ಮಧುಗಿರಿ: ಅಂತ್ಯೋದಯ ಅಕ್ಕಿ ನೀಡದೆ ಅಂಧ ವ್ಯಕ್ತಿಗೆ ವಂಚನೆ
Team Udayavani, Mar 19, 2022, 8:25 PM IST
ಮಧುಗಿರಿ: ತಾಲೂಕಿನ ಕೋಡ್ಲಾಪುರ ಗ್ರಾಮದ ವಿಎಸ್ ಎಸ್ ಎನ್ ನಲ್ಲಿರುವ ನ್ಯಾಯಬೆಲೆ ಅಂಗಡಿಯ ಮಾಲೀಕರಿಂದ ಅಂಧನೊಬ್ಬನಿಗೆ ಸರ್ಕಾರ ನೀಡುವ ಅಂತ್ಯೋದಯದ ಅಕ್ಕಿ -8 ಕೆ.ಜಿ.ಯಷ್ಟು ವಂಚನೆಯಾಗಿದೆ ಎಂದು ಫಲಾನುಭವಿ ಆರೋಪಿಸಿದ್ದು, ನ್ಯಾಯಕ್ಕಾಗಿ ಅಂಗಲಾಚಿದ್ದಾನೆ.
ಈತ ಸನಿಹದ ಗೋವಿಂದನಹಳ್ಳಿ ವಾಸಿ ರವಿಕುಮಾರ್ ಎಂದಾಗಿದ್ದು. ಈ ತಿಂಗಳು ನೀಡಿದ ಅಂತ್ಯೋದಯ ಅಕ್ಕಿ ನೀಡುವಲ್ಲಿ ವಂಚನೆ ಎಸಗಲಾಗಿದೆ. ತಾಲೂಕು ಆಹಾರ ಇಲಾಖೆ ಇಂತಹ ನ್ಯಾಯಬೆಲೆ ಅಂಗಡಿಗಳ ಮೇಲೆ ಆಗಾಗ ಪರಿಶೀಲನೆಗೆ ಬರಬೇಕಿದ್ದು, ಬಾರದ ಕಾರಣ ಇಂತಹ ಘಟನೆಗಳು ನಡೆಯುತ್ತಿದೆ. ಇಲಾಖೆಯಿಂದ ಈ ಅಂಧ ರವಿಕುಮಾರ್ ತನಗೆ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾನೆ.
ಈತನ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಅಧ್ಯಕ್ಷ ಸಿದ್ದಲಿಂಗೇಗೌಡ ಖಂಡಿಸಿದ್ದು, ಅಧಿಕಾರಿಗಳು ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿ. ಮಾನ್ಯ ಜಿಲ್ಲಾಧಿಕಾರಿ, ಮಧುಗಿರಿ ಉಪವಿಭಾಗಾಧಿಕಾರಿ ಹಾಗೂ ತಾಲೂಕು ತಹಶೀಲ್ದಾರ್ ರವರನ್ನು ಒತ್ತಾಯಿಸಿದ್ದಾರೆ.