ಸೌಲಭ್ಯ ವಂಚಿತ ದಲಿತ ಕಾಲೋನಿ
Team Udayavani, Dec 7, 2019, 3:02 PM IST
ಬರಗೂರು: ಹುಲಿಕುಂಟೆ ಹೋಬಳಿ ದೊಡ್ಡಬಾಣಗೆರೆ ಗ್ರಾಮದ ದಲಿತ ಕಾಲೋನಿಯ ಜನತೆ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದರೂ ಸಂಬಂಧ ಪಟ್ಟವರು ಗಮನಹರಿಸದಿರುವುದರಿಂದ ಇಲ್ಲಿನ ನಿವಾಸಿಗಳ ಜೀವನ ದುಸ್ತರವಾಗಿದೆ.
ಕಾಲೋನಿಯಲ್ಲಿ ಶೌಚಗೃಹ ಮತ್ತು ಸ್ನಾನಗೃಹ ಇಲ್ಲದೇ ಅಂಗಳದ ಒಂದು ಮೂಲೆಯಲ್ಲಿ ಸ್ನಾನ ಮಾಡಬೇಕಾದ ಪರಿಸ್ಥಿತಿ ಇದೆ. ಇಕ್ಕಟ್ಟಾದ ಸಂದಿ ಗೊಂದಿಗಳು, ಗಲ್ಲಿಗಳು, ಅಂಗೈಯಷ್ಟು ಅಗಲದ ಮನೆಗಳಲ್ಲಿ ನಾಲ್ಕಾರು ಸಂಸಾರಗಳ ಜೀವನ ನಿರ್ವಹಣೆ ಇಲ್ಲಿನವರ ಪರಿಸ್ಥಿತಿಯಾಗಿದೆ. ಹುಲಿಕುಂಟೆ ಹೋಬಳಿ ತಾಲೂಕಿನ ಮುಖ್ಯ ರಾಜಕೀಯ ಕೇಂದ್ರವಾಗಿದ್ದು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಆಡಳಿತ ಎಲ್ಲವೂ ಇದ್ದರೂ, ಒಂದು ಕೇರಿಯ ಉದ್ಧಾರ ಆಗಿಲ್ಲ. ಜನಪ್ರತಿನಿಧಿಗಳು ದಲಿತ ನಿವಾಸಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ.
ಅವ್ಯವಸ್ಥೆ ಆಗರ: ಕೇರಿಯಲ್ಲಿ ಸುಮಾರು 120 ಮನೆ ಗಳಿದ್ದು, 400ಕ್ಕೂ ಹೆಚ್ಚಿನ ಜನ ಸಂಖ್ಯೆ ಇದೆ. ಮನೆಗಳ ನಡುವೆ ಗಲ್ಲಿ ಮಾದರಿ ರಸ್ತೆ ಇದ್ದರೆ, ಕೆಲವೆಡೆ ದ್ವಿಚಕ್ರ ವಾಹನ ಓಡಾಡುವುದೂ ದುಸ್ತರ ಎನ್ನುವಷ್ಟು ಕಿರಿದಾಗಿದೆ. ಇಲ್ಲಿನ ಬಹುತೇಕ ಮನೆಗಳಲ್ಲಿ ಸ್ನಾನಗೃಹವೇ ಇಲ್ಲ. ಇನ್ನು ಶೌಚಗೃಹ ಊಹಿಸಲೂ ಆಗದ ಸಂಗತಿ. ಪುರುಷರು ಹಗಲಿನಲ್ಲೇ ರಸ್ತೆ ಪಕ್ಕ ಸ್ನಾನ ಮಾಡುತ್ತಾರೆ.ಆದರೆ ಹೆಂಗಸರು ಸ್ನಾನ ಮಾಡಬೇಕೆಂದರೆ ರಾತ್ರಿ ಆಗುವವರೆಗೆ ಕಾಯಬೇಕು. ತಾತ್ಕಾಲಿಕವಾಗಿ ನಿರ್ಮಿಸಿಕೊಳ್ಳುವ ಸ್ನಾನಗೃಹಗಳಲ್ಲಿ ಕತ್ತಲಿನಲ್ಲಿ ಸ್ನಾನ ಮಾಡಬೇಕು. ಅದರಲ್ಲೂ ಒಂದು ಮನೆಯವರು ಮಾಡಿದ ಸ್ನಾನದ ನೀರು ಮತ್ತೂಂದು ಮನೆ ಮುಂಭಾಗಕ್ಕೆ ಹೋಗುವುದು ಸಾಮಾನ್ಯ. ಕೆಲವರು ಮನೆ ಮುಂದೆ ಗುಂಡಿ ನಿರ್ಮಿಸಿ ಸ್ನಾನದ ನೀರು ತುಂಬಿದ ಬಳಿಕ ಬಕೆಟ್ನಲ್ಲಿ ಸಂಗ್ರಹಿಸಿ ದೂರಕ್ಕೆ ಒಯ್ದು ಸಾಗಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಹಂಚಿಕೆಯಾಗದ ನಿವೇಶನ: ಕಾಲೋನಿಯ ಜನರ ಸಮಸ್ಯೆ ನಿವಾರಿಸುವ ಸಲುವಾಗಿ ಮಾಜಿ ಸಚಿವ ಜಯಚಂದ್ರ, ನಿವೇಶನ ಗಳಿಗೆ ಸ್ಥಳ ಗುರುತಿಸಿ, ಲೇಔಟ್ ಯೋಜನೆ ರೂಪಿಸಿದ್ದರು. ಆದರೆ ರಾಜಕೀಯ ಕಾರಣಗಳಿಂದ ವಸತಿ ಹೀನರಿಗೆ ಅದನ್ನು ಹಂಚಲಾಗಿಲ್ಲ. ನಿವೇಶನಗಳ ಕಡತ ತಾಲೂಕು ಪಂಚಾಯಿತಿ ಮಟ್ಟಕ್ಕೆ ಹೋಗಿ ವಾಪಸ್ ಬಂದಿದೆ. ಕಾರಣ ಕೇಳಿದರೆ ರಾಜೀವ್ಗಾಂಧಿ ವಸತಿ ನಿಗಮ ಸ್ಥಗಿತಗೊಂಡಿದೆ ಎನ್ನುತ್ತಾರೆ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಎಸ್.ಚಂದ್ರಪ್ಪ.
-ವೀರಭದ್ರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
ಆಕಸ್ಮಿಕ ಬೆಂಕಿಗೆ ಅಡಿಕೆ, ಬಾಳೆ ಗಿಡಗಳು ನಾಶ… ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಆಕ್ರೋಶ
Pray for Rain: ಮಳೆಗಾಗಿ ಮಕ್ಕಳ ಮದುವೆ, ಊರಿಗೆಲ್ಲಾ ಊಟ!
Kunigal; ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ ಹಣ ದೋಚಿ ಪರಾರಿಯಾದ ದರೋಡೆಕೋರರು
ಸಂವಿಧಾನ ವಿರೋಧಿ ಹೇಳಿಕೆಯಿಂದ ಅನಂತ್ ಹೆಗಡೆಗೆ ಟಿಕೆಟ್ ತಪ್ಪಿದೆ: ಸೋಮಣ್ಣ
MUST WATCH
ಹೊಸ ಸೇರ್ಪಡೆ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್