ಮೇವು ಬ್ಯಾಂಕ್ ಪ್ರಯೋಜನ ಪಡೆಯಿರಿ
ಬಾಗುವಾಳದಲ್ಲಿ ರೈತರಿಗೆ ತಹಶೀಲ್ದಾರ್ ಬಿ. ಆರತಿ ಸಲಹೆ
Team Udayavani, May 2, 2019, 12:49 PM IST
ತಿಪಟೂರು ತಾಲೂಕಿನ ಬಾಗುವಾಳದಲ್ಲಿ ಮೇವು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ತಹಶೀಲ್ದಾರ್ ಬಿ. ಆರತಿ ರೈತರಿಗೆ ಮೇವು ಕಾರ್ಡ್ ವಿತರಿಸಿದರು.
ತಿಪಟೂರು: ತಾಲೂಕಿನಲ್ಲಿ ಬರಗಾಲ ವಿದ್ದು, ಜಾನುವಾರುಗಳಿಗೆ ಮೇವು ಇಲ್ಲದ ಕಾರಣ ಮೇವು ಬ್ಯಾಂಕ್ ತೆರಿದಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಬಿ. ಆರತಿ ತಿಳಿಸಿದರು.
ತಾಲೂಕಿನ ಹೊನ್ನವಳ್ಳಿ ಹೋಬಳಿಯ ಬಾಗುವಾಳದ ಶ್ರೀಮುನಿಯಪ್ಪ ಆಲದ ಮರದ ಬಳಿ ಮೇವು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, ರೈತರಿಗೆ ಮತ್ತು ಜಾನುವಾರುಗಳಿಗೆ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ಪ್ರತಿ ಹೋಬಳಿಯ ಎರಡು, ಮೂರು ಕಡೆಗಳಲ್ಲಿ ಮೇವು ಬ್ಯಾಂಕ್ಗಳನ್ನು ತೆರೆಯಲಾಗುವುದು.
ಪ್ರತಿದಿನವೂ ಗೋ ಶಾಲೆಗೆ ಬಂದು ಹೋಗುವುದನ್ನು ತಪ್ಪಿಸುವ ಸಲುವಾಗಿ ಒಂದೇ ಬಾರಿ 15 ದಿನಗಳಿಗಾಗುವಷ್ಟು ಮೇವನ್ನು ನೀಡಲಾಗುವುದು ಎಂದು ಹೇಳಿದರು.
ಅರ್ಹ ರೈತರಿಗೆ ನ್ಯಾಯಯುತವಾಗಿ ತಲುಪಬೇಕಾದ ಮೇವು ಎಲ್ಲಿಯೂ ಲೋಪವಾಗದಂತೆ ಎಚ್ಚರಿಕೆ ವಹಿಸ ಲಾಗುವುದು. ರೈತರು ತಮ್ಮಲ್ಲಿರುವ ರಾಸುಗಳ ಮಾಹಿತಿ ಹಾಗೂ ಸಂಬಂಧಿ ಸಿದ ದಾಖಲೆಗಳನ್ನು ನೀಡಿ, ಮೇವು ಕಾರ್ಡ್ಗಳನ್ನು ಆಯಾ ವ್ಯಾಪ್ತಿಯ ಪಶು ಇಲಾಖೆಯಿಂದ ಪಡೆದು ಕೊಳ್ಳಬೇಕು. ರೈತರು ಪ್ರತಿ ಕಿ.ಲೋ ಮೇವಿಗೆ 2 ರೂ. ಮಾತ್ರ ಭರಿಸಬೇಕಿದ್ದು, ಮೇವು ವಿತರಣೆ ಗಾಗಿ ಎಲ್ಲಾ ರೀತಿಯ ವ್ಯವಸ್ಥೆ ಮಾಡ ಲಾಗಿದ್ದು ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ