ಕೊರಟಗೆರೆ: ಕೆನರಾ ಬ್ಯಾಂಕಿನ ಸಿಸಿಟಿವಿಯೇ ಮಾಯ; ಕಳ್ಳತನಕ್ಕೆ ಯತ್ನ
ಬ್ಯಾಂಕಿನ ಆವರಣದಲ್ಲಿ ಕಸ ಕಡ್ಡಿಯಿಂದ ದುರ್ವಾಸನೆ
Team Udayavani, May 25, 2022, 2:47 PM IST
ಕೊರಟಗೆರೆ: ಕೆನರಾ ಬ್ಯಾಂಕಿನ ಕಚೇರಿ ಮತ್ತು ಆವರಣದ ಸಿಸಿ ಟಿವಿಯೇ ಮಾಯವಾಗಿದ್ದು, ಬ್ಯಾಂಕಿನ ಕಟ್ಟಡಕ್ಕೆ ಕಾಂಪೌಂಡು ಮತ್ತು ಕಿಟಿಕಿಯೇ ಇಲ್ಲದಾಗಿದೆ.
ಎಟಿಎಂ ಕೇಂದ್ರಕ್ಕೆ ಕಾವಲುಗಾರನ ಭದ್ರತೆಯ ಜತೆ ಬಾಗಿಲು ಇಲ್ಲದಿರುವ ಪರಿಣಾಮ ರಾತ್ರೋರಾತ್ರಿ ಕಳ್ಳನೋರ್ವ ಎಟಿಎಂ ಕೇಂದ್ರದೊಳಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಬೈರೇನಹಳ್ಳಿ ಗ್ರಾಮದ ಕೆನರಾ ಬ್ಯಾಂಕಿನ ಕಟ್ಟಡವು ಶಿಥಿಲವಾಗಿದ್ದು, ಕೌಂಪೌಂಡು ಒಡೆದು ವರ್ಷಗಳು ಕಳೆದಿವೆ. ಬ್ಯಾಂಕಿನ ಕಿಟಕಿಗಳು ಮುರಿದು ಬಿದ್ದಿವೆ. ಇನ್ನೂ ಬ್ಯಾಂಕಿನ ಸುತ್ತಮುತ್ತ ಗಿಡಗಳು ಬೆಳೆದುನಿಂತಿವೆ. ಬ್ಯಾಂಕಿನ ಆವರಣದಲ್ಲಿ ಕಸ ಕಡ್ಡಿಯಿಂದ ದುರ್ವಾಸನೆ ಬೀರುತ್ತಿದ್ದರೂ ಸಹ ಗ್ರಾ. ಪಂ. ಮತ್ತು ಬ್ಯಾಂಕಿನ ಅಧಿಕಾರಿವರ್ಗ ಮೌನವಹಿಸಿವೆ.
ಕೆನರಾ ಬ್ಯಾಂಕಿನ ಆವರಣದಲ್ಲಿಯೇ ಕೆನರಾ ಬ್ಯಾಂಕಿನ ಎಟಿಎಂ ಕೇಂದ್ರವಿದೆ. ಎಟಿಎಂ ಕೇಂದ್ರಕ್ಕೆ ಬಾಗಿಲು ಮತ್ತು ಭದ್ರತೆ ಎರಡು ಇಲ್ಲದಾಗಿದೆ. ಬ್ಯಾಂಕಿನ ಹೊರಗಡೆಯ ಸಿಸಿಟಿವಿ ಕೆಟ್ಟುಹೋಗಿದೆ. ಕಳ್ಳತರ ತಂಡವು ಇದನೆಲ್ಲ ನೋಡಿಯೇ ಬ್ಯಾಂಕಿನ ಹಿಂಬದಿಯಿಂದ ವಿದ್ಯುತ್ ಕೇಬಲ್ ಮತ್ತು ಸಿಸಿಟಿವಿಯನ್ನು ಒಡೆದು ಕಳ್ಳತನಕ್ಕೆ ಯತ್ನಿಸಿದ್ದಾರೆ.
ಬೈರೇನಹಳ್ಳಿ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಮಂಜುನಾಥ ಮಾತನಾಡಿ, ಎಟಿಎಂ ಜವಾಬ್ದಾರಿ ಎಪ್ಎಸ್ಎಸ್ ಕಂಪನಿಗೆ ನೀಡಲಾಗಿದೆ. ಏನೇ ಸಮಸ್ಯೆ ಆದರೂ ಅದಕ್ಕೆ ಅವರೇ ಹೋಣೆ. ಬಾಗಿಲು ಮತ್ತು ಕಾವಲುಗಾರ ಇಲ್ಲದೇ ಸಮಸ್ಯೆ ಸೃಷ್ಟಿಯಾಗಿದೆ. ನಮ್ಮ ಬ್ಯಾಂಕಿನ ಕೌಂಪೌಂಡು ಮತ್ತು ಕಿಟಿಕಿ ರಿಪೇರಿಯ ಬಗ್ಗೆ ಕಟ್ಟಡದ ಮಾಲೀಕರಿಗೆ ತಿಳಿಸಿದ್ದೇನೆ. ಬ್ಯಾಂಕಿನ ಹೊರಗಡೆಯ ಸಿಸಿಟಿವಿ ಕ್ಯಾಮರಾ ವನ್ನು ತಕ್ಷಣ ಸರಿಪಡಿಸುತ್ತೇವೆ ಎಂದು ಹೇಳಿದರು.
ಸ್ಥಳಕ್ಕೆ ಕೊರಟಗೆರೆ ಪಿಎಸೈ ನಾಗರಾಜು, ಮಂಜುಳ, ಎಎಸೈ ಗೋವಿಂದನಾಯ್ಕ ನೇತೃತ್ವದ ಪೊಲೀಸರ ತಂಡ ಸಿಸಿಟಿವಿ ಕ್ಯಾಮರಾವನ್ನು ಪರಿಶೀಲನೆ ನಡೆಸಿದ್ದಾರೆ. ನಂತರ ತುಮಕೂರು ಜಿಲ್ಲೆಯ ಶ್ವಾನದಳದ ತಂಡ ಭೇಟಿ ನೀಡಿದೆ. ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕ ಬೆಂಕಿಗೆ ಅಡಿಕೆ, ಬಾಳೆ ಗಿಡಗಳು ನಾಶ… ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಆಕ್ರೋಶ
Pray for Rain: ಮಳೆಗಾಗಿ ಮಕ್ಕಳ ಮದುವೆ, ಊರಿಗೆಲ್ಲಾ ಊಟ!
Kunigal; ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ ಹಣ ದೋಚಿ ಪರಾರಿಯಾದ ದರೋಡೆಕೋರರು
ಸಂವಿಧಾನ ವಿರೋಧಿ ಹೇಳಿಕೆಯಿಂದ ಅನಂತ್ ಹೆಗಡೆಗೆ ಟಿಕೆಟ್ ತಪ್ಪಿದೆ: ಸೋಮಣ್ಣ
Lok Sabha Elections; ಶಾಂತಿಯುತ ಮತದಾನಕ್ಕೆ ಸಿದ್ದತೆ : ಡಿವೈಎಸ್ಪಿ ಓಂ ಪ್ರಕಾಶ್
MUST WATCH
ಹೊಸ ಸೇರ್ಪಡೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ