ರೈತರಿಂದ ರಾಗಿ ಖರೀದಿ: ಸಾಲುಗಟ್ಟಿ ನಿಂತ ವಾಹನಗಳು


Team Udayavani, Feb 1, 2023, 4:35 PM IST

ರೈತರಿಂದ ರಾಗಿ ಖರೀದಿ: ಸಾಲುಗಟ್ಟಿ ನಿಂತ ವಾಹನಗಳು

ಮಧುಗಿರಿ: ಮಧುಗಿರಿಯ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ರಾಗಿ ಖರೀದಿ ಜೋರಾಗಿದ್ದು, ಮಧ್ಯರಾತ್ರಿಯಿಂದಲೇ ಸಾಲುಗಟ್ಟಿ ನಿಂತಿದ್ದು, ರೈತರಿಗೆ ಅಗತ್ಯ ಸೌಲಭ್ಯವನ್ನು ಕಲ್ಪಿಸಬೇಕಿದೆ.

ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ ರಾಗಿ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಇದೇ ಮಾ.31 ರವರೆಗೂ ರೈತರಿಂದ ರಾಗಿ ಖರೀದಿ ಪ್ರಕ್ರಿಯೆ ನಡೆಯಲಿದೆ. ಉಪವಿಭಾಗದ ಮಧುಗಿರಿ, ಕೊರಟಗೆರೆ ಹಾಗೂ ಪಾವಗಡದ ರೈತರಿಂದ ರಾಗಿ ಖರೀದಿ ನಡೆಯುತ್ತಿದೆ. ಈಗಾಗಲೇ 23 ಸಾವಿರ ಕ್ವಿಂಟಲ್‌ ರಾಗಿ ಖರೀದಿಯು ನಡೆದಿದ್ದು, ಪ್ರತಿ ದಿನ 45 ರೈತರಿಗೆ ಟೋಕನ್‌ ನೀಡಿದ್ದು, ನಿಯಮಾನುಸಾರ ಖರೀದಿ ನಡೆಯಲಿದೆ ಎಂದು ಗೋದಾಮುವ್ಯವಸ್ಥಾಪಕ ಮುನಿರಾಜು ತಿಳಿಸಿದ್ದಾರೆ.

ರೈತರಿಗೆ ಅಗತ್ಯ ಸೌಲಭ್ಯಕ್ಕೆ ಆಗ್ರಹ: ಪ್ರತಿ ದಿನ 45 ರೈತರಿಂದ ರಾಗಿ ಖರೀದಿ ನಡೆಯಲಿದ್ದು, ರಾತ್ರಿಯಾದರೂ ಈ ಪ್ರಕ್ರಿಯೆ ಮುಗಿಯುತ್ತಿಲ್ಲ. ಮತ್ತೆ ಬೆಳಗ್ಗೆ ಹಿಂದಿನ ದಿನದಲ್ಲಿ ಬಾಕಿ ಉಳಿದ ರೈತರಿಂದ ರಾಗಿ ಪಡೆಯುತ್ತಿದ್ದು, ಬೆಳಗ್ಗೆ ಬಂದಂತಹ ರೈತರುಕಾಯಬೇಕಾಗಿದೆ. ನಿಯಮಾನುಸಾರ ರೈತರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕಿದ್ದು, ಅಲ್ಲಿಕುಡಿಯುವ ನೀರಿನ ಸೌಲಭ್ಯವಿಲ್ಲ. ರಾತ್ರಿ ಬಂದ ರೈತರು ತಮ್ಮ ರಾಗಿ ತಂದ ಟ್ರ್ಯಾಕ್ಟರ್‌ ಮೇಲೆ ಹಾಗೂ ಕೆಳಗಡೆ ಮಲಗುತ್ತಿದ್ದಾರೆ. ಇಂತಹ ಮೈ ಕೊರೆವ ಚಳಿಯಲ್ಲಿ ತಮ್ಮ ಫ‌ಸಲನ್ನು ಕಾಯಲು ರೈತರು ಸರತಿಯಂತೆ ನಿದ್ದೆಗೆ ಜಾರುತ್ತಾರೆ. ಇಂತಹ ಸಮಯದಲ್ಲಿ ತಾಲೂಕು ಆಡಳಿತ ರೈತರ ನೆರವಿಗೆ ಬರಬೇಕಿದ್ದು, ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಆರ್ಥಿಕ ಹೊರೆ: ನಾವು ಕಳೆದ ರಾತ್ರಿಯೇ ಬಂದಿದ್ದು, ವಾಹನವನ್ನು ನಿಲ್ಲಿಸಿಕೊಂಡು ಕಾಯುತ್ತಿದ್ದೇವೆ. ವಾಹನ ನಿಂತು ಟೈರ್‌ಗಳು ಹಾಳಾಗುತ್ತಿದ್ದು ಇದರಿಂದ ನಮಗೆ ಹೆಚ್ಚಿನ ಆರ್ಥಿಕ ಹೊರೆಬೀಳುತ್ತದೆ. ಬೇಗ ಅಧಿಕಾರಿಗಳು ರಾಗಿ ಖರೀದಿಪ್ರಕ್ರಿಯೆ ಮುಗಿಸಿದರೆ ಮನೆಗೆ ಹೋಗಲು ಸಹಕಾರಿಯಾಗುತ್ತದೆ ಎಂದು ನೀಲಗೊಂಡನಹಳ್ಳಿ ರೈತ ಲೋಕೇಶ್‌ ತಿಳಿಸಿದರು.

ರೈತರಿಂದ ಈಗಾಗಲೇ 23 ಸಾವಿರ ಕ್ವಿಂಟಲ್‌ ರಾಗಿ ಖರೀದಿಸಿದ್ದು,ಶೇಖರಣೆಗೆ ಅಗತ್ಯ ಸ್ಥಳವಿದೆ. ರೈತರಲ್ಲಿಯಾವುದೇ ಗೊಂದಲವಿಲ್ಲದೆ ಖರೀದಿಪ್ರಕ್ರಿಯೆ ನಡೆದಿದ್ದು, ಟೋಕನ್‌ ಪಡೆದರೈತರು ಸರತಿಯಲ್ಲಿ ಬಂದರೆ ಬೇಗಖರೀದಿಸಲಾಗುವುದು.ಮುನಿರಾಜ್‌, ಗೋದಾಮು ವ್ಯವಸ್ಥಾಪಕ

ರೈತರಿಂದ ರಾಗಿ ಪಡೆಯಲು ಪ್ರೂಟ್ಸ್‌ ಐಡಿಯಂತೆ ಕ್ರಮ ಕೈಗೊಳ್ಳಲಾಗಿದೆ. ಟೋಕನ್‌ ಪಡೆದಿರುವಯಾವುದೇ ರೈತರನ್ನು ವಾಪಸ್‌ ಕಳಿಸುತ್ತಿಲ್ಲ. 23 ಸಾವಿರ ಕ್ವಿಂಟಲ್‌ ಖರೀದಿಯಿಂದ ಉಪವಿಭಾಗದ ರೈತರಿಗೆಲಾಭವಾಗಿದೆ.ಗಣೇಶ್‌, ಆಹಾರ ಶಿರಸ್ತೇದಾರ್‌

ಟಾಪ್ ನ್ಯೂಸ್

pri-gh

ರಾಹುಲ್ ಗಾಂಧಿಯನ್ನು’ಮೀರ್ ಜಾಫರ್’ ಎಂದರು ; ಪ್ರಧಾನಿ ವಿರುದ್ಧ ಪ್ರಿಯಾಂಕಾ ಕಿಡಿ

U T KHADER

ರಾಹುಲ್ ಗಾಂಧಿ ಅನರ್ಹ ಪ್ರಕರಣ ಸಂಸದೀಯ ನಿಯಮ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ:ಯು.ಟಿ.ಖಾದರ್

Yatindra

ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ: ಡಾ.ಯತೀಂದ್ರ

1-sad-sad-d

64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ

swamiji ticket

ಬೆಂಗಳೂರಿನಲ್ಲಿ ನೇಕಾರರಿಗೆ ಟಿಕೆಟ್‌ನೀಡಲು ಸ್ವಾಮೀಜಿಗಳಿಂದ ಒತ್ತಾಯ

Dark-circle

ಮುಖದ ಅಂದ ಕೆಡಿಸುವ “ಡಾರ್ಕ್ ಸರ್ಕಲ್ಸ್” ನಿವಾರಣೆಗೆ ಈ ಮನೆಮದ್ದು ಬಳಸಿ…

Kharge (2)

ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqewq

ಕುಣಿಗಲ್:ಬೈಕ್ ಅವಘಡದಲ್ಲಿ ಇಂಜಿನಿಯರ್ ಸೇರಿ ಇಬ್ಬರ ಮೃತ್ಯು

ಉತ್ತರ ಪ್ರದೇಶದ ಸಿ.ಎಂ ಯೋಗಿ ಭೇಟಿಯಾದ ಮುನಿಯಪ್ಪ

ಚುನಾವಣಾ ಕಾವು: ಉತ್ತರ ಪ್ರದೇಶದ ಸಿ.ಎಂ ಯೋಗಿ ಭೇಟಿಯಾದ ಕೆ.ಎಂ ಮುನಿಯಪ್ಪ

ಮೋದಿ ಕಮಾಲ್‌ ಮುಂದೆ ಕಾಂಗ್ರೆಸ್‌ ಶೂನ್ಯ: ಜೆಪಿ ನಡ್ಡಾ ವಾಗ್ಧಾಳಿ

ಮೋದಿ ಕಮಾಲ್‌ ಮುಂದೆ ಕಾಂಗ್ರೆಸ್‌ ಶೂನ್ಯ: ಜೆಪಿ ನಡ್ಡಾ ವಾಗ್ಧಾಳಿ

kora

ಕೊರಟಗೆರೆಯ ದುಡ್ಡನಹಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಯಶಸ್ವಿ

korate

ಮಾದಿಗ ಸಮುದಾಯ ಡಾ.ಜಿ.ಪರಮೇಶ್ವರ್‌ ಜತೆಗಿದೆ:ಕಾಂಗ್ರೆಸ್ ಮುಖಂಡ ವಾಲೇಚಂದ್ರಯ್ಯ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

pri-gh

ರಾಹುಲ್ ಗಾಂಧಿಯನ್ನು’ಮೀರ್ ಜಾಫರ್’ ಎಂದರು ; ಪ್ರಧಾನಿ ವಿರುದ್ಧ ಪ್ರಿಯಾಂಕಾ ಕಿಡಿ

ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್‌ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ

ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್‌ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ

mangalore acc

ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್‌ ಡಿಕ್ಕಿ : ಬಾಲಕ ಮೃತ್ಯು

1-ewr-ew-rwer

ಪಳ್ಳಿ ಶ್ರೀ ಉಮಾಮಹೇಶ್ವರ- ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ

ನೇಕಾರ ಸಮ್ಮಾನ್‌ ಯೋಜನೆ; ಯುವಕನ ವಿಶಿಷ್ಟ ಕೃತಜ್ಞತೆ

ನೇಕಾರ ಸಮ್ಮಾನ್‌ ಯೋಜನೆ; ಯುವಕನ ವಿಶಿಷ್ಟ ಕೃತಜ್ಞತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.