ಕೊರಟಗೆರೆ: ದಶಕಗಳ ನಂತರ ಕೋಡಿ ಬಿದ್ದ ತೀತಾ ಜಲಾಶಯ


Team Udayavani, Nov 25, 2021, 7:52 PM IST

Untitled-1

ಕೊರಟಗೆರೆ: ರೈತರ ಜೀವನಾಡಿ ಆಗಿರುವ ತೀತಾ ಜಲಾಶಯ ಮಳೆರಾಯನ ಕೃಪೆಯಿಂದ ದಶಕಗಳ ನಂತರ ಕೋಡಿ ಬಿದ್ದಿದೆ.

ದೇವರಾಯನ ದುರ್ಗದ ತಪ್ಪಲಿನಲ್ಲಿ ಉದಯಿಸುವ ಜಯ ಮಂಗಲಿ ನದಿ ಪಾತ್ರದ ಏಕೈಕ ಜಲಾಶಯ ಇದಾಗಿದೆ. ಜಯಮಂಗಲಿ ನದಿ ಹಾಗೂ ತೀತಾ ಜಲಾಶಯ ಕೊರಟಗೆರೆ ಕ್ಷೇತ್ರದ ಸಾವಿರಾರು ರೈತರಿಗೆ ನೀರಿನ ಅಸರೆಯಾಗಿದೆ.

ತಾಲ್ಲೂಕಿನ ಕೋಳಾಲ ಹೋಬಳಿ ಸುಪ್ರಸಿದ್ಧ ಗೊರವನಹಳ್ಳಿ ಮಹಾಲಕ್ಷ್ಮಿ ಪುಣ್ಯಕ್ಷೇತ್ರದ ಸಮೀಪ ಇರುವಂತಹ ಜಲಾಶಯ ಮಲೆನಾಡಿನ ಸೊಬಗನ್ನು ನಾಚಿಸುವಂತಿದೆ. ತೀತಾ ಜಲಾಶಯದ ತೂಬಿನ ಮಟ್ಟ 764ಮೀ ಇದೆ. ಎಡದಂಡೆ ಮತ್ತು ಬಲದಂಡೆಯ ತೂಬಿನ ನಾಲೆಯ ಮೂಲಕ20 ಕ್ಕೂ ಅಧಿಕ ಗ್ರಾಮದ ಸಾವಿರಾರು ರೈತರಿಗೆ ಇದರಿಂದ ನೀರಾವರಿ ಉಪಯೋಗವಾಗಲಿದೆ.

ತೀತಾ ಜಲಾಶಯದ ಬಲದಂಡೆಯ ತೂಬು ಮತ್ತು ನಾಲೆಯ ಮೂಲಕ ತೀತಾ, ವೆಂಕಟಾಪುರ, ಗಡ್ಡೋಬನಹಳ್ಳಿ, ಕಂಬದಹಳ್ಳಿ, ಮೇಳೆಹಳ್ಳಿ ಎಡದಂಡೆಯ ತೂಬು ಮತ್ತು ನಾಲೆಯ ಮೂಲಕ ಗೊರವನಹಳ್ಳಿ ಮಾದವಾರ , ತಿಮ್ಮನಹಳ್ಳಿ ತುಂಬುಗಾನಹಳ್ಳಿ, ಚಿಕ್ಕವಳ್ಳಿ ರಾಜಯ್ಯನಪಾಳ್ಯ,ಹೊನ್ನಾರನಹಳ್ಳಿ, ಕ್ಯಾಮೇನಹಳ್ಳಿ, ಬಿದಲೋಟಿ, ಹೊಳವನಹಳ್ಳಿ, ಕತ್ತಿನಾಗೇನಹಳ್ಳಿ ಗ್ರಾಮದ ರೈತರಿಗೆ ನೀರಾವರಿಯ ಅನುಕೂಲ ಕಲ್ಪಿಸಲಿದೆ.

ಕೊರಟಗೆರೆಯ ಕ್ಷೇತ್ರದ ಜೀವನಾಡಿ ಆದ ತೀತಾ ಜಲಾಶಯ ತುಂಬಿದ ಸಂತೋಷಕ್ಕೆ ಸ್ಥಳೀಯ ರೈತಾಪಿ ವರ್ಗ,ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಕರುನಾಡಿನ ಪ್ರವಾಸಿ ತಾಣವಾಗಿರುವ ಮಹಾಲಕ್ಷ್ಮಿ ದರ್ಶನಕ್ಕೆ ಆಗಮಿಸುವ ಸಾವಿರಾರು ಭಕ್ತಾದಿಗಳು ತೀತಾ ಜಲಾಶಯಕ್ಕೆ ಬರುತ್ತಿದ್ದಾರೆ. ತೀತಾ ಜಲಾಶಯದ ಕೋಡಿ ಬಿದ್ದ ನೀರು ಚಿಕ್ಕವಳ್ಳಿ ಧರ್ಮಸಾಗರ ಕೆರೆಗೆ ಹರಿಯುತ್ತಿದ್ದು ರೈತರ ಮುಖದಲ್ಲಿ  ಸಂತೋಷ ಮನೆ ಮಾಡಿದೆ.

ರೈತರ ಅನುಕೂಲಕ್ಕಾಗಿ ಜಯಮಂಗಲಿ ನದಿಪಾತ್ರಕ್ಕೆ ಅಡ್ಡಲಾಗಿ 1978ರಲ್ಲಿ ತೀತಾ ಜಲಾಶಯ ನಿರ್ಮಾಣವಾಗಿದೆ. 1991 ರಲ್ಲಿ ಕೋಡಿ ಬಿದ್ದಿದ್ದು ಎರಡು ದಶಕಗಳ ನಂತರ ಮೊದಲ ಸಲ ಕೋಡಿ ಬಿದ್ದಿದೆ. ಜಯಮಂಗಲಿ ನದಿಪಾತ್ರದ ಸಾವಿರಾರು ರೈತರಿಗೆ ನೀರಿನ ಅನುಕೂಲ ಆಗಲಿದೆ. ಸರ್ಕಾರಿ ಮತ್ತು ಹೇಮಾವತಿ ಇಲಾಖೆ ನಾಲೆಗಳ ಮೂಲಕ ರೈತರಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ.- ಮಾರುತಿ- ರೈತ  ತೀತಾ ಗ್ರಾಮ

ತೀತಾ ಜಲಾಶಯ ತುಂಬಿ ಕೋಡಿ ಬಿದ್ದ ಹಿನ್ನಲೆಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಜಲಾಶಯವನ್ನು ನೋಡಲು ನಿಷೇಧಿಸಲಾಗಿದೆ. ಜಲಾಶಯದ ಭದ್ರತೆಗಾಗಿ  ಇಬ್ಬರು ಪೋಲಿಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ.- ನಾಗರಾಜು ಪಿಎಸ್ಐ.ಕೊರಟಗೆರೆ.

 

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.