ಎಚ್ಎಂಎಸ್ ಶಿಕ್ಷಣ ಸಂಸ್ಥೆಯಿಂದ ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ
Team Udayavani, May 30, 2021, 9:42 PM IST
ತುಮಕೂರು: ಕೊರೊನಾ ಸೋಂಕಿನಿಂದ ತಂದೆ-ತಾ ಯಿ ಇಬ್ಬರೂ ಮೃತಪಟ್ಟು ಅನಾಥವಾಗಿರುವ ಮಕ್ಕ ಳಿಗೆ ಎಚ್ಎಂಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣನೀಡು ವುದಾಗಿ ಎಚ್ಎಂಎಸ್ ಶಿಕ್ಷಣ ಸಂಸ್ಥೆಯನಿರ್ದೇಶಕ ಡಾ.ರಫಿಕ್ ಅಹಮದ್ ತಿಳಿಸಿದ್ದಾರೆ.
ಈಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಕೋವಿಡ್ಸೋಂಕು ಜಾಗತಿಕವಾಗಿ ಹರಡಲು ಆರಂಭವಾದಾಗಿನಿಂದ ಜನರು ಅನೇಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ಪೋಷಕರನ್ನು,ಅಣ್ಣ-ತಮ್ಮಂದಿರನ್ನು, ಮಡದಿ ಮಕ್ಕಳನ್ನು, ಸ್ನೇಹಿತರನ್ನು ಸೇರಿದಂತೆಜೀವನಾಧಾರವಾಗಿದ್ದ ವರನ್ನು ಕಳೆದುಕೊಂಡ ಜನರುಮಾನಸಿಕವಾಗಿ ನೊಂದು ಬಳಲುತ್ತಿರುವುದನ್ನು ಕಂಡರೆಮನಸ್ಸು ಭಾರವಾಗುತ್ತದೆ. ಅದರಲ್ಲೂ ತಂದೆ-ತಾಯಿಮೃತಪಟ್ಟು ಅನಾಥವಾಗಿರುವ ಮಕ್ಕಳ ಗೋಳಾಟಮತ್ತು ಅವರ ಭವಿಷ್ಯ ನೆನೆಸಿಕೊಂಡರೆ ಇನ್ನಿಲ್ಲದ ನೋವುನಮ್ಮನ್ನಾವರಿಸುತ್ತದೆ.
ಆದ್ದರಿಂದ ಅಂತಹ ಅನಾಥಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿಕೊರೊನಾ ಸೋಂಕಿನಿಂದ ತಂದೆ-ತಾಯಿ ಮೃತಪಟ್ಟುಅನಾಥವಾಗಿರುವ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಆರಂಭಿಸಿಎಂಜಿನಿಯರಿಂಗ್ ಪದವಿಯವರೆಗೆ ಎಚ್ಎಂಎಸ್ ಶಿಕ್ಷಣಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ನೀಡುವುದಾಗಿತಿಳಿಸಿದ್ದಾರೆ.