ಹೆಲ್ಮೆಟ್ ನಿರ್ಲಕ್ಷಿಸದಿರಿ: ನಂದೀಶ್
Team Udayavani, Oct 9, 2019, 5:30 PM IST
ಮಧುಗಿರಿ: ಜೀವ ಉಳಿಸುವ ಹೆಲ್ಮೆಟ್ ಯಾರೂ ನಿರ್ಲಕ್ಷಿಸಬಾರದು ಎಂದು ತಹಶೀಲ್ದಾರ್ ನಂದೀಶ್ ತಿಳಿಸಿದರು. ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ಹೆಲ್ಮೆಟ್ ಬಳಕೆ ಬಗ್ಗೆ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾನೂನು ಪಾಲಿಸುವುದು ಮಾತ್ರವಲ್ಲದೆ ಹೆಲ್ಮೆಟ್ ಜೀವ ಉಳಿಸಿ ಕುಟುಂಬ ಬೀದಿ ಪಾಲಾಗದಂತೆ ಕಾಪಾಡುತ್ತದೆ. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸಬಾರದು. ಅಪಘಾತವಾದಾಗ ತಲೆಗೆ ಮೊದಲು ಪೆಟ್ಟು ಬೀಳುತ್ತದೆ. ಹಾಗಾಗಿ ಎಲ್ಲರೂ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು. ಇದ ರಿಂದ ಕಾನೂನು ಪಾಲಿಸಿದಂತಾಗಲಿದ್ದು, ದಂಡದಿಂದ ಪಾರಾಗಬಹುದು ಎಂದರು.
ಡಿವೈಎಸ್ಪಿ ಧರಣೇಶ್ ಕುಮಾರ್ ಮಾತ ನಾಡಿ, ಹೆಲ್ಮೆಟ್ ನಿಮಗಲ್ಲದಿದ್ದರೂ ಕುಟುಂಬದ ನೆಮ್ಮದಿಗಾದರೂ ಧರಿಸಿ ವಾಹನ ಚಲಾಯಿಸಿ. ಇಲ್ಲವಾದರೆ ದಂಡ ವಸೂಲಿ ಮಾಡಲಾಗುತ್ತದೆ ಎಂದು ಎಚ್ಚರಿ ಸಿದರು. ಸಿಪಿಐ ದಯಾನಂದ ಶೇಗುಣಸಿ ಮಾತನಾಡಿ ಜೀವದ ಬೆಲೆ ಹಾಗೂ ಕುಟುಂಬದ ಕಷ್ಟ ತಿಳಿಸಲೆಂದು ಜಾಗೃತಿ ಮೂಡಿಸುವ ಕಾರ್ಯಕ್ಕೆ ಇಲಾಖೆ ಮುಂದಾಗಿದೆ ಎಂದರು.
ಪಿ ಎಸ್ ಐಗಳಾದ ರವೀಂದ್ರ, ಪಾಲಾಕ್ಷ , ಮಂಗಳಗೌರಮ್ಮ, ಎಎಸ್ಸೆ„ಗಳಾದ ರವಿಕುಮಾರ್, ತಾರಾಸಿಂಗ್, ಶ್ರೀನಿವಾಸ್, ಪೇದೆಗಳಾದ ಗಣೇಶ್, ನಟರಾಜು, ವಿನಯ್ಕುಮಾರ್, ಮಧು, ದಿನೇಶ್ನಾಯ್ಕ, ತೇಜರಾಜು, ಬೋರೆಗೌಡ, ಗಿರೀಶ್, ರಾಮಕೃಷ್ಣಪ್ಪ, ಗೋವಿಂದರಾಜು, ಕಲ್ಲೇಶಪ್ಪ, ಮಂಜುನಾಥ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕ ಬೆಂಕಿಗೆ ಅಡಿಕೆ, ಬಾಳೆ ಗಿಡಗಳು ನಾಶ… ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಆಕ್ರೋಶ
Pray for Rain: ಮಳೆಗಾಗಿ ಮಕ್ಕಳ ಮದುವೆ, ಊರಿಗೆಲ್ಲಾ ಊಟ!
Kunigal; ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ ಹಣ ದೋಚಿ ಪರಾರಿಯಾದ ದರೋಡೆಕೋರರು
ಸಂವಿಧಾನ ವಿರೋಧಿ ಹೇಳಿಕೆಯಿಂದ ಅನಂತ್ ಹೆಗಡೆಗೆ ಟಿಕೆಟ್ ತಪ್ಪಿದೆ: ಸೋಮಣ್ಣ
Lok Sabha Elections; ಶಾಂತಿಯುತ ಮತದಾನಕ್ಕೆ ಸಿದ್ದತೆ : ಡಿವೈಎಸ್ಪಿ ಓಂ ಪ್ರಕಾಶ್
MUST WATCH
ಹೊಸ ಸೇರ್ಪಡೆ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ