ರಾಗಿ ಖರೀದಿಗೆ ಒತ್ತಾಯಿಸಿ ರೈತರಿಂದ ಧರಣಿ
Team Udayavani, Feb 13, 2021, 5:12 PM IST
ಹುಳಿಯಾರು: ರಾಗಿ ಖರೀದಿಗೆ ನಫೆಡ್ ಕೇಂದ್ರ ತೆರೆದು ತಿಂಗಳಾಗುತ್ತಿದ್ದರೂ ರಾಗಿ ಖರೀದಿಸದೆ ದಿನ ದೂಡುತ್ತಿರುವುದರಿಂದ ರೈತರಿಗೆ ತೊಂದರೆಯಾಗಿದ್ದು ತಕ್ಷಣ ರಾಗಿ ಖರೀದಿ ಮಾಡುವಂತೆ ರಾಜ್ಯ ರೈತ ಸಂಘ ( ಕೋಡಿಹಳ್ಳಿ ಚಂದ್ರಶೇಖರ್ ಬಣ ) ದಿಂದ ಶುಕ್ರವಾರ ಹುಳಿಯಾರು ಎಪಿಎಂಸಿ ಬಳಿ ಧರಣಿ ನಡೆಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ಮಾತನಾಡಿ, ಜನವರಿ ಮಾಹೆಯಲ್ಲಿ ರೈತರು ಕಣದಕೆಲಸ ಮುಗಿಸಿ ರಾಗಿ ಮಾರಲು ಸಿದ್ಧರಾಗಿರುತ್ತಾರೆ. ಈಸಂದರ್ಭದಲ್ಲಿ ನಫೆಡ್ ಕೇಂದ್ರ ತೆರೆದು ಬೆಂಬಲಬೆಲೆಯಲ್ಲಿ ರಾಗಿ ಖರೀದಿಸಿದರೆ ರೈತರಿಗೆ ಒಂದಿಷ್ಟು ಕೈಗೆಹಣ ಸಿಗುತ್ತದೆ. ಆದರೆ ಪ್ರತಿ ಸಲವೂ ಫೆಬ್ರವರಿ,ಮಾರ್ಚ್ ಮಾಹೆಯಲ್ಲಿ ರಾಗಿ ಖರೀದಿ ಆರಂಭಿಸುತ್ತಾರೆ.ಅಷ್ಟರಲ್ಲಾಗಲೇ ರೈತರು ಸಾಲಕ್ಕೆ ಹೆದರಿ ಕೇಳಿದಷ್ಟು ಬೆಲೆಗೆವರ್ತಕರಿಗೆ ರಾಗಿ ಮಾರುತ್ತಾರೆ. ಆಗ ವರ್ತಕರು ಈನಫೆಡ್ ಕೇಂದ್ರದ ಬೆಂಬಲ ಬೆಲೆಯ ಲಾಭ ಪಡೆಯುತ್ತಾರೆ ಎಂದು ಆರೋಪಿಸಿದರು.
ಒಂದು ಕ್ವಿಂಟಲ್ ರಾಗಿ ಬೆಳೆಯಲು ಕನಿಷ್ಠ ಆರೇಳು ಸಾವಿರ ರೂ. ಖರ್ಚು ಬರುತ್ತದೆ. ಹಾಗಾಗಿ ಸರ್ಕಾರಘೋಷಿಸಿರುವ ಬೆಂಬಲ ಬೆಲೆಯೂ ಸಹ ರೈತನ ಶ್ರಮಕ್ಕೆ ತಕ್ಕ ಬೆಲೆಯಲ್ಲ. ಆದರೂ ವಿಧಿಯಿಲ್ಲದೆ ಕೃಷಿ ಇಖಾಖೆ, ಎಪಿಎಂಸಿ, ಝೆರಾಕ್ಸ್ ಅಂಗಡಿಗಳಿಗೆ ಅಲೆದು ದಾಖ ಲಾತಿ ನೀಡಿದ್ದಾರೆ. ಆದರೂ ಖರೀದಿ ಆರಂಭಿಸದೆ ತಿಂಗಳಿಂದ ಹೆಸರು ನೋಂದಾಯಿಸುವ ನೆಪದಲ್ಲಿ ದಿನ ದೂಡುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳ ಮತ್ತು ಜನ ಪ್ರತಿ ನಿ ಧಿಗಳ ನಿರ್ಲಕ್ಷ್ಯವೇ ಕಾರಣವಾಗಿತ್ತು ರಾಗಿ ಖರೀದಿ ಆರಂಭಿಸುವರೆವಿಗೂಧರಣಿ ಹಿಂಪಡೆಯು ವುದಿಲ್ಲ ಎಂದು ಘೋಷಿಸಿದರು. ಹುಳಿಯಾರಿನ ರಾಗಿ ಖರೀದಿ ಅಧಿಕಾರಿ ಶಿವಶಂಕರ್ಅವರು ಧರಣಿ ಸ್ಥಳಕ್ಕೆ ಆಗಮಿಸಿ ರೈತರ ಅಹವಾಲು ಆಲಿಸಿ ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಚ್.ಎಂ.ಚನ್ನ ನಾಯಕ ಅವರಿಗೆ ಕರೆ ಮಾಡಿ ಧರಣಿ ಮಾಹಿತಿ ತಿಳಿಸಿದರು.
ಇದಕ್ಕೆ ಸ್ಪಂದಿಸಿದ ಅವರು ಮುಂದಿನ ವಾರ ಖಂಡಿತ ರಾಗಿ ಖರೀದಿ ಆರಂಭಿಸಲಿದ್ದ ಧರಣಿ ಹಿಂಪಡೆಯುವಂತೆಕೇಳಿಕೊಂಡರು. ಹಾಗಾಗಿ ಮುಂದಿನ ಮಂಗಳವಾರ ಖರೀದಿ ಆರಂಭಿಸದಿದ್ದರೆ ಅಹೋರಾತ್ರಿ ಧರಣಿ ನಡೆಸುವುದಾಗಿ ರೈತರು ಎಚ್ಚರಿಸಿ ಧರಣಿ ಹಿಂಪಡೆದರು.