ಕೊರಟಗೆರೆ: ಬೆಳೆಗಾರರಿಗೆ ಖುಷಿ ನೀಡದ ಹಲಸಿನ ದಿನ
Team Udayavani, Jul 6, 2022, 5:41 PM IST
ಕೊರಟಗೆರೆ: ಪ್ರತಿ ವರ್ಷ ಜುಲೈ4 ರಂದು ಹಲಸಿನ ದಿನವಾಗಿ ಆಚರಣೆ ಮಾಡುವ ಸಂಪ್ರದಾಯ ಕೆಲವು ವರ್ಷಗಳಿಂದ ಪ್ರಾರಂಭವಾಗಿದೆ. ಆಸಕ್ತರು ಬೆಳೆಗಾರರು ಶುಭಾಶಯ ವಿನಿಮಯ ಮಾಡಿಕೊಂಡ ಖುಷಿ ಪಡುತ್ತಾರೆ.
ವಾಣಿಜ್ಯ ಬೆಳೆಯಾಗಿ ಪರಿವರ್ತನೆಯಾಗಿದ್ದ ಹಲಸು 6 ವರ್ಷಗಳ ನಂತರ ತೀವ್ರವಾಗಿ ಬೆಲೆ ಕುಸಿತ ಕಂಡು ಖರೀದಿದಾರರು ಇಲ್ಲದೇ ನೆಲಕ್ಕೆ ಬಿದ್ದು ಹಾಳಾಗುತ್ತಿದೆ.
ತೋವಿನಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತಿ ವರ್ಷ 400 ಟನ್ ಹಲಸು ಬೆಳೆಯಲಾಗುತ್ತದೆ. 250 ಟನ್ ಗೂ ಹೆಚ್ಚು ಎಳೆಕಾಯಿ ಹಾಗೂ 150 ಟನ್ ಗೂ ಹೆಚ್ಚು ಹಣ್ಣಿನ ಕಾಯಿ ಕಾಯಿ ಮಾರಾಟವಾಗುತ್ತದೆ.ಕೊರೊನಾ ಪ್ರಾರಂಭವಾದ ನಂತರ ಮಾರಾಟ ತೀವ್ರವಾಗಿ ಕುಸಿತವಾಗಿದೆ.
ಖರೀದಿ ಮಾಡುವವರು ಮತ್ತು ಹಲಸಿನ ಗಿಡದ ಕಾಯಿ ನೋಡಿ ಬೆಲೆ ಕಟ್ಟುತ್ತಾರೆ.ನೂರಾರು ಕಾಯಿಗಳಿರುವ ಎಳೆಕಾಯಿ ಇರುವ ಮರ 500 ರಿಂದ 1000 ರೂಗೆ ಮಾರಾಟವಾಗುತ್ತಿದೆ. ಬಲಿತ ಕಾಯಿ ಇದ್ದರೆ ಎರಡರಷ್ಟು ಬೆಲೆಗೆ ಖರೀದಿ ಮಾಡುತ್ತಾರೆ.
ಮಧ್ಯವರ್ತಿಗಳು ಹಲಸನ್ನು ತೂಕದಲ್ಲಿ ಖರೀದಿಸದೇ ಮಾರಾಟ ಮಾಡುವಾಗ ಕೆ.ಜಿ. ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ.ಕರಾವಳಿ ಮತ್ತು ಮಲೆನಾಡಿನಲ್ಲಿ ನಡೆಯುತ್ತಿರುವ ಹಲಸು ಮೇಳದಲ್ಲಿ ತುಮಕೂರು ಕಡೆಯವರು ಬಲಿತ ಹಲಸಿನ ಕಾಯಿ ಕೆ.ಜಿಗೆ 25ರಿಂದ 40ರೂವರೆಗೆ ಮಾರಾಟ ಮಾಡುತ್ತಾರೆ.
100 ಕಾಯಿ ಬಿಟ್ಟಿರುವ ಹಲಸಿನ ಮರದಿಂದ ಮೌಲ್ಯವರ್ಧನೆ ಮಾಡಿ ಮನೆಯಲ್ಲಿ ಉಪಯೋಗ ಮಾಡಿ ಪ್ರತಿ ವರ್ಷ 20 ಸಾವಿರ ಉಳಿಸಬಹುದು
ಎಳೆ ಕಾಯಿ, ಹಣ್ಣು, ಹಣ್ಣಿನ ತೊಳೆ ಬೀಜದಿಂದ ನೂರಾರು ರೀತಿಯ ಖಾದ್ಯ ಮಾಡಬಹುದು ಎನ್ನುತ್ತಾರೆ ಹಳ್ಳಿಸಿರಿ ಕಾರ್ಯದರ್ಶಿ ಜಿ.ಎಲ್ ಸುನೀತಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ
Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತೆಯರು
2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಈ ಬಾರಿ ಸೋಮಣ್ಣ ಗೆಲ್ಲಬೇಕು: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ