ಟಿದೆ ಎಂದು ಹಲವಾರು ಜನರು ನನನ್ನು ಪ್ರಶ್ನಿಸುತ್ತಾರೆ. ಅದಕ್ಕೆ ನನ್ನ ಅಂತರಾಳದ ಉತ್ತರ, ನನ್ನ ಊರು ಬದುಕಿಗೆ ಬೇಕಾದ ಸರ್ವಸ್ವವನ್ನು ನೀಡಿದೆ. ಅಲ್ಲದೇ, ಪ್ರತಿಯಾಗಿ ಊರಿಗಾಗಿ ಎಷ್ಟೇ ಸೇವೆಗಳಿದ್ದರೂ ಹೆತ್ತ ತಾಯಿ ಹಾಗೂ ಹುಟ್ಟಿದ ಊರಿನ ಋಣ ತೀರಿಸಲು ಆಗದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಬಿ.ಎಸ್‌. ದೇವಿರಯ್ಯ, ಕೆ.ವಿ.ಸೀತಾರಾಮಯ್ಯ, ಸತ್ಯಾ ನಾರಾಯಣಶಾಸ್ತ್ರಿ, ಎಚ್.ಸಿ.ಸುರೇಶ್‌. ಎಂ.ಎನ್‌.ವೇಣುಕುಮಾರ್‌, ಕೆ.ಜನಾರ್ದನ್‌, ಕೃಷ್ಣಪ್ರಸಾದ್‌, ಲಲಿತಮ್ಮ, ಟಿ.ಕೆ.ಜಯಂತಿ, ಸುಷ್ಮಾ ಸುರೇಶ್‌, ದಾಕ್ಷಾಯಿಣಿ ಜಯರಾಮ್‌, ಕೃಷ್ಣಮೂರ್ತಿ, ಅನಂತರಾಮು ಮುಂತಾದವರು ಹಾಜರಿದ್ದರು.

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.