ಅರಣ್ಯ ರಕ್ಷಿಸದಿದ್ದರೆ ಭವಿಷ್ಯವಿಲ್ಲ: ಸಚಿವ
Team Udayavani, Jun 14, 2020, 6:40 AM IST
ಗುಬ್ಬಿ: ಗಿಡಗಳನ್ನು ಬೆಳೆಸದೇ ಹಾಗೂ ಅರಣ್ಯಗಳನ್ನು ಸಂರಕ್ಷಿಸದೆ ಹೋದರೆ ಮುಂದಿನ ಭವಿಷ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ತಾಲೂಕಿನ ಕಡಬ ಹೋಬಳಿಯ ಮಾರಶೆಟ್ಟಿಹಳ್ಳಿ ಅರಣ್ಯ ವಲಯದಲ್ಲಿ ಶ್ರೀ ಗಂಧದ ಪ್ಲಾಂಟೆಷನ್ ವೀಕ್ಷಣೆ ಮತ್ತು ವನಮಹೋ ತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.
ವರ್ಷ ದಿಂದ ವರ್ಷಕ್ಕೆ ಅಂತರ್ಜಲದ ಮಟ್ಟ ಕುಸಿತ ಕಾಣುತ್ತಿದ್ದು, ರಾಜ್ಯದ 41 ಜಿಲ್ಲೆಗಳಲ್ಲಿ ಅಂತರ್ಜಲ ಕ್ಷೀಣಿಸಿದೆ. ನಮ್ಮ ಜಿಲ್ಲೆಯಲ್ಲಿಯೇ 6 ತಾಲೂಕುಗಳು ಸಂಪೂರ್ಣ ಅಂತರ್ಜಲ ಕಳೆದು ಕೊಂಡಿದೆ ಎಂದರು. ಕೇಂದ್ರ ಸರ್ಕಾರದಿಂದ 1,230 ಕೋಟಿಯಲ್ಲಿ ಅಂತರ್ಜಲ ಅಭಿವೃದಿಟಛಿ ಮಾಡಲು ನಾನಾ ಯೋಜನೆ ಮಾಡಲಾಗುತ್ತಿದೆ. ಅಂತರ್ಜಲ ಹೆಚ್ಚಾಗಬೇಕಾದರೆ ಮರಗಿಡಗಳನ್ನು ಬೆಳೆಸುವು ದರ ಮೂಲಕ ಅರಣ್ಯಗಳನ್ನು ಹೆಚ್ಚು ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.
ಕೊಬ್ಬರಿ ಬೆಲೆಯನ್ನು ನಫೆಡ್ ಮೂಲಕ ಖರೀದಿ ಮಾಡಿ 10,300 ರೂ. ಗಳ ದರ ನಿಗದಿ ಮಾಡಲಾಗುತ್ತಿದೆ. ಸರ್ಕಾರದಿಂದ 2 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಕೊಂಡುಕೊಳ್ಳಲು ಯೋಜನೆ ಮಾಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಉತ್ತರ ಭಾರತಕ್ಕೆ ಕೊಬ್ಬರಿ ಹೋಗುತ್ತಿಲ್ಲ ಹಾಗಾಗಿ ದಿನದಿಂದ ದಿನಕ್ಕೆ ಕೊಬ್ಬರಿ ಬೇಡಿಕೆ ಕಡಿಮೆಯಾಗಿದ್ದು, ದರ ಕಡಿಮೆಯಾಗಿದೆ ಎಂದರು. ಅರಣ್ಯ ಇಲಾಖೆ ಮಾತ್ರ ಕಾಡು ಬೆಳೆಸಬೇಕು ಎಂದರೆ ಅದು ಸಾಧ್ಯವಿಲ್ಲ.
ಇಲಾಖೆಯಿಂದ ಹಲವು ಜಾತಿಯ ಸಸಿಗಳನ್ನು ಪಡೆದುಕೊಂಡು ರೈತರು ತಮ್ಮ ಜಮೀನಿನ ಬದುಗಳಲ್ಲಿ ಖಾಲಿ ಜಾಗಗಳಲ್ಲಿ ಮರಗಳನ್ನು ಬೆಳೆಸಬೇಕು ಎಂದು ತಿಳಿಸಿದರು. ಜಿಲ್ಲಾ ಅರಣ್ಯಾಧಿಕಾರಿ ಗಿರೀಶ್, ನಾಗರಾಜು, ಎಸಿಎಫ್ ಸಂತೋಷ್ ನಾಯಕ್, ಸುರೇಂದ್ರ, ಸಾಮಾ ಜಿಕ ವಲಯ ಅರ ಣ್ಯಾಧಿಕಾರಿ ಜಿತೇಂದ್ರ, ತಾ.ವಲಯ ಅರಣ್ಯಾಧಿಕಾರಿ ಸಿ.ರವಿ, ಶಂಕರ್, ಕುತುಬುದ್ದೀನ್, ಶಂಕರ್, ಶ್ರೀಧರ್, ಬಿಜೆಪಿ ಮು ಖಂಡ ಎಸ್.ಡಿ. ದೀಲಿಪ್ ಕುಮಾರ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ