ಇಸ್ಪೀಟು ಅಡ್ಡೆಯ ಮೇಲೆ ದಾಳಿ : ಕೊರಟಗೆರೆ ಪೊಲೀಸರಿಂದ 7 ಮಂದಿಯ ಬಂಧನ
Team Udayavani, Aug 28, 2022, 9:44 AM IST
ಕೊರಟಗೆರೆ: ಇಸ್ಪೀಟು ಅಡ್ಡೆಯ ಮೇಲೆ ಕೊರಟಗೆರೆ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ವಶಕ್ಕೆ ಪಡೆದು ಆರೋಪಿಗಳಿಂದ ನಗದು ಹಾಗೂ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ಇಸ್ಪೀಟು ಆಡುತ್ತಿರುವ ವಿಚಾರದಲ್ಲಿ ಕೊರಟಗೆರೆ ಠಾಣೆಗೆ ಬಂದ ಖಚಿತ ಮಾಹಿತಿ ಆಧಾರದ ಮೇಲೆ ಪಿಎಸ್ಐ ನಾಗರಾಜು.ರವರ ತಂಡವು ವಡ್ಡಗೆರೆ ಗ್ರಾಪಂಗೆ ಸೇರಿದ ಮಲ್ಲಪನಹಳ್ಳಿ ಗ್ರಾಮದ ವೆಂಕಟಪ್ಪನವರ ಮನೆಯ ಸಮೀಪದಲ್ಲಿರುವ ಸಾರ್ವಜನಿಕ ಸ್ಥಳಕ್ಕೆ ದಾಳಿ ನಡೆಸಿ ವೆಂಕಟಪ್ಪ ಸೇರಿದಂತೆ ಇತರೆ ಆರು ಜನ ಆರೋಪಿಗಳನ್ನು ಬಂಧಿಸಿರುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಆಟಕ್ಕೆ ಬಳಸಿದ 3640 ನಗದು ಹಣ ಹಾಗೂ 52 ಇಸ್ಪೀಟು ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಕೊರಟಗೆರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ನಾಗರಾಜು.ಬಿ ಮತ್ತು ಸಿಬ್ಬಂದಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಬಂಧಿತ ಅರೋಪಿಗಳನ್ಬು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
ಇದನ್ನೂ ಓದಿ : ಹಾನಿಗೊಳಗಾದ ರಸ್ತೆಗಳ ತುರ್ತು ದುರಸ್ತಿ :ದ.ಕ. ಜಿಲ್ಲೆಗೆ 12 ಕೋ.ರೂ., ಉಡುಪಿಗೆ 7.5 ಕೋ.ರೂ.