ಬೆಟ್ಟ ಇಳಿಯಲು ಆಗದೆ ತಂದೆ-ಮಗ ಪೊಲೀಸರ ಮೊರೆ


Team Udayavani, Jul 18, 2022, 3:36 PM IST

ಬೆಟ್ಟ ಇಳಿಯಲು ಆಗದೆ ತಂದೆ-ಮಗ ಪೊಲೀಸರ ಮೊರೆ

ಮಧುಗಿರಿ: ವಿಶ್ವದ 2ನೇ ಏಕಶಿಲಾ ಬೆಟ್ಟವಾದ ಮಧುಗಿರಿ ಬೆಟ್ಟವನ್ನು ಹತ್ತಿದ ತಂದೆ-ಮಗ ಮಳೆಬಂದಿದ್ದರಿಂದ ಹೆದರಿ ಪೊಲೀಸರ ಮೊರೆ ಹೋದ ಘಟನೆ ನಡೆದಿದೆ.

ಪಟ್ಟಣದಲ್ಲಿರುವ ಏಕಶಿಲಾ ಬೆಟ್ಟವನ್ನು ಏರಲುಪ್ರತಿ ಭಾನುವಾರ, ರಾಜ್ಯದ ಮೂಲೆ ಮೂಲೆಯಿಂದಚಾರಣಿಗರು ಬರುತ್ತಾರೆ. ಭಾನುವಾರ ಸಹಬೆಂಗಳೂರು ಮೂಲದ ವ್ಯಕ್ತಿಗಳು ಹೆಚ್ಚಿನಸಂಖ್ಯೆಯಲ್ಲಿ ಬೆಟ್ಟ ಹತ್ತಿದ್ದರು. ಆದರೆ ಮಧ್ಯಾಹ್ನದ ಹೊತ್ತಿಗೆ ಮಳೆಯ ವಾತಾವರಣ ಉಂಟಾಗಿದ್ದು,ಎಲ್ಲರೂ ಬೆಟ್ಟದಿಂದ ವಾಪಸ್‌ ಆಗಿದ್ದರು.

ಆದರೆ ಬೆಂಗಳೂರು ಮೂಲದ ತಂದೆ ಅರ್ಜುನ್‌ ರೆಡ್ಡಿ,ಮಗ ತರುಣ್‌ ಅವರು ಸಂಜೆವರೆಗೂ ಅಲ್ಲೇಇದ್ದರು. ಮದ್ಯಾಹ್ನ 3 ರ ನಂತರ ಸುರಿದ ಮಳೆಗೆ ಇಳಿಜಾರಿನಲ್ಲಿ ಬೆಟ್ಟ ಇಳಿಯಲು ಆಗದೆಆತಂಕಗೊಂಡಿದ್ದು, ಅಲ್ಲಿಂದಲೇ ಪೊಲೀಸರಿಗೆ ಕರೆ ಮಾಡಿ ರಕ್ಷಿಸುವಂತೆ ಮನವಿ ಮಾಡಿದ್ದಾರೆ.

ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿ: ತಕ್ಷಣ ಕಾರ್ಯ ಪ್ರವೃತ್ತರಾದ ಮಧುಗಿರಿ ಪಿಎಸ್‌ಐ ರಮೇಶ್‌ ಹಾಗೂ ಸಿಬ್ಬಂದಿಗಳಾದ ವೆಂಕಟೇಶ್‌, ರಾಜಕುಮಾರ್‌, ವಿಜಯಕುಮಾರ್‌, ಹರ್ಷ,ರಂಗೇಗೌಡ, ಕೊಟ್ರೇಶ್‌ ಇತರರು ಸ್ಥಳಕ್ಕೆ ಆಗಮಿಸಿ ಬಿರುಸಿನ ಕಾರ್ಯಾಚರಣೆ ನಡೆಸಿದ್ದು, ಸಂಜೆ 7 ರ ಹೊತ್ತಿಗೆ ತಂದೆ ಹಾಗೂ ಮಗನನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾದರು.

ಸೂಕ್ತ ಜಾಗೃತಿ ಮೂಡಿಸಬೇಕಿದೆ: ಹಿಂದೆ ಹಲವಾರು ಘಟನೆಗಳಲ್ಲಿ ಬೆಟ್ಟ ಹತ್ತಿದ ಟೆಕ್ಕಿಗಳು ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದರು. ಇಲ್ಲಿ ಪುರಾತತ್ವ ಇಲಾಖೆಯಿದ್ದು, ರಕ್ಷಣೆ ಹಾಗೂ ಪ್ರವಾಸಿಗರಿಗೆ ಅಗತ್ಯ ಮಾಹಿತಿ ನೀಡುತ್ತಿಲ್ಲ.ವಿಪರೀತ ಮಳೆ-ಗಾಳಿಯ ಸಮಯದಲ್ಲಿ ಚಾರಣಕ್ಕೆಅವಕಾಶ ನೀಡದೆ ಸೂಕ್ತ ಜಾಗೃತಿ ಮೂಡಿಸಬೇಕಿದೆ.ಆದರೆ ಬಾಗಿಲಲ್ಲಿನ ಕಾವಲುಗಾರ ಬಿಟ್ಟರೆ ಯಾರೂ ಅಗತ್ಯ ಮಾರ್ಗದರ್ಶನ ನೀಡುತ್ತಿಲ್ಲ.

ಪೊಲೀಸರು, ನಾಗರಿಕರಿಗೆ ಕೃತಜ್ಞತೆ :

ಕೆಳಗಿಳಿದ ಮೇಲೆ ಮಾತನಾಡಿದ ಅರ್ಜುನ್‌ ರೆಡ್ಡಿ, ಬೆಟ್ಟದ ಮೇಲೆ ಮಳೆ ಹಾಗೂ ವಿಪರೀತಗಾಳಿಯಿದ್ದ ಕಾರಣ ಆತಂಕವಾಗಿತ್ತು. ಮಳೆಕೂಡ ಹೆಚ್ಚಾದ ಕಾರಣ ಕೆಳಗೆ ಇಳಿಯಲುಸಾಧ್ಯವಾಗ ಲಿಲ್ಲ. ನಮ್ಮ ಕರೆಗೆ ಸ್ಪಂದಿಸಿದಪೊಲೀಸರು ತಕ್ಷಣ ನೆರವಿಗೆ ಧಾವಿಸಿದ್ದು,ಯಾವುದೇ ಸಮಸ್ಯೆಯಾಗ ದಂತೆ ಕರೆತಂದರು.ಅದಕ್ಕಾಗಿ ಮಧುಗಿರಿ ಪೊಲೀ ಸರಿಗೂ ಹಾಗೂರಕ್ಷಣೆ ಮಾಡುವಲ್ಲಿ ಸಹಕರಿಸಿ ಧೈರ್ಯತುಂಬಿದ ಮಧುಗಿರಿ ನಾಗರಿಕರಿಗೂ ಧನ್ಯವಾದಗಳನ್ನು ಹೇಳುವುದಾಗಿ ತಿಳಿಸಿದರು.

ಬೆಟ್ಟವು ಏಕಶಿಲೆಯಾಗಿದ್ದು, ಮಳೆ ಸಮಯದಲ್ಲಿ ಅಪಾಯಕಾರಿ. ಇಂತಹ ಸಮಯದಲ್ಲಿ ಚಾರಣ ಮಾಡದಿರುವುದು ಒಳ್ಳೆಯದು. ದಯಮಾಡಿ ಎಲ್ಲರೂ ಈ ಬಗ್ಗೆ ಜಾಗ್ರತೆ ವಹಿಸುವುದು ಅವಶ್ಯಕ. -ರಮೇಶ್‌, ಪಿಎಸ್‌ಐ

ಟಾಪ್ ನ್ಯೂಸ್

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ

Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.